ಜಾತಿ ಮೀರಿ ನೀತಿವಂತರಾಗಿ ಮಾದರಿಯಾಗಿ: ಪ್ರಸನ್ನಾನಂದಪುರಿ ಸ್ವಾಮೀಜಿ

KannadaprabhaNewsNetwork |  
Published : May 17, 2025, 02:36 AM IST
ಫೋಟೊ ಶೀರ್ಷಿಕೆ: 16ಆರ್‌ಎನ್‌ಆರ್8 ರಾಣಿಬೆನ್ನೂರು ತಾಲೂಕಿನ ಕುಮಾರಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಆದಿಕವಿ ಮಹರ್ಷಿ ವಾಲ್ಮೀಕಿ ಪುತ್ಥಳಿಯನ್ನು ಅತಿಥಿಗಳು ಅನಾವರಣಗೊಳಿಸಿದರು. ಶಾಸಕ ಪ್ರಕಾಶ ಕೋಳಿವಾಡ, ಮಾಜಿ ಶಾಸಕ ಅರುಣಕುಮಾರ ಪೂಜಾರ ಹಾಗೂ ವಿವಿಧ ಮಠಾಧೀಶರುಗಳು ಇದ್ದರು.  | Kannada Prabha

ಸಾರಾಂಶ

ಎಲ್ಲ ಸಮುದಾಯದವರು ಸಮಾನತೆಯಿಂದ ಬದುಕಬೇಕು. ಆಯಾ ಸಮುದಾಯದ ಆದರ್ಶ ಪುರುಷರನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ.

ರಾಣಿಬೆನ್ನೂರು: ಜಾತಿಯಲ್ಲಿ ಹುಟ್ಟಿ ನೀತಿಯಿಂದ ಜ್ಯೋತಿಯಂತೆ ಜಗತ್ತಿಗೆ ಬೆಳಕು ನೀಡಬೇಕು. ಜಾತಿಯನ್ನು ಮೀರಿ ನೀತಿವಂತರಾಗಿ ಸಮಾಜಕ್ಕೆ ಮಾದರಿಯಾಗಬೇಕು ಎಂದು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪೀಠಾಧ್ಯಕ್ಷ ಪ್ರಸನ್ನಾನಂದಪುರಿ ಸ್ವಾಮೀಜಿ ನುಡಿದರು.ತಾಲೂಕಿನ ಕುಮಾರಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ಶುಕ್ರವಾರ ನೂತನವಾಗಿ ನಿರ್ಮಾಣಗೊಂಡಿರುವ ಆದಿಕವಿ ಮಹರ್ಷಿ ವಾಲ್ಮೀಕಿ ಪುತ್ಥಳಿಯ ಲೋಕಾರ್ಪಣೆ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಅರುಣಕುಮಾರ ಪೂಜಾರ ಮಾತನಾಡಿ, ಎಲ್ಲ ಸಮುದಾಯದವರು ಸಮಾನತೆಯಿಂದ ಬದುಕಬೇಕು. ಆಯಾ ಸಮುದಾಯದ ಆದರ್ಶ ಪುರುಷರನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ. ವಾಲ್ಮೀಕಿ ಸಮುದಾಯ ನನಗೆ ಸಾಕಷ್ಟು ಶಕ್ತಿಯನ್ನು ತುಂಬಿದೆ. ಅದಕ್ಕೆ ನಾನು ಸದಾ ಋಣಿಯಾಗಿರುತ್ತೇನೆ.

ನನ್ನ ಅವಧಿಯಲ್ಲಿ ವಾಲ್ಮೀಕಿ ವೃತ್ತ ಸೇರಿದಂತೆ ₹15 ಕೋಟಿ ವೆಚ್ಚದಲ್ಲಿ ಹಳೆ ಪಿ.ಬಿ. ರಸ್ತೆಯ ಅಗಲೀಕರಣ ಮಾಡಿದ ಸಾರ್ಥಕತೆ ನನಗಿದೆ. ನಾನು ಜಾತಿವಾದಿಯಲ್ಲ, ಆಶಾವಾದಿಯಾಗಿರುವೆ. ಎಲ್ಲ ಸಮುದಾಯಗಳನ್ನು ಸಮಾನ ದೃಷ್ಟಿಯಿಂದ ನೋಡುತ್ತೇನೆ. ಅಧಿಕಾರ ಶಾಶ್ವತವಲ್ಲ, ನಾವು ಮಾಡಿದ ಕೆಲಸಗಳು ಮಾತ್ರ ಶಾಶ್ವತ ಎಂದರು.ವೀರಶೈವ ಲಿಂಗಾಯತ ಪಂಚಮಸಾಲಿ ಹರಿಹರ ಪೀಠದ ವಚನಾನಂದ ಸ್ವಾಮೀಜಿ, ನರಸೀಪುರದ ನಿಜಶರಣ ಅಂಬಿಗರ ಚೌಡಯ್ಯ ಗುರುಪೀಠದ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ, ಕೋಡಿಯಾಲ ಪುಣ್ಯಕೋಟಿ ಮಠದ ಜಗದೀಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕ ಪ್ರಕಾಶ ಕೋಳಿವಾಡ ಪುತ್ಥಳಿ ಲೋಕಾರ್ಪಣೆ ಮಾಡಿದರು. ಮಹರ್ಷಿ ವಾಲ್ಮೀಕಿ ಒತ್ತಳಿಯ ಲೋಕಾರ್ಪಣೆ ಸಮಿತಿ ಅಧ್ಯಕ್ಷ ನಾಗರಾಜಪ್ಪ ಹಳ್ಳೆಳ್ಳಪ್ಪನವರ, ಹರಿಹರದ ಶಾಸಕ ಬಿ.ಪಿ. ಹರೀಶ, ಸಮಿತಿಯ ಗೌರವಾಧ್ಯಕ್ಷ ರಾಮಪ್ಪ ಗೋಣೆಪ್ಪನವರ, ತಾಲೂಕು ವಾಲ್ಮೀಕಿ ಮಹಾಸಭಾದ ಅಧ್ಯಕ್ಷ ಚಂದ್ರಪ್ಪ ಬೇಡರ್, ರೈತ ಮುಖಂಡ ರವೀಂದ್ರಗೌಡ ಪಾಟೀಲ, ಕೊಡಿಯಾಲ ಗ್ರಾಮದ ಹಿರಿಯರಾದ ಜುಂಜಪ್ಪ ಹೆಗ್ಗಪ್ಪನವರ, ಕರಿಯಪ್ಪ ಮಾಳಿಗೇರ, ತಾಪಂ ಮಾಜಿ ಸದಸ್ಯ ಭೀಮಪ್ಪ ಗೋಣೆಪ್ಪನವರ, ಗ್ರಾಪಂ ಅಧ್ಯಕ್ಷೆ ಗೀತಾ ಮಂಜಣ್ಣ ಶಿವಮೊಗ್ಗ, ದಿನೇಶಕುಮಾರ್. ಬಿ.ಎಚ್., ಗಣೇಶ್ ಬಿಳಿಕಿ, ಅಣ್ಣಪ್ಪ ಗುತ್ತೂರ, ಚೇತನ ಪೂಜಾರ ಸೇರಿದಂತೆ ಗ್ರಾಪಂ ಸದಸ್ಯರು, ಇತರರು ಭಾಗವಹಿಸಿದ್ದರು.ಹೆಚ್ಚುವರಿ ವೇತನದ ಹಣ ಟ್ರಸ್ಟ್‌ಗೆ ನೀಡಿದ ಶಾಸಕ ಮಾನೆ

ಹಾನಗಲ್ಲ: ದುಪ್ಪಟ್ಟಾಗಿರುವ ಶಾಸಕರ ವೇತನವನ್ನು ತಾಲೂಕಿನಲ್ಲಿ ಶಿಕ್ಷಣ ವ್ಯವಸ್ಥೆಯ ಬದಲಾವಣೆಗೆ ವಿನಿಯೋಗಿಸುವುದಾಗಿ ಪ್ರಕಟಿಸಿದ್ದ ಶಾಸಕ ಶ್ರೀನಿವಾಸ ಮಾನೆ ಅವರು, ಮೊದಲ ತಿಂಗಳ ಹೆಚ್ಚುವರಿ ವೇತನ ₹50 ಸಾವಿರ ಚೆಕ್‌ನ್ನು ಪಟ್ಟಣದ ಅ.ನ. ಕುಂದಾಪೂರ ಮತ್ತು ಬಿ.ಬಿ. ಪದಕಿ ಟ್ರಸ್ಟ್‌ಗೆ ನೀಡಿ, ನುಡಿದಂತೆ ನಡೆದಿದ್ದಾರೆ.

ಇತ್ತೀಚೆಗೆ ಪಟ್ಟಣದಲ್ಲಿ ನಡೆದ ನಿವೃತ್ತ ಶಿಕ್ಷಕ ದಿ. ಬಿ.ಬಿ. ಪದಕಿ ಗುರುವಂದನಾ ಸಮಾರಂಭದಲ್ಲಿ ಅ.ನ. ಕುಂದಾಪೂರ ಮತ್ತು ಬಿ.ಬಿ. ಪದಕಿ ಟ್ರಸ್ಟ್ ಕೈಗೊಳ್ಳುತ್ತಿರುವ ಶೈಕ್ಷಣಿಕ ಉದ್ದೇಶಗಳಿಗೆ ವಿನಿಯೋಗಿಸಲು ತಮ್ಮ ಮೊದಲ ತಿಂಗಳದ ಹೆಚ್ಚುವರಿ ವೇತನವನ್ನು ನೀಡುವುದಾಗಿ ತಿಳಿಸಿದ್ದ ಶಾಸಕ ಮಾನೆ, ಶುಕ್ರವಾರ ಟ್ರಸ್ಟ್‌ ಪದಾಧಿಕಾರಿಗಳಿಗೆ ಚೆಕ್ ಹಸ್ತಾಂತರಿಸಿದರು.ಅ.ನ. ಕುಂದಾಪೂರ ಹಾಗೂ ಬಿ.ಬಿ. ಪದಕಿ ಟ್ರಸ್ಟ್‌ನ ಕಾರ್ಯದರ್ಶಿ ಗಿರೀಶ್ ದೇಶಪಾಂಡೆ, ಖಜಾಂಚಿ ಶರಶ್ಚಂದ್ರ ದೇಸಾಯಿ, ಪುರಸಭೆ ಮಾಜಿ ಅಧ್ಯಕ್ಷ ನಾಗಪ್ಪ ಸವದತ್ತಿ, ಪ್ರಮುಖರಾದ ಆರ್.ಸಿ. ದೇಸಾಯಿ, ಡಿ.ಜಿ. ಕುಲಕರ್ಣಿ ಉಪಸ್ಥಿತರಿದ್ದರು.

PREV

Recommended Stories

ಬೆಂಗಳೂರಿನ ಬಾರ್‌ಗಳಲ್ಲಿ ವೋಟ್‌ ಖರೀದಿ ಲೆಕ್ಕಾಚಾರ!!!
ಸಿಎಂಗೆ ಕಣ್ಣು ಪರೀಕ್ಷೆ ನಡೆಸಿ ಎರಡು ಕನ್ನಡಕ ಕೊಟ್ಟ ಶಾಸಕ ಶ್ರೀನಿವಾಸ್‌