ಸವಣೂರು: ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ, ಚರಂಡಿ ಸ್ವಚ್ಛತೆ ಹಾಗೂ ಕಸ ವಿಲೇವಾರಿ ಸಮಸ್ಯೆಯನ್ನು ತುರ್ತಾಗಿ ಪರಿಹರಿಸುವಂತೆ ಒತ್ತಾಯಿಸಿ ಮಂಗಳವಾರ ವಿಶ್ವ ಹಿಂದೂ ಪರಿಷತ್ ಹಾಗೂ ಸಾರ್ವಜನಿಕರು ಪ್ರತಿಭಟನಾ ಮೆರವಣಿಗೆ ಮೂಲಕ ಆಗಮಿಸಿ ಉಪವಿಭಾಗಾಧಿಕಾರಿ ವಿಜಯಕುಮಾರ ಎಚ್.ಬಿ. ಅವರಿಗೆ ಮನವಿಯನ್ನು ಸಲ್ಲಿಸಿದರು.
ನೀರು ಸರಬರಾಜು ಕೈಗೊಳ್ಳಬೇಕು ಹಾಗೂ ಚರಂಡಿಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸದ ಕಾರಣ ದುರ್ವಾಸನೆ, ಸೊಳ್ಳೆಗಳ ಕಾಟ ಹಾಗೂ ಸಾರ್ವಜನಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿರುವುದಾಗಿ ಆತಂಕ ವ್ಯಕ್ತಪಡಿಸಿದ್ದರು ಸಹ ಕಸ ವಿಲೇವಾರಿಯೂ ಸಮರ್ಪಕವಾಗಿ ನಡೆಯದೆ ನಾಗರಿಕರಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಸಾರ್ವಜನಿಕರ ಸಮಸ್ಯೆಗಳನ್ನು ತಕ್ಷಣ ಪರಿಶೀಲಿಸಿ, ಕುಡಿಯುವ ನೀರಿನ ಸಮರ್ಪಕ ಪೂರೈಕೆ, ಚರಂಡಿಗಳ ಸ್ವಚ್ಛತೆ ಹಾಗೂ ಕಸ ವಿಲೇವಾರಿಯನ್ನು ನಿಯಮಿತವಾಗಿ ನಡೆಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಅಗತ್ಯ ನಿರ್ದೇಶನ ನೀಡಿ ಶೀಘ್ರ ಕ್ರಮ ಕೈಗೊಳ್ಳುವಂತೆ ವಿಶ್ವ ಹಿಂದೂ ಪರಿಷತ್ ಸವಣೂರ ಹಾಗೂ ಸಾರ್ವಜನಿಕರು ಮನವಿಯಲ್ಲಿ ಒತ್ತಾಯಿಸಿದ್ದಾರೆ.ಪ್ರಮುಖರಾದ ಶಿವಪುತ್ರಪ್ಪ ಕಲಕೋಟಿ, ಪ್ರವೀಣ ಬಾಲೇಹೊಸೂರ, ಶಂಭುಲಿಂಗ ಕಣವಿ, ಹನಮಂತಗೌಡ ಮುದಿಗೌಡ್ರ, ಮಹೇಶ ಮುದಗಲ್, ಅರುಣ ಬಗರೇ, ಶ್ರೀನಿವಾಸ ಗಿತ್ತೆ, ಗಜಾನನ ರಾಶಿನಕರ, ವೀಣಾಬಾಯಿ ರಾಶಿನಕರ, ಶಶಿಕಲಾ ರಾಶಿನಕರ, ಸಾವಿತ್ರಿ ಹಿರೇಮಠ, ಚನ್ನಬಸಯ್ಯ ದುರ್ಗದಮಠ, ಮಹೇಶ ಜಡಿ, ಮಹಾದೇವ ಮಹೇಂದ್ರಕರ, ರಾಮಣ್ಣ ಅಗಸರ, ಮಂಜುನಾಥ ಹಂಚಾಟೆ, ಶ್ರೀಕಾಂತ ಲಕ್ಷ್ಮೇಶ್ವರ, ಮದುಕರ ಗಿತ್ತೆ, ಅಜ್ಜಪ್ಪ ಹಂಜಾಟೆ, ಸತೀಶ ಬಿಕ್ಕಣ್ಣವರ, ವಿನಾಯಕ ದೇಶಮನೆ, ಗುರುನಾಥ ಅಚಲಕರ, ಏಕನಾಥ ಮಹೇಂದ್ರಕರ, ಮಹಿಳೆಯರು ಹಾಗೂ ಇತರರು ಪಾಲ್ಗೊಂಡಿದ್ದರು.