ಕವಿತೆ ಗಾಳಿ ಇದ್ದಂತೆ, ಎಲ್ಲಾ ಕಡೆ ಇರುತ್ತದೆ

KannadaprabhaNewsNetwork |  
Published : Jun 21, 2025, 12:49 AM IST
1 | Kannada Prabha

ಸಾರಾಂಶ

ಕವಿತೆ ಎಂದರೆ ಕಲ್ಪನೆ, ಒಂದು ವಾಕ್ಯ, ಪದಗಳಲ್ಲಿ ಹೇಳಬಹುದು. ಕವಿತೆ ಗಾಳಿ ಇದ್ದಂತೆ, ಅದೂ ಎಲ್ಲಾ ಕಡೆಗಳಲ್ಲಿ ಇರುತ್ತದೆ ಎಂದು ಎಚ್.ಎಸ್. ಶಿವಣ್ಣ ತಿಳಿಸಿದರು.

ಕನ್ನಡಪ್ರಭ ವಾರ್ತೆ ಮೈಸೂರು

ಕವಿತೆ ಎಂದರೆ ಕಲ್ಪನೆ, ಒಂದು ವಾಕ್ಯ, ಪದಗಳಲ್ಲಿ ಹೇಳಬಹುದು. ಕವಿತೆ ಗಾಳಿ ಇದ್ದಂತೆ, ಅದೂ ಎಲ್ಲಾ ಕಡೆಗಳಲ್ಲಿ ಇರುತ್ತದೆ ಎಂದು ಎಚ್.ಎಸ್. ಶಿವಣ್ಣ ತಿಳಿಸಿದರು.

ನಗರದ ಜೆಎಲ್ ಬಿ ರಸ್ತೆಯಲ್ಲಿರುವ ರೋಟರಿ ಶಾಲೆಯ ಸಭಾಂಗಣದಲ್ಲಿ ಮೈಸೂರು ಬುಕ್ ಕ್ಲಬ್ಸ್ ಚಾರಿಟಬಲ್ ಟ್ರಸ್ಟ್ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕವಿತಾ ರತ್ನ ಅವರ ''''''''ಎವ್ರಿ ಪೆಕ್ ಎ ರೇನ್ಬೋ'''''''' ಕವನ ಸಂಕಲನವನ್ನು ಅವರು ಬಿಡುಗಡೆಗೊಳಿಸಿ ಮಾತನಾಡಿದರು.

ಭಗವದ್ಗೀತೆ, ಬೈಬಲ್, ಕುರಾನ್ ಅನ್ನೂ ಕವಿತೆಯ ಮೂಲಕ ಅರ್ಥೈಸಿಕೊಳ್ಳಬಹುದು. ಮಹಾಭಾರತ ದೀರ್ಘ ಕವನ. ಕವಿತೆಗಾಗಿ ರವೀಂದ್ರನಾಥ ಠಾಗೋರ್ ಅವರಿಗೆ ನೋಬೆಲ್‌ ಪ್ರಶಸ್ತಿ ಪಡೆದರು. ಪ್ರಪಂಚದ ಎಲ್ಲಾ ಭಾಷೆಗಳಲ್ಲೂ ಕವಿತೆ ಇದೆ. ಕವಿ ಕ್ರಿಯಾಶೀಲತೆ, ಭಾವನೆಗಳನ್ನು ಒಳಗೊಂಡಿರುತ್ತಾನೆ ಎಂದು ಅವರು ಹೇಳಿದರು.

ಎಲ್ಲಾ ಸಿನೆಮಾ ಹಾಡುಗಳು ಕವಿತೆ. ಶಾಲೆಗಳಲ್ಲಿ ಕಲಿಯುವ ರೈಮ್ಸ್ ಮನಸ್ಸಿನೊಳಗೆ ಉಳಿಯುತ್ತದೆ. ದೀರ್ಘ ಕಾವ್ಯಗಳನ್ನು ಈಚೆಗೆ ಜನ ಇಷ್ಟಪಡುವುದಿಲ್ಲ. ಆದರೆ, ಅಲ್ಲಿ ಅನೇಕ ಜೀವನಪಾಠಗಳು ದೊರೆಯುತ್ತವೆ. ಹೀಗಾಗಿ, ಹಾಡುಗಳನ್ನು ಇಷ್ಟ ಪಡುತ್ತಾರೆ. ಓದುಗ ಹಾಡಿನೊಂದಿಗೆ ಪ್ರಯಾಣಿಸುತ್ತಾನೆ ಎಂದರು.

ಇದೇ ವೇಳೆ ಕೃತಿಯ ಪ್ರತಿಗಳನ್ನು ಪ್ರೇಮಲತಾ ರತ್ನ, ವಿಜಯಾ ಸಿಂಧುವಳ್ಳಿ, ರತ್ನಾ ವಿಶ್ವನಾಥ್ ಅವರಿಗೆ ಸಮರ್ಪಿಸಲಾಯಿತು. ಕೃತಿ ಕುರಿತು ಬಿ.ಎನ್. ಬಾಲಾಜಿ ಮಾತನಾಡಿದರು. ಕೃತಿಯ ಕರ್ತೃ ಕವಿತಾ ರತ್ನ ಅವರೊಂದಿಗೆ ಲೇಖಕಿ ಕೃಷ್ಣ ಮನವಳ್ಳಿ ಸಂವಾದ ನಡೆಸಿದರು. ಅಜಿತ್ ರತ್ನ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ