ಕನ್ನಡಪ್ರಭ ವಾರ್ತೆ ಬಸವಕಲ್ಯಾಣ
ಅವರು ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಾಗರ ಖಂಡ್ರೆ ಪರ ಪ್ರಚಾರ ಸಮಾವೇಶ ಉದ್ಘಾಟಿಸಿ ಮಾತನಾಡಿ, ಗಾಂಧೀಜಿ ಕನಸು ನನಸಾಗಿಸುವದು ಕಾಂಗ್ರೆಸ್ನಿಂದ ಮಾತ್ರ ಸಾಧ್ಯ. ಪಂಡಿತ್ ಜವಾಹರಲಾಲ್ ನೆಹರು ಅವರಿಂದ ಮನಮೋಹನ್ ಸಿಂಗ್ ಅವರ ವರೆಗೆ ಪ್ರಯತ್ನ ನಡೆಸಿದ್ದಾರೆ. ಆದರೆ ಈ ಬಿಜೆಪಿ ಸರ್ಕಾರ ಅದೆಲ್ಲವನ್ನು ನಿರ್ಲಕ್ಷಿಸುತ್ತಿದೆ ಎಂದು ಆರೋಪಿಸಿದರು.
ನರೇಂದ್ರ ಮೋದಿ ಹೆಸರಿಗೆ ರಾಮನಾಮ ಹೇಳ್ತಾರೆ. ಆದರೆ ಎಲ್ಲರನ್ನು ನುಂಗಿ ನೀರು ಕುಡಿಯುತ್ತಾರೆ. ದೇಶದಲ್ಲಿ ಪ್ರಜಾಪ್ರಭುತ್ವ ಸಂವಿಧಾನ ಉಳಿಯಬೇಕಾದರೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕಿದೆ. ಇದು ಕೇವಲ ಸಾಗರ ಖಂಡ್ರೆ ಅವರದ್ದಾಗಲಿ ಕಾಂಗ್ರೆಸ್ ಪಕ್ಷಕ್ಕಾಗಿನ ಚುನಾವಣೆ ಅಲ್ಲ ಇದು ದೇಶದ ಮುಂದಿನ ಭವಿಷ್ಯ ಬರೆಯುವ ಚುನಾವಣೆಯಾಗಿದೆ.ಪ್ರಧಾನಿ ಮೋದಿ ಸ್ವಂತ ಮನೆ ಕಟ್ಟಿಕೊಳ್ಳಲು ₹500ಕೋಟಿ ಖರ್ಚು ಮಾಡಿಕೊಳ್ಳುತ್ತಿದ್ದಾರೆ. ವಿಲಾಸಿ ಜೀವನಕ್ಕಾಗಿ ಜನರ ನೂರಾರು ಕೋಟಿ ರು. ವ್ಯಯ ಮಾಡುತ್ತಿದ್ದಾರೆ. ವಿಶೇಷ ವಿಮಾನಕ್ಕಾಗಿ 17 ಸಾವಿರ ಕೋಟಿ ರು. ಖರ್ಚು ಮಾಡಿದರು. ಹೊಸ ಕಾರುಗಳಿಗೆ 72ಕೋಟಿ ರು. ಖರ್ಚು ಮಾಡಿದರು. ಸೆಂಟ್ರಲ್ ವಿಸ್ತಾ ಕಟ್ಟಲು 20ಸಾವಿರ ಕೋಟಿ ರು. ಖರ್ಚು ಮಾಡುತ್ತಿದ್ದಾರೆ, ಹೊಸ ಪಾರ್ಲಿಮೆಂಟ್ಗೆ 1ಸಾವಿರ ಕೋಟಿ ರು. ಖರ್ಚು ಮಾಡುವದು, ಚುನಾವಣೆ ಈ ಸಂದರ್ಭದಲ್ಲಿ ನಿತ್ಯ 200 ಕೋಟಿ ರು. ಖರ್ಚು ವೆಚ್ಚವಾಗುತ್ತಿದೆ ಈ ಬಡ ದೇಶಕ್ಕೆ ಬೇಕಾ ಎಂದು ಪ್ರಶ್ನಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ವಿಜಯಸಿಂಗ್ ಅವರು ಮಾತನಾಡಿ, ಬಿಜೆಪಿಯವರು ಬರೀ ಗಂಟೆ ಬಾರಿಸ್ತಾರೆ. ಕೇವಲ ಪೊಳ್ಳು ಹೇಳಿಕೆ ಹರಿಬಿಡ್ತಿದ್ದಾರೆ. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರಿದರೆ ರೈತರ ಸಾಲ ಮನ್ನಾ, ಮಹಿಳೆಯರಿಗೆ, ನಿರುದ್ಯೋಗಿಗಳಿಗೆ ವಾರ್ಷಿಕ ತಲಾ ಒಂದು ಲಕ್ಷ ರು. ಸೇರಿ ಮತ್ತಿತರರ ಅಗತ್ಯತೆ ಈಡೇರಿಸಲಾಗುತ್ತದೆ ಎಂದು ತಿಳಿಸಿದರು.
ವಿರೋಧಿಗಳು ಹೇಳ್ತಾರೆ ನನ್ನ ವಯಸ್ಸು ಕಡಿಮೆ ಅನುಭವ ಕಡಿಮೆ ಎಂದು. ಆದರೆ ನಾನು ಬಿಬಿಎ ಎಲ್ಎಲ್ಬಿ 5 ವರ್ಷದ ಕೋರ್ಸ್ ಮುಗಿದಿದೆ. ಸುಪ್ರಿಂಕೋರ್ಟ್ನಲ್ಲಿಯೂ ಕೆಲಸ ಮಾಡಿದ್ದೇನೆ, ಸುಪ್ರಿಂಕೋರ್ಟ್ ನ್ಯಾಯಾಧೀಶನ ಕೈಕೆಳಗೆ ಕೆಲಸ ಮಾಡಿದ್ದೇನೆ, ವಕೀಲರ ಕೈಯಲ್ಲಿ ಕೆಲಸ ಮಾಡಿದ್ದೇನೆ. ಅಷ್ಟಕ್ಕೂ ರಾಜ್ಯ, ರಾಷ್ಟ್ರ ಅಂತಾರಾಷ್ಟ್ರೀಯ ವಿಷಯವಾಗಿ ಯಾರಿಗೆ ಎಷ್ಟು ಜ್ಞಾನವಿದೆ ಎಂಬ ಕುರಿತು ಬಹಿರಂಗ ಚರ್ಚೆಗೆ ಸಿದ್ಧನಿದ್ದೇನೆ ಎಂದು ಕಾಂಗ್ರೆಸ್ ಘೋಷಿತ ಅಭ್ಯರ್ಥಿ ಸಾಗರ ಖಂಡ್ರೆ ಸವಾಲೆಸೆದರು.
ಕಾರ್ಯಕ್ರಮದಲ್ಲಿ ಪೌರಾಡಳಿಚ ಸಚಿವ ರಹೀಮ್ ಖಾನ್, ಶಾಸಕರಾದ ಅರವಿಂದ ಅರಳಿ, ಭೀಮರಾವ್ ಪಾಟೀಲ್, ಚಂದ್ರಶೇಖರ ಪಾಟೀಲ್, ಧನರಾಜ ತಾಳಂಪಳ್ಳಿ, ಮಾಲಾ ಬಿ. ನಾರಾಯಣರಾವ್, ಬಸವರಾಜ ಜಾಬಶೆಟ್ಟಿ, ಮಾಜಿ ಶಾಸಕ ಅಶೋಕ ಖೇಣಿ, ನೀಲಕಂಠ ರಾಠೋಡ, ಗುರಮ್ಮ ಸಿದ್ದಾರೆಡ್ಡಿ, ಅಮೃತರಾವ್ ಚಿಮಕೋಡೆ, ನರಸಿಂಗರಾವ್ ಸೂರ್ಯವಂಶಿ ಸೇರಿದಂತೆ ಮತ್ತಿತರರು ಇದ್ದರು.