ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಪಟ್ಟಣದ ಬಸ್ ನಿಲ್ದಾಣದಲ್ಲಿ ಅಪರಾಧ ಪ್ರಕರಣಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಅಪರಿಚಿತರು ಕರೆ ಮಾಡಿ ನಿಮ್ಮ ಬ್ಯಾಂಕ್ ಅಕೌಂಟ್ ಲಾಕ್ ಹಾಗಿದೆ, ಎಟಿಎಂ ಕಾರ್ಡ್ ಬ್ಲಾಕ್ ಆಗಿದೆ. ಮರು ಚಾಲನೆ ಮಾಡಲು ಪಿನ್ ಸಂಖ್ಯೆ ಹೇಳಿ ಎಂದು ವಂಚಿಸುವರು, ಇಂತಹ ಕರೆಗಳಿಗೆ ಸ್ಪಂದಿಸಬಾರದು ಎಂದು ಸಲಹೆ ನೀಡಿದರು.
ಒಡವೆ ಲಾಕರ್ನಲ್ಲಿ ಇಡಿ:ಮನೆಗೆ ಬೀಗ ಹಾಕಿಕೊಂಡು ಮದುವೆ, ಪ್ರವಾಸ. ದೇವಸ್ಥಾನ, ಇನ್ನಿತರೆ ಕಾರ್ಯಕ್ರಮಗಳಿಗೆ ಹೋಗುವಾಗ ಚಿನ್ನಾಭರಣಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಬ್ಯಾಂಕ್ ಲಾಕರ್ನಲ್ಲಿ ಇಡುವುದು ಸುರಕ್ಷಿತ. ಇಲ್ಲವಾದಲ್ಲಿ ಮನೆಯಲ್ಲಿ ಯಾರನ್ನಾದರೂ ಒಬ್ಬ ಸದಸ್ಯರನ್ನು ಬಿಟ್ಟು ಹೋಗುವುದು ಉತ್ತಮ. ಮನೆ ಕೆಲಸಗಾರರನ್ನು ಇಟ್ಟುಕೊಂಡಲ್ಲಿ ಅವರ ಪೂರ್ವಾಪರಗಳ ಬಗ್ಗೆ ತಿಳಿದುಕೊಂಡಿರಬೇಕೆಂದರು.
ವಂಚಕರ ಮಾತು ನಂಬಬೇಡಿ:
ನಿಧಿ ತೆಗೆಸಲು ವಾಮಾಚಾರ ಮಾಡಿಸುವ, ಹೆಚ್ಚಿನ ಕಮಿಷನ್ ಆಸೆ ತೋರಿಸಿ ನೋಟು ಬದಲಾಯಿಸುವ, ಹಳೆ ಕಾಲದ ಚಿನ್ನದ ಬಿಸ್ಕತ್ತುಗಳನ್ನು ಅಗ್ಗದ ಬೆಲೆಗೆ ಮಾರುವುದಾಗಿ ನಂಬಿಸುವ ಮೋಸಗಾರರನ್ನು ನಂಬಬೇಡಿ ಎಂದು ಹೇಳಿದರು. ಪೊಲೀಸ್ ಇನ್ಸ್ಪೆಕ್ಟರ್ ಆರ್.ದಯಾನಂದ್, ಸಬ್ ಇನ್ಸ್ಪೆಕ್ಟರ್ ರಾಜಣ್ಣ, ಸಿಬ್ಬಂದಿ ಸೀತಾರಾಮ್ ಸಿಂಗ್, ಎಸ್ಬಿ ಎಂ.ಮಂಜುನಾಥ್ ಇತರರು ಇದ್ದರು.