ಕನ್ನಡಪ್ರಭ ವಾರ್ತೆ ಮುದಗಲ್ ಮಕ್ಕಳ ಪ್ರತಿಭೆ ಗುರುತಿಸಲು ಪ್ರತಿಭಾ ಕಾರಂಜಿ ಕಾರ್ಯಕ್ರಮಗಳು ಪ್ರಮುಖ ವೇದಿಕೆಗಳಾಗಿದ್ದು ಮಕ್ಕಳು ತಮ್ಮ ಕಲೆಯನ್ನು ಪ್ರದರ್ಶನ ಮಾಡಬೇಕು ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಅಮರೇಶ ನಾಡಗೌಡ ಹೇಳಿದರು.
ಶಾಲೆಯ ಮುಖ್ಯಗುರು ಶಿವಶಂಕರ ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿ, ಮಕ್ಕಳಿಗೆ ಕಲಿಕಾ ಜೊತೆಗೆ ಅವರ ಪ್ರತಿಭೆ ಹೊರತರಲು ಇಂತಹ ಕಾರ್ಯಕ್ರಮಗಳನ್ನು ಇಲಾಖೆ ಮೂಲಕ ಸರಕಾರ ಆಯೋಜಿಸಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಆಮದಿಹಾಳ ಗ್ರಾಪಂ ಅಧ್ಯಕ್ಷ ಶಶಿಧರಗೌಡ ಬ್ಯಾಲಿಹಾಳ, ಶಾಲಾ ಎಸ್ಡಿಎಂಸಿ ಅಧ್ಯಕ್ಷ ಅಮರೇಶ ಯರಡೋಣಿ , ಸಿಆರ್ಪಿ ರಾಮಚಂದ್ರ ಢವಳೆ, ಶರಣಪ್ಪ ಮುದ್ದಲಗುಂದಿ, ರಾಮನಗೌಡ ಪೊಲೀಸ್ ಪಾಟೀಲ್, ಉಪಸ್ಥಿತರಿದ್ದರು.