ಪಪಂ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯಲ್ಲಿ ತನ್ನನ್ನು ಪರಿಗಣನೆಗೆ ಪಡೆದಿಲ್ಲ: ನಬಿ

KannadaprabhaNewsNetwork |  
Published : Aug 19, 2024, 12:45 AM IST
ಮಾಜಿ ಸಚಿವ ಎನ್.ಎಂ.ನಬಿ ಭಾವಚಿತ್ರ  | Kannada Prabha

ಸಾರಾಂಶ

ಅಲ್ಪಸಂಖ್ಯಾತರ ಮತಗಳು ಬೇಕು. ಆದರೆ ಅವರ ಪರಿಗಣನೆ ಮಾತ್ರ ಬೇಡ. ಅವರನ್ನು ಸುಲಭವಾಗಿ ಮೂರ್ಖರನ್ನಾಗಿ ಮಾಡಬಹುದು.

ಕೂಡ್ಲಿಗಿ: ಅಲ್ಪಸಂಖ್ಯಾತರ ಮತಗಳು ಬೇಕು. ಆದರೆ ಅವರ ಪರಿಗಣನೆ ಮಾತ್ರ ಬೇಡ. ಅವರನ್ನು ಸುಲಭವಾಗಿ ಮೂರ್ಖರನ್ನಾಗಿ ಮಾಡಬಹುದು ಎಂದು ಕೂಡ್ಲಿಗಿ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ತಿಳಿದುಕೊಂಡಿದ್ದಾರೆ. ಕೂಡ್ಲಿಗಿ ಪಪಂ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಚುನಾವಣೆ ಆ.19ರಂದು ನಡೆಯಲಿದ್ದು, ಈ ಬಗ್ಗೆ ನನ್ನ ಅಭಿಪ್ರಾಯಗಳಿಗೆ ಮನ್ನಣೆ ನೀಡದೇ ಕಡೆಗಣಿಸಿರುವುದು ಬೇಸರ ತಂದಿದೆ ಎಂದು ಕೂಡ್ಲಿಗಿ ಮಾಜಿ ಸಚಿವ ಎನ್.ಎಂ.ನಬಿ ದೂರಿದರು.ಅವರು ಭಾನುವಾರ ಸಂಜೆ ಪಟ್ಟಣದ ಅವರ ನಿವಾಸದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೂಡ್ಲಿಗಿ ಪಪಂ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ನಡೆಯಲಿದೆ. ಈ ಬಗ್ಗೆ ಚರ್ಚಿಸಲು ಶಾಸಕರು ನಮ್ಮ ನಿವಾಸಕ್ಕೆ ಆ.12ರಂದು ಬಂದಿದ್ದರು. ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಬಗ್ಗೆ ನಾನು ಕೆಲವು ಸಲಹೆಗಳನ್ನು ನೀಡಿದ್ದೆ. ಆದರೆ ಇಲ್ಲಿವರೆಗೂ ನನ್ನ ಅಭಿಪ್ರಾಯಗಳಿಗೆ ಮನ್ನಣೆ ನೀಡದೇ ಇರುವುದು ಬೇಸರ ತಂದಿದೆ ಎಂದರು.

ಒಂದೇ ಪಕ್ಷದಲ್ಲಿ ನಾವಿದ್ದು ನನ್ನ ಬೆಂಬಲಿಗ ಸದಸ್ಯರು ಐವರು ಇದ್ದಾರೆ. ಕಾಂಗ್ರೆಸ್ ಬೆಂಬಲಿಗ ಏಳು ಶಾಸಕರು ಇದ್ದಾರೆ. 20 ಸದಸ್ಯರಲ್ಲಿ 17 ಸದಸ್ಯರು ನಮ್ಮವರೇ ಇರುವುದರಿಂದ ಪಪಂನಲ್ಲಿ ಕಾಂಗ್ರೆಸ್ ಆಡಳಿತ ನಡೆಸಲು ಸಾಕಾಗಿತ್ತು ಎಂದು ನಾನು ಶಾಸಕರಿಗೆ ತಿಳಿಸಿದ್ದೆ. ಎರಡು ದಿನಗಳಲ್ಲಿ ಬರುತ್ತೇನೆ, ಚರ್ಚೆ ಮಾಡೋಣ ಎಂದು ನಮ್ಮ ಮನೆಗೆ ಬಂದು ಹೋದ ಶಾಸಕರು ಈವರೆಗೂ ಬಾರದೇ ಇರುವುದನ್ನು ನೋಡಿದರೆ ಅವರು ಹಿರಿಯರ ಬಗ್ಗೆ ನಿರ್ಲಕ್ಷ್ಯವಹಿಸಿದ್ದರಾರೆ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಯುವ ಮುಖಂಡ ಎನ್.ಎಂ. ನೂರ್ ಆಹಮದ್ ಹಾಗೂ ಅವರ ಬೆಂಬಲಿಗರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಲವು ಜಿಲ್ಲೆಗಳಲ್ಲಿ ಶೀತಗಾಳಿ ತಾಪಮಾನ 5-7 ಡಿಗ್ರಿ ಇಳಿಕೆ
‘ಬಾಡಿಗೆ ತಾಯ್ತನ’ದಿಂದ ಮಗು : ವೃದ್ಧ ದಂಪತಿಯಿಂದ ಕೋರ್ಟ್‌ ಮೊರೆ