ಕಾವ್ಯ ಮನಸ್ಸಿಗೆ ಮುದ ನೀಡುವಂತಿರಲಿ: ಪ್ರೊ. ಪೊಲೀಸಪಾಟೀಲ

KannadaprabhaNewsNetwork |  
Published : Oct 16, 2025, 02:01 AM IST
14ಎಂಡಿಜಿ2, ಮುಂಡರಗಿ ಕೆ.ಆರ್.ಬೆಲ್ಲದ ಕಾಲೇಜು ಸಭಾಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಜರುಗಿದ ಮಳೆ ಇಳೆ ಕವಿಗೋಷ್ಠಿ ಉದ್ಘಾಟಿಸಿ ಪ್ರೊ.ಆರ್.ಎಲ್.ಪೋಲಿಸಪಾಟೀಲ ಮಾತನಾಡಿದರು. | Kannada Prabha

ಸಾರಾಂಶ

ಕಾವ್ಯ ಹೇಗೆ ಯಾವಾಗ ಮತ್ತು ಏಕೆ ಹುಟ್ಟಿಕೊಳ್ಳುತ್ತದೆ ಎಂಬುದನ್ನು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಆದರೆ ಒಳಗಡೆ ಹುದುಗಿರುವ ಭಾವನೆಗಳು ಶಬ್ದರೂಪದಲ್ಲಿ ಹೊರಹೊಮ್ಮುತ್ತವೆ.

ಮುಂಡರಗಿ: ಜನಪದರ ಮನೆ ಅಂಗಳದಲ್ಲಿ ಹಾಡುಗಳಾಗಿ ಕಾವ್ಯ ಹುಟ್ಟಿಕೊಂಡಿದ್ದು, ದುಡಿದು ದಣಿದು ಬಂದಾಗ ಜನಪದರು ತಮ್ಮದೇ ಶೈಲಿಯಲ್ಲಿ ಸೃಷ್ಟಿಸಿದ ಆಡುಭಾಷೆಯ ಕಾವ್ಯಗಳು ಜನ್ಮತಾಳಿ ಜನಮನದಲ್ಲಿ ನೆಲೆ ನಿಂತವು ಎಂದು ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಪ್ರೊ. ಆರ್.ಎಲ್. ಪೊಲೀಸಪಾಟೀಲ ತಿಳಿಸಿದರು.ಸೋಮವಾರ ಸಂಜೆ ಪಟ್ಟಣದ ಕೆ.ಆರ್. ಬೆಲ್ಲದ ಕಾಲೇಜು ಸಭಾಭವನದಲ್ಲಿ ತಾಲೂಕು ಕಸಾಪ ಆಶ್ರಯದಲ್ಲಿ ಜರುಗಿದ ಮಳೆ ಇಳೆ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದರು.

ಕಾವ್ಯ ಹೇಗೆ ಯಾವಾಗ ಮತ್ತು ಏಕೆ ಹುಟ್ಟಿಕೊಳ್ಳುತ್ತದೆ ಎಂಬುದನ್ನು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಆದರೆ ಒಳಗಡೆ ಹುದುಗಿರುವ ಭಾವನೆಗಳು ಶಬ್ದರೂಪದಲ್ಲಿ ಹೊರಹೊಮ್ಮುತ್ತವೆ. ಕವಿಗಳ ನಿರಂತರ ಅಧ್ಯಯನ ಅಭ್ಯಾಸ ಮತ್ತು ತಮ್ಮಲ್ಲಿರುವ ಪ್ರತಿಭೆಯಿಂದ ಕಾವ್ಯ ರಚನೆ ಸಾಕಾರಗೊಂಡು ಮನಸ್ಸಿಗೆ ಮುದ ನೀಡುವಂತಿರಬೇಕು. ಸುತ್ತಲಿನ ಪರಿಸರ ವಿಷಯವಾಗಿ ಸಂದರ್ಭಕ್ಕೆ ಅನುಗುಣವಾಗಿ ಕಾವ್ಯ ರಚಿಸಲ್ಪಡುತ್ತವೆ ಎಂದರು.ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಡಾ.ನಿಂಗು ಸೊಲಗಿ ಮಾತನಾಡಿ, ಕಾವ್ಯ ಎಂಬುದು ಸುಲಭವಾಗಿ ಕಟ್ಟಲು ಸಾಧ್ಯವಿಲ್ಲ. ಕವಿತೆ ತಾನಾಗಿಯೇ ಹೊರಹೊಮ್ಮಿದಾಗ ಮಾತ್ರ ಪರಿಣಾಮ ಬೀರುತ್ತವೆ. ಮನದೊಳಗಿನಿಂದ ಬರುವದೇ ನಿಜ ಕಾವ್ಯ. ಒತ್ತಡದಲ್ಲಿ ಕವನ ರಚಿಸಲಾಗುವುದಿಲ್ಲ. ಕಾವ್ಯದಲ್ಲಿ ಅನಗತ್ಯ ಶಬ್ದಗಳನ್ನು ಬಿಟ್ಟು ಹೊಸ ಪರಿಕಲ್ಪನೆ ಕೊಡುವುದಾಗಬೇಕು ಎಂದರು.

ಪ್ರಾ. ಡಾ. ಸಂತೋಷ ಹಿರೇಮಠ ಮಾತನಾಡಿ, ಅಪಾರ ಅನುಭವದ ಕಾವ್ಯಗಳ ಒಡೆಯ ಕವಿಯಾಗಿದ್ದು, ಇದು ಯಾವುದರಿಂದ ಕೊಂಡುಕೊಳ್ಳದ ವಸ್ತುವಾಗಿದ್ದು, ನೈಜ ಸ್ಥಿತಿಯಲ್ಲಿ ಪ್ರಕೃತಿದತ್ತವಾಗಿ ಬರುತ್ತದೆ. ಕವಿಗಳು ಪ್ರಯಾಸದ ಕವನ ರಚಿಸುವ ಬದಲು ಸಹಜತೆಯಲ್ಲಿ ರಚನೆ ಮಾಡಬೇಕು ಎಂದರು.ಕವಿಗೋಷ್ಠಿಯಲ್ಲಿ ಕವಿಗಳಾದ ಶಂಕರ ಕುಕನೂರ, ರವಿ ದೇವರೆಡ್ಡಿ, ಶೋಭಾ ಮೇಟಿ, ಕಳಕಪ್ಪ ಜಲ್ಲಿಗೇರಿ ಮಳೆಯ ಅವಾಂತರ ಮತ್ತು ಮಳೆಯಿಂದ ಇಳಗೆ ಕಳೆ ಮತ್ತು ಸಕಲ ಸಮೃದ್ಧಿ ಎಂಬ ಆಶಯ ವ್ಯಕ್ತಪಡಿಸಿದರೆ, ಬಾರದ ಮಳೆಗೆ ನಿರೀಕ್ಷೆ ಮತ್ತು ಮಳೆ ಸೊಬಗು ಮತ್ತು ಸೌಂದರ್ಯ ಕುರಿತು ಕೊಟ್ರೇಶ ಜವಳಿ, ಸಿ.ಕೆ. ಗಣಪ್ಪನವರ, ಎಂ.ಎಸ್. ಶೀರನಹಳ್ಳಿ, ಹೊನ್ನಕಿರಣ, ಗಿರಿಜಾ ಸೂಡಿ, ಸಂತೋಷ ಮುರಡಿ ವ್ಯಕ್ತಪಡಿಸಿದರು.ವೀಣಾ ಪಾಟೀಲ ಅವರ ಮಳೆ ಇಳೆ ಮತ್ತು ಮಹಿಳೆ ಒಂದನ್ನೊಂದು ಬಿಟ್ಟಿರಲಾರದ ಮತ್ತು ಮಹಿಳೆಯನ್ನು ಮಳೆಗೆ ಹೋಲಿಸಿ ಪ್ರಸ್ತುತಪಡಿಸಿದ ಕವನ ಗಮನ ಸೆಳೆಯಿತು. ಡಾ. ಸಂತೋಷ ಹಿರೇಮಠ, ಡಾ. ನಿಂಗು ಸೊಲಗಿ, ಆರ್.ಎಲ್. ಪೊಲೀಸಪಾಟೀಲ ಅವರ ಕವನಗಳು ಕವಿಗಳಿಗೆ ಸ್ಫೂರ್ತಿಯಾದವು.ಕಸಾಪ ಅಧ್ಯಕ್ಷ ಪ್ರೊ. ಎಂ.ಜಿ. ಗಚ್ಚಣ್ಣವರ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಹಿತ್ಯ ಭವನ ನಿರ್ಮಾಣದ ಕೆಲಸ ಭಾಗಶಃ ಪೂರ್ಣಗೊಂಡಿದ್ದು, ಮುಂದೆ ಸಾಹಿತ್ಯದ ಚಟುವಟಿಕೆಗಳು ಅಲ್ಲಿಯೇ ನಡೆಯುತ್ತವೆ. ಸಾಹಿತ್ಯ ಭವನ ನಿರ್ಮಾಣಕ್ಕೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ತಿಳಿಸಿದರು.

ಕೃಷ್ಣಮೂರ್ತಿ ಸಾಹುಕಾರ, ರಮೇಶಗೌಡ ಪಾಟೀಲ, ಪಾಲಾಕ್ಷಿ ಗಣದಿನ್ನಿ, ಐ.ಎಸ್. ಮುಲ್ಲಾ, ಸುರೇಶ ಭಾವಿಹಳ್ಳಿ ಉಪಸ್ಥಿತರಿದ್ದರು. ಮಂಜುನಾಥ ಮುಧೋಳ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೀಣಾ ಪಾಟೀಲ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡಿಕೆಶಿ ಸಿಎಂ ಆದರೆ ನನಗೆ ಸಚಿವ ಸ್ಥಾನವೇ ಬೇಡ : ರಾಜಣ್ಣ
ದರ್ಶನ್‌ ಜೈಲಿಂದ ಹೊರಬರಲು ನಿತ್ಯ ಪ್ರಾರ್ಥಿನೆ: ನಟ ಜೈದ್‌