ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಇಂತಹದ್ದೊಂದು ಹಸಿರು ಕನಸು ಸಾಕಾಗರಗೊಳ್ಳಲಿ ಎಂಬ ನಿಜದನಿಯ ಆಶಯ ಹಿಂದಳಿದ, ದಲಿತ ಮಠಾಧೀಶರ ಒಕ್ಕೂಟದ ಆಂತರ್ಯದಿಂದ ಹೊರ ಹೊಮ್ಮಿದೆ. ಇದಕ್ಕಾಗಿ ಸಾವಿರಾರು ಕಿಮೀ ದೂರದ ಹಿಮಾಲಯದ ತಪ್ಪಲಿನಲ್ಲಿ ಮಂಗಳವಾರ ವಿಶೇಷ ಪ್ರಾರ್ಥನೆಗಳು ನಡೆದಿವೆ. ರಾಜಋಷಿ ಭಗೀರಥ ಮಹರ್ಷಿಗಳ ಜಯಂತಿ ಆಚರಣೆಯೊಟ್ಟಿಗೆ ಬಯಲು ಸೀಮೆಗೆ ಮಳೆ ಸುರಿಯಲ್ಲಿ ಎಂಬ ಮನದಾಳದ ದನಿಗಳು ಮಾರ್ದನಿಸಿವೆ.
ಚಿತ್ರದುರ್ಗ ನೆಲವ ಕೇಂದ್ರವಾಗಿರಿಸಿಕೊಂಡು ಕಾರ್ಯ ನಿರ್ವಹಿಸುತ್ತಿರುವ ಹಿಂದುಳಿದ, ದಲಿತ ಮಠಾಧೀಶರ ಒಕ್ಕೂಟದ ಪದಾಧಿಕಾರಿಗಳು ಜಮ್ಮು ಕಾಶ್ಮೀರ, ಮನಾಲಿ ಸೇರಿದಂತೆ ಹಲವು ಪ್ರದೇಶಗಳಿಗೆ ಪ್ರವಾಸ ಕೈಗೊಂಡಿದ್ದಾರೆ. ಸೋಮವಾರ ರಾತ್ರಿ ಬೆಂಗಳೂರಿನಿಂದ ಹೊರಟ ಮಠಾಧೀಶರುಗಳು ಮಂಗಳವಾರ ಮುಂಜಾನೆ ವೇಳೆಗೆ ಜಮ್ಮತಲುಪಿ ನಂತರ ಹಿಮಾಲಯದ ತಪ್ಪಲಿನಲ್ಲಿ ಸುತ್ತಾಟ ಆರಂಭಿಸಿದ್ದಾರೆ.ಭಗೀರಥ ಜಯಂತಿ ನೆನಪು ಮಾಡಿಕೊಂಡು ಮಠಾಧೀಶರು ಹಿಮಾಲಯದ ತಪ್ಪಲಿನಲ್ಲಿಯೋ ಫೋಟೋ ಇಟ್ಟು ಜಯಂತಿ ಆಚರಿಸಿದ್ದಾರೆ. ಭಗೀರಥನ ಬದ್ದತೆ, ಹಠ, ಕಾರ್ಯಸೂಚಿ, ಸಾಧನೆಗಳ ವಿಸ್ತೃತಗಳ ಹರವಿ ಚರ್ಚಿಸಿದ್ದಾರೆ. ಕಠಿಣ ತಪಸ್ಸಿನ ಮೂಲಕ ದೇವಗಂಗೆ, ಬ್ರಹ್ಮದೇವ, ಪರಮೇಶ್ವರರನ್ನು ಒಲಿಸಿಕೊಂಡು ದೇವಗಂಗೆಯನ್ನು ಧರೆಗಿಳಿಸಿದ್ದನ್ನು ಸ್ಮರಿಸಿದ್ದಾರೆ.
ಭಗಿರಥ ಪೀಠದ ಶ್ರೀ ಪುರುಷೋತ್ತಮಾನಂದಪುರಿ ಮಹಾಸ್ವಾಮಿಗಳು,ಕನಕ ಗುರುಪೀಠದ ನಿರಂಜನಾನಂದಪುರಿ ಮಹಾಸ್ವಾಮೀಜಿಗಳು, ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಮಹಾಸ್ವಾಮಿಗಳು ,ಹೊಸದುರ್ಗ ಕುಂಚಿಟಿಗ ಮಹಾಸಂಸ್ಥಾನ ಮಠದ ಶ್ರೀ ಶಾಂತವೀರ ಮಹಾಸ್ವಾಮಿಗಳು,ಮಾದರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಮಹಾಸ್ವಾಮಿಗಳು,ಮಡಿವಾಳ ಗುರು ಪೀಠದ ಬಸವ ಮಾಚಿದೇವ ಸ್ವಾಮಿಗಳು,ನಾರಾಯಣ ಗುರುಪೀಠದ ರೇಣುಕಾನಂದ ಮಹಾಸ್ವಾಮಿಗಳು,ಕುಂಬಾರ ಗುರು ಪೀಠದ ಕುಂಬಾರಗುಂಡಯ್ಯ ಮಹಾಸ್ವಾಮಿಗಳು, ಹಡಪದ ಗುರುಪೀಠದ ಅನ್ನದಾನಿ ಭಾರತೀಯ ಅಪ್ಪಣ್ಣ ಸ್ವಾಮಿಗಳು, ಮೇದಾರ ಗುರು ಪೀಠದ ಶ್ರೀ ಕೇತೇಶ್ವರ ಮಹಾಸ್ವಾಮಿಗಳು.