ಹುಬ್ಬಳ್ಳಿ:
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್ಐಆರ್ ಪ್ರಕ್ರಿಯೆಯಲ್ಲಿ ಜಿಲ್ಲೆಯಲ್ಲಿ ಒಟ್ಟಾರೆ ಶೇ 59.67ರಷ್ಟು ಪ್ರಗತಿಯಾಗಿದ್ದರೆ, ಹು-ಧಾ ಸೆಂಟ್ರಲ್, ಪೂರ್ವ ಮತ್ತು ಪಶ್ಚಿಮ ಕ್ಷೇತ್ರಗಳಲ್ಲಿ ಶೇ. 43ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ವಿವರಿಸಿದರು.ನಮೂನೆ ವಿತರಣೆ ಎಲ್ಲೆಡೆ ಶೇ.100ರಷ್ಟು ಆಗಿದೆ. ಆದರೆ, ಡಿಜಿಟೈಲೇಷನ್ನಲ್ಲಿ ಶೇ.59.67ರಷ್ಟು ಪ್ರಗತಿಯಾಗಿದೆ. ನವಲಗುಂದದಲ್ಲಿ ಶೇ. 87.09, ಕುಂದಗೋಳ ಶೇ.71.14, ಧಾರವಾಡ ಶೇ.70.71, ಹು-ಧಾ ಪೂರ್ವ ಶೇ.51.33, ಹು-ಧಾ ಸೆಂಟ್ರಲ್ ಶೇ.43.95, ಹು-ಧಾ ಪಶ್ಚಿಮ ಶೇ.46.09 ಮತ್ತು ಕಲಘಟಗಿ ಕ್ಷೇತ್ರದಲ್ಲಿ ಶೇ. 68.26 ರಷ್ಟುಪ್ರಗತಿ ಆಗಿದೆ ಎಂದರು.
ಬಿಹಾರ, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ತನ್ನ ಗೆಲುವಿಗೆ ಬೇಕಾದ ಹಾಗೆ ಕಾಂಗ್ರೆಸ್ನ ಸಾಂಪ್ರದಾಯಿಕ ಮತದಾರರನ್ನು ಮತಪಟ್ಟಿಯಿಂದ ಹೊರಗೆ ಇಟ್ಟಿತ್ತು. ಇಲ್ಲೂ ಆ ರೀತಿಯ ಪ್ರಯತ್ನಗಳು ನಡೆಯುತ್ತಿವೆ. ಅದಕ್ಕೆ ಅವಕಾಶ ನೀಡದಂತೆ ಎಚ್ಚರ ವಹಿಸಬೇಕು. ಹಾಗಾಗಿ ಕಾಂಗ್ರೆಸ್ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಅರ್ಹ ಮತದಾರರನ್ನು ಹೊರಹೋಗದಂತೆ ತಡೆಯಲು ಎಲ್ಲ ಪ್ರಯತ್ನ ಮಾಡುತ್ತಿದೆ ಎಂದರು.ಬಿಎಲ್ಒ ಅಸಹಕಾರ:
ಧಾರವಾಡ ಗ್ರಾಮೀಣ ಜಿಲ್ಲಾಧ್ಯಕ್ಷ ಅನಿಲಕುಮಾರ ಪಾಟೀಲ, ಹು-ಧಾ ಮಹಾನಗರ ಅಧ್ಯಕ್ಷ ಅಲ್ತಾಫ್ ಹಳ್ಳೂರ, ಮಾಜಿ ಶಾಸಕರಾದ ಎಂ.ಎಸ್. ಅಕ್ಕಿ, ಕುಸುಮಾವತಿ ಶಿವಳ್ಳಿ, ಮುಖಂಡರಾದ ದೀಪಕ್ ಚಿಂಚೋರೆ, ಮೋಹನ್ ಹಿರೇಮನಿ, ಸೈಯದ್ ಅಹಮದ್, ಸದಾನಂದ ಡಂಗನವರ ಇತರರಿದ್ದರು.
ಫೋಟೋ: ಅಂಜಲಿ ನಿಂಬಾಳ್ಕರ್