19 ನೇ ಪುಣ್ಯ ಸ್ಮೃತಿ ದಿನ ವಿಶ್ವ ಬಂಧುತ್ವ ಪ್ರಯುಕ್ತ ತರೀಕೆರೆಯಲ್ಲಿ ಬೃಹತ್ ರಕ್ತದಾನ ಶಿಬಿರ
ರಾಜಯೋಗಿನಿ ಬ್ರಹ್ಮಕುಮಾರಿ ದಾದಿ ಡಾ.ಪ್ರಕಾಶ್ ಮಣಿಜಿ ಎಲ್ಲಾ ಪರಿಸ್ಥಿತಿಗಳಲ್ಲೂ ಮನಸ್ಸನ್ನು ಶಾಂತ, ಸ್ಥಿರ, ಸಕಾರಾತ್ಮಕವಾಗಿ ಇಟ್ಟುಕೊಂಡು ಜೀವನ ಮಾಡುವುದನ್ನು ಕಲಿಸಿದರು ಎಂದು ಪ್ರಜಾಪಿತ ಬ್ರಹ್ಮಾ ಕುಮಾರೀಸ್ ಸಂಚಾಲಕರಾದ ಸಹೋದರಿ ರಾಜಯೋಗಿನಿ ಬ್ರಹ್ಮಕುಮಾರಿ ಬಿ.ಕೆ. ಕಲೈವಾಣಿ ಹೇಳಿದ್ದಾರೆ.
ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರೀಸ್ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ರಾಜಯೋಗಿನಿ ಬ್ರಹ್ಮಾಕುಮಾರಿ ದಾದಿ ಡಾ. ಪ್ರಕಾಶ್ ಮಣಿಜೀ ಯವರ 19 ನೇ ಪುಣ್ಯ ಸ್ಮೃತಿ ಅಂಗವಾಗಿ ವಿಶ್ವ ಬಂಧುತ್ವದ ದಿನವಾಗಿ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ನಡೆದ ಬೃಹತ್ ರಕ್ತದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.ದಾದಿ ಪ್ರಕಾಶಮಣಿ ಜೀ 140 ರಾಷ್ಟ್ರಗಳಲ್ಲಿ ಈಶ್ವರೀಯ ವಿಶ್ವ ವಿದ್ಯಾಲಯ ಸ್ಥಾಪಿಸಿ ನಮ್ಮ ಭಾರತೀಯ ಸಂಸ್ಕೃತಿಯ, ಜೊತೆ ಆಧ್ಯಾತ್ಮಿಕ ಜ್ಞಾನ ಹಾಗೂ ರಾಜಯೋಗ ಕಲಿಸಿದ್ದಾರೆ ಎಂದು ಹೇಳಿದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆ ತರೀಕೆರೆ ಶಾಖೆ ಚೇರ್ಮನ್ ಬಿ. ಪಿ. ಚಂದ್ರಶೇಖರ್ ಮಾತನಾಡಿ ನಾವೆಲ್ಲ ಸಂಘ ಸಂಸ್ಥೆಗಳು ಒಂದಾಗಿ ಈ ಸೇವೆ ಯಶಸ್ವಿಯಾಗಿಸೋಣ. ತರೀಕೆರೆ ತಾಲೂಕಿನಲ್ಲಿ ಈಗ ರೆಡ್ ಕ್ರಾಸ್ ಸಂಸ್ಥೆ ರಕ್ತನಿಧಿ ಕೇಂದ್ರ ತೆರೆಯಲಾಗುವುದು ಎಂದು ಹೇಳಿದರು.
ಲಯನ್ ಕ್ಲಬ್ ಉಪಾಧ್ಯಕ್ಷ ಟಿ. ಎಂ. ರಾಜು, ಕಾರ್ಯದರ್ಶಿ ಏಜಾಜ್ ಪಾಶ ಮತ್ತಿತರರು ಭಾಗವಹಿಸಿದ್ದರು.
ತರೀಕೆರೆಯಲ್ಲಿ ಪ್ರಜಾಪಿತ ಬ್ರಹ್ಮಕುಮಾರೀಸ್ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ನಡೆದ ಬೃಹತ್ ರಕ್ತದಾನ ಶಿಬಿರದಲ್ಲಿ ಬಿ.ಕೆ.ಕಲೈವಾಣಿ,ಭಾರತೀಯ ರೆಡ್ ಕ್ರಾಸ್ ಸಂಸ್ಥೆ ತರೀಕೆರೆ ಶಾಖೆ ಚೇರ್ಮನ್ ಬಿ. ಪಿ. ಚಂದ್ರಶೇಖರ್, ಜಿಲ್ಲಾ ಶಸ್ತ್ರ ಚಿಕಿತ್ಸಾ ತಜ್ಞ ಡಾ, ದೇವರಾಜ್ ಮತ್ತಿತರರು ಭಾಗವಹಿಸಿದ್ದರು.