ಯಲ್ಲಾಪುರ: ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದಾಗ ಮಾತ್ರ ನಿವೃತ್ತಿಯ ವರೆಗೆ ಉತ್ತಮ ಸೇವೆ ಸಲ್ಲಿಸಲು ಸಾಧ್ಯ. ಅಧಿಕಾರ ಸಿಕ್ಕಾಗ ದುರುಪಯೋಗ ಪಡಿಸಿಕೊಳ್ಖದೇ ಸದ್ಬಳಕೆ ಮಾಡಿಕೊಳ್ಳಿ ಎಂದು ವಾಕರಸಾ ಸಂಸ್ಥೆಯ ಶಿರಸಿ ವಿಭಾಗದ ಉಗ್ರಾಣಾಧಿಕಾರಿ ಟಿ.ಎಂ. ಚಂದ್ರಶೇಖರ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸಂತೋಷ ವೆರ್ಣೇಕರ್ ಮಾತನಾಡಿ, ಈಗ ನಿವೃತ್ತಿ ಆಗುತ್ತಿರುವ ಐದು ಸಿಬ್ಬಂದಿ ಉತ್ತಮ ಸೇವೆ ಸಲ್ಲಿಸಿ ಸಂಸ್ಥೆಯ ಏಳಿಗೆಗೆ ಶ್ರಮಿಸಿದ್ದಾರೆ. ನಮ್ಮ ಸೇವೆ ಸುಲಭದ ಕರ್ತವ್ಯವಲ್ಲ ಎಂದರು.
ಸೇವೆಯಿಂದ ನಿವೃತ್ತರಾದ ಸಂಚಾರ ನಿಯಂತ್ರಕರಾದ ದೇವಿಪ್ರಸಾದ ಮಾಳಮ್ಮನವರ, ಶ್ರೀಪಾದ ಬಾಡಕರ್, ಮಹದೇವ ಮಾದರ ಹಾಗೂ ನಿರ್ವಾಹಕರಾದ ಮಹದೇವ ನಾಯ್ಕ, ರಸ್ತುಂಅಲಿ ಜಮಖಂಡಿ ಅವರನ್ನು ಸನ್ಮಾನಿಸಿ, ಬೀಳ್ಕೊಡಲಾಯಿತು.ಘಟಕ ವ್ಯವಸ್ಥಾಪಕ ಸಂತೋಷ ವರ್ಣೇಕರ್ ಅವರನ್ನು ನಿವೃತ್ತ ನೌಕರರು ಅಭಿನಂದಿಸಿದರು. ಶಂಕರಮ್ಮ ಎಸ್.ಎಲ್. ವಂದಿಸಿದರು. ನಿವೃತ್ತರ ಕುಟುಂಬಸ್ಥರು ಉಪಸ್ಥಿತರಿದ್ದರು
ಸುರೇಶ ನಾಯಕ, ಸಂಚಾರ ನಿರೀಕ್ಷಕ ನಾಗರಾಜ ಗಾಣಿಗೇರ ಉಪಸ್ಥಿತರಿದ್ದರು. ಶಿವನ ಗೌಡ ಪ್ರಾರ್ಥಿಸಿದರು. ಜಿ. ಪುಷ್ಪಾ ಸ್ವಾಗತಿಸಿದರು. ಎನ್.ಎಂ. ತಿಪ್ಪೇಸ್ವಾಮಿ ಕಾರ್ಯಕ್ರಮ ನಿರೂಪಿಸಿದರು. ಶಂಕರಮ್ಮ ಎಸ್.ಎಲ್. ವಂದಿಸಿದರು.