ಮರು ಟೆಂಡರ್ ಕರೆಯುವಂತೆ ಪಪಂ ಸದಸ್ಯರ ಒತ್ತಾಯ

KannadaprabhaNewsNetwork |  
Published : Nov 01, 2025, 02:45 AM IST
ಮುಂಡಗೋಡ: ಶುಕ್ರವಾರ ಇಲ್ಲಿಯ ಪ.ಪಂ ಸಭಾಂಗಣದಲ್ಲಿ ಪ.ಪಂ ಸಾಮಾನ್ಯ ಸಭೆ ನಡೆಯಿತು.  | Kannada Prabha

ಸಾರಾಂಶ

ನಿಗದಿಪಡಿಸಿದ್ದಕ್ಕಿಂತ ದರಕ್ಕಿಂತ ಕಡಿಮೆ ಮೊತ್ತದ ಟೆಂಡರ್‌ಗಳನ್ನು ರದ್ದುಪಡಿಸಿ ಮರು ಟೆಂಡರ್ ಕರೆಯುವಂತೆ ಪಪಂ ಸದಸ್ಯರು ಸಾಮೂಹಿಕವಾಗಿ ಒತ್ತಾಯಿಸಿದ ಪ್ರಸಂಗ ಶುಕ್ರವಾರ ಇಲ್ಲಿಯ ಪಪಂ ಸಭಾಂಗಣದಲ್ಲಿ ಪಪಂ ಸಾಮಾನ್ಯ ಸಭೆಯಲ್ಲಿ ನಡೆಯಿತು.

ಮುಂಡಗೋಡ ಪಟ್ಟಣ ಪಂಚಾಯಿ ಸಾಮಾನ್ಯ ಸಭೆ

ಕನ್ನಡಪ್ರಭ ವಾರ್ತೆ ಮುಂಡಗೋಡ

ನಿಗದಿಪಡಿಸಿದ್ದಕ್ಕಿಂತ ದರಕ್ಕಿಂತ ಕಡಿಮೆ ಮೊತ್ತದ ಟೆಂಡರ್‌ಗಳನ್ನು ರದ್ದುಪಡಿಸಿ ಮರು ಟೆಂಡರ್ ಕರೆಯುವಂತೆ ಪಪಂ ಸದಸ್ಯರು ಸಾಮೂಹಿಕವಾಗಿ ಒತ್ತಾಯಿಸಿದ ಪ್ರಸಂಗ ಶುಕ್ರವಾರ ಇಲ್ಲಿಯ ಪಪಂ ಸಭಾಂಗಣದಲ್ಲಿ ಪಪಂ ಸಾಮಾನ್ಯ ಸಭೆಯಲ್ಲಿ ನಡೆಯಿತು.

ಕಾಮಗಾರಿಗಳಿಗೆ ನಿಗದಿಪಡಿಸಿ ಮೊತ್ತಕ್ಕಿಂತ ಶೇ.೨೫ರಷ್ಟು ಕಡಿಮೆ ದರದಲ್ಲಿ ಟೆಂಡರ್ ಹಾಕುವವರು ಎಷ್ಟರಮಟ್ಟಿಗೆ ಗುಣಮಟ್ಟ ಕಾಮಗಾರಿ ಮಾಡಲು ಸಾಧ್ಯ ಎಂದು ಪ್ರಶ್ನಿಸಿದ ಸದಸ್ಯರು, ಈ ಬಗ್ಗೆ ಕಳೆದ ೪ ತಿಂಗಳಿಂದ ಅಂತಹ ಟೆಂಡರ್‌ಗಳನ್ನು ರದ್ದುಪಡಿಸುವಂತೆ ಹೇಳುತ್ತ ಬರಲಾಗಿದೆ. ವಿನಹ ಅದು ಕಾರ್ಯಗತವಾಗುತ್ತಿಲ್ಲ.

ಇಲ್ಲಿಯ ಕೆಡಿಸಿಸಿ ಬ್ಯಾಂಕ್‌ನಿಂದ ಅಯ್ಯಪ್ಪಸ್ವಾಮಿ ದೇವಾಲಯದವರೆಗೆ ಒಂದು ಬದಿಯ ವಿದ್ಯುತ್ ದೀಪಗಳು ಉರಿಯುವುದಿಲ್ಲ. ಆದರೆ ಈ ಲೈನ್ ರಿಪೇರಿಗೆ ₹೭೨ ಸಾವಿರ ಖರ್ಚು ಹಾಕಲಾಗಿದೆ. ಆ ಹಣ ಎಲ್ಲಿ ಹೋಯಿತು. ಎಂದು ಸದಸ್ಯ ಶ್ರೀಕಾಂತ ಸಾನು ಆಕ್ರೋಶ ವ್ಯಕ್ತಪಡಿಸಿರು.

ಪಟ್ಟಣದಲ್ಲಿ ಪಪಂನಿಂದ ಕಾರ್ಯನಿರ್ವಹಿಸುತ್ತಿರುವ ಶುದ್ದ ಕುಡಿಯುವ ನೀರಿನ ಘಟಕಗಳಿಂದ ಲಾಭಕ್ಕಿಂತ ಹೆಚ್ಚು ಕರ್ಚು ಮಾಡಲಾಗುತ್ತಿದೆ. ಖಾಸಗಿಯವರು ನಿರ್ವಹಣೆ ಮಾಡುತ್ತಿರುವಾಗ ಲಕ್ಷಾಂತರ ರೂಪಾಯ ಲಾಭವಾಗುತ್ತಿತ್ತು. ಹಾಗಾಗಿ ಖಾಸಗಿಯವರಿಗೆ ಟೆಂಡರ್ ನೀಡುವಂತೆ ಸದಸ್ಯ ವಿಶ್ವನಾಥ ಪವಾಡಶೆಟ್ಟರ ಆಗ್ರಹಿಸಿದರು.

ಬೀದಿ ನಾಯಿಗಳ ಸ್ಥಳಾಂತರಕ್ಕೆ ಒತ್ತಾಯ:

ಬೀದಿ ನಾಯಿಗಳ ಸಂತಾನ ಹರಣ ಚಿಕಿತ್ಸೆ ಕ್ರಮ ಕೈಗೊಳ್ಳಲಾಗಿದ್ದು, ಶೀಘ್ರದಲ್ಲಿ ಚಿಕಿತ್ಸೆ ನೀಡಲಾಗುವುದು ಎಂದು ಮುಖ್ಯಾಧಿಕಾರಿ ಸಂತೋಷ ಹಾಲಕಲ್ಲಾಪುರ ಸಭೆಯಲ್ಲಿ ತಿಳಿಸಿದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯರು, ಚಿಕಿತ್ಸೆ ನೀಡಿ ಊರಲ್ಲಿಯೇ ಬಿಟ್ಟರೆ ಏನು ಪ್ರಯೋಜನ. ಇದರಿಂದ ನಾಯಿಗಳ ಹಾವಳಿ ಕಡಿಮೆಯಾಗುವುದಿಲ್ಲ. ಹಾಗಾಗಿ ನಾಯಿಗಳನ್ನು ಬೇರೆ ಕಡೆಗೆ ಬಿಟ್ಟುಬರುವಂತೆ ಒತ್ತಾಯಿಸಿದರಲ್ಲದೇ, ಹಂದಿ ಮತ್ತು ದನಗಳ ಹಾವಳಿ ಕೂಡ ನಿಯಂತ್ರಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವಂತೆ ಸಭೆಯಲ್ಲಿ ಆಗ್ರಹಿಸಲಾಯಿತು.

ನಿಗದಿತ ಸಮಯಕ್ಕೆ ಫಾರ್ಮ ನಂ ೩ ಸಿಗದ ಕಾರಣ ಮನೆ ಕಟ್ಟುವರು, ಬ್ಯಾಂಕ್ ಸಾಲ ಪಡೆಯುವವರಿಗೆ ತೀವ್ರ ತೊಂದರೆಯಾಗುತ್ತಿದೆ. ಇದರಿಂದ ಸಾರ್ವಜನಿರು ನಿತ್ಯ ಪಪಂಗೆ ಅಲೆದಾಡುವಂತಾಗಿದೆ. ಒಂದು ದಿನಕ್ಕೆ ಇಂತಿಷ್ಟು ಫಾರ್ಮ ನಂ ೩ ವಿತರಿಸುವ ನಿಯಮವನ್ನಾದರೂ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಿ ಎಂದು ಸದಸ್ಯರು ಒತ್ತಾಯಿಸಿದರು.

ಇದೇ ಸಂದರ್ಭ ವಿದ್ಯುತ್ ಚಾಲಿತ ವಾಹನ ಖರೀದಿಗೆ ಟೆಂಡರ್ ಕರೆಯುವ ಬಗ್ಗೆ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

ಪಪಂ ಉಪಾಧ್ಯಕ್ಷೆ ರಹಿಮಾಬಾನು ಕುಂಕೂರ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸ್ಥಾಯಿ ಸಮಿತಿ ಅಧ್ಯಕ್ಷ ಶಿವರಾಜ ಸುಬ್ಬಾಯವರ, ಮುಖ್ಯಾಧಿಕಾರಿ ಸಂತೋಷ ಹಾಲಕಲ್ಲಾಪುರ, ಸದಸ್ಯರಾದ ಅಶೋಕ ಚಲವಾದಿ, ಫಣಿರಾಜ ಹದಳಗಿ, ರಜಾ ಪಠಾಣ, ಗೌಸ ಮಖಾಂದಾರ, ಶೇಖರ ಲಮಾಣಿ, ಬೀಬಿಜಾನ ಮುಲ್ಲಾನವರ, ನಿರ್ಮಲಾ ಬೆಂಡ್ಲಗಟ್ಟಿ, ಶಕುಂತಲಾ ನಾಯಕ, ಸುವರ್ಣ ಕೊಟಗುಣಸಿ, ಜೈನು ಬೆಂಡಿಗೇರಿ, ಪಪಂ ಅಧಿಕಾರಿ ಪ್ರದೀಪ ಹೆಗಡೆ, ಮಂಚಲಾ ಶೇಟ್ ಮುಂತಾದವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

5-6 ತಿಂಗಳಿಂದ ನೀರು ಪೋಲು: ಕ್ರಮಕೈಗೊಳ್ಳದ ಅಧಿಕಾರಿಗಳು
ತಮ್ಮ ಮೇಲಿನ ಆರೋಪ ಸುಳ್ಳು, ಆಧಾರ ರಹಿತ : ಮುನೀಶ್‌ ಮೌದ್ಗಿಲ್‌