ಅಂಬೇಡ್ಕರ್ ಜಯಂತಿ ಕುರಿತ ಸಭೆ ಮುಂದೂಡಿದ ಕ್ರಮ ಸರಿಯಲ್ಲ: ಶೇಖರ್

KannadaprabhaNewsNetwork |  
Published : Apr 03, 2025, 12:34 AM IST
2ಕೆಜಿಎಲ್ 28ಕೊಳ್ಳೇಗಾಲದ ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದ್ದ ಸುದ್ಜಿಗೋಷ್ಠಿಯಲ್ಲಿ ಶೇಖರ ಬುದ್ದ ಮಾತನಾಡಿದರು. | Kannada Prabha

ಸಾರಾಂಶ

ಅಂಬೇಡ್ಕರ್ ಅವರ ಜಯಂತಿ ಆಚರಣೆ ಸಂಬಂಧ ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಮತ್ತು ತಹಸಿಲ್ದಾರ್ ಬಸವರಾಜು ಅವರು ಸಭೆ ಮುಂದೂಡಿದ ಕ್ರಮ ಸರಿಯಲ್ಲ ಎಂದು ಪ್ರಗತಿಪರ ವೇದಿಕೆಯ ಸಂಚಾಲಕ ಶೇಖರ ಬುದ್ದ ಹೇಳಿದರು.

ಕನ್ನಡಪ್ರಭ ವಾರ್ತೆ, ಕೊಳ್ಳೇಗಾಲ

ಅಂಬೇಡ್ಕರ್ ಅವರ ಜಯಂತಿ ಆಚರಣೆ ಸಂಬಂಧ ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಮತ್ತು ತಹಸಿಲ್ದಾರ್ ಬಸವರಾಜು ಅವರು ಸಭೆ ಮುಂದೂಡಿದ ಕ್ರಮ ಸರಿಯಲ್ಲ ಎಂದು ಪ್ರಗತಿಪರ ವೇದಿಕೆಯ ಸಂಚಾಲಕ ಶೇಖರ ಬುದ್ದ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಶಾಸಕರು ಸಭೆ ಮುಂದೂಡಿ ಕಪ್ಪಡಿ ಹಾಗೂ ಗುಂಬಳ್ಳಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಬಾಬಾ ಸಾಹೇಬರಿಗೆ ಅವಮಾನ ಮಾಡಿದ್ದಾರೆ. ಇದರಿಂದ ಅಂಬೇಡ್ಕರ್ ಅವರು ಅನುಯಾಯಿಯಾದ ಸಾವಿರಾರು ಮಂದಿಗೆ ನೋವುಂಟಾಗಿದೆ. 14ರಂದು ಜಯಂತಿ ಆಚರಣೆ ಸಂಬಂಧ ಇನ್ನು ಸಹ ಸಭೆ ಕರೆದಿಲ್ಲ, ಹಾಗಾಗಿ ಸಭೆ ನಡೆಸುವುದು, ಬಿಡುವುದು ಶಾಸಕರಿಗೆ ಬಿಟ್ಟ ವಿಚಾರ. ಆದರೆ ಶಾಸಕರು ಮತ್ತು ತಹಸೀಲ್ದಾರ್ ಅವರು ಸಭೆಗೂ ಮುನ್ನ ಅಂಬೇಡ್ಕರ್ ಅನುಯಾಯಿಗಳನ್ನು ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.

ನಾನು ಅನೇಕ ಜನಪರ ಹೋರಾಟಗಳನ್ನು ನಡೆಸುವ ಮೂಲಕ ಅನೇಕ ಸಮಸ್ಯೆಗಳಿಗೆ ಸ್ಪಂದಿಸಿರುವೆ ಎಂದರು.

ಈ ವೇಳೆ ಸುಮಂತ್, ರಂಜನ್ ಇನ್ನಿತರರು ಇದ್ದರು

--

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ