ಕನ್ನಡಪ್ರಭ ವಾರ್ತೆ ಹುಣಸಗಿ
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮುಂಗಾರು ಮಳೆಗಾಲದಲ್ಲಿ ಗಾಳಿ, ಮಳೆಗೆ, ಮರಗಳು ಮುರಿದು ಬಿದ್ದು, ವಿದ್ಯುತ್ ಮಾರ್ಗದ ಕಂಬಗಳು ಮುರಿಯುವುದು, ವಿದ್ಯುತ್ ತಂತಿಗಳು ತುಂಡಾಗುವುದು ಸಾಮಾನ್ಯವಾಗಿದೆ. ಮುಂಗಾರು ಮಳೆ ಪ್ರಾರಂಭದಲ್ಲಿ ಅವಘಡಗಳು ಸಂಭವಿಸಿ, ಮಾರಣಾಂತಿಕ ವಿದ್ಯುತ್ ಅಪಘಾತಗಳು ಸಂಭವಿಸದಂತೆ ಜೆಸ್ಕಾಂ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಾರ್ವಜನಿಕರು ವಿದ್ಯುತ್ ಮಾರ್ಗದ ಕಂಬಗಳು, ತಂತಿಗಳು ತುಂಡರಿಸಿ ಬಿದ್ದಾಗ ಯಾರೂ ಸಹ ಅವುಗಳ ಹತ್ತಿರ ಹೋಗದಂತೆ ತಡೆದು ಆದಷ್ಟು ಬೇಗ ಇಲಾಖೆಗೆ ಮಾಹಿತಿ ನೀಡಬೇಕು. ಮಳೆ, ಗಾಳಿ ಸಂದರ್ಭದಲ್ಲಿ ವಿದ್ಯುತ್ ಕಂಬದ ಪಕ್ಕ ಟ್ರಾನ್ಸ್-ಫಾರ್ಮರ್ ಹತ್ತಿರ ವಿದ್ಯುತ್ ಮಾರ್ಗದ ಕೆಳಗೆ ನಿಲ್ಲಬಾರದು. ಆದಷ್ಟು ವಿದ್ಯುತ್ ನಿಂದಾಗುವ ಅವಘಡಗಳು ತಪ್ಪಿಸಲು ಎಲ್ಲರೂ ಜಾಗೃತರಾಗಿರಲು ತಿಳಿಸಿದರು.ಎಇಇ ಕಳಕಪ್ಪ ರಾಠೋಡ, ಯೂನಿಯನ್ ಅಧ್ಯಕ್ಷ ಸದಾಶಿವರೆಡ್ಡಿ ಕಾಂಬಳೆ, ರಾಘವೇಂದ್ರ ಕಾಂಬಳಿ, ಮಂಜುನಾಥ ಕಾಂಬಳೆ, ಮಲ್ಲಪ್ಪ ಕಾಂಬಳೆ, ಮಾನಯ್ಯಗೌಡ ಬಿರಾದರ್, ಪರಮಣ್ಣ ಮೇಟಿ, ದೇವಪ್ಪ ಕಕ್ಕೇರಾ, ಬಸಣ್ಣ ಗುರಿಕಾರ ಸೇರಿದಂತೆ ಇತರರಿದ್ದರು.