ಶರಣರ ವಚನಗಳ ಮೂಲಕ ಸಾಮಾಜಿಕ ಕ್ರಾಂತಿಗೆ ಮುನ್ನುಡಿ

KannadaprabhaNewsNetwork |  
Published : Aug 08, 2025, 01:03 AM IST
ಪೊಟೋ-ಪಟ್ಟಣದ ಅಕ್ಕಮಹಾದೇವಿ ದೇವಸ್ತಾನದಲ್ಲಿ ನಡೆಯುತ್ತಿರುವ ಶ್ರಾವಣ ಸಂಜೆ ಕಾರ್ಯಕ್ರಮದಲ್ಲಿ ರಮೇಶ ನವಲೆ ಮಾತನಾಡಿದರು. | Kannada Prabha

ಸಾರಾಂಶ

ಸಮಾಜದಲ್ಲಿನ ಮೂಢನಂಬಿಕೆ, ಜಾತಿ ಪದ್ಧತಿ ವಿರುದ್ಧ 12ನೇ ಶತಮಾನದಲ್ಲಿ ಶರಣರು ತಮ್ಮ ವಚನ ಹಾಗೂ ನಡೆ ನುಡಿಗಳ ಮೂಲಕ ಸಾಮಾಜಿಕ ಕ್ರಾಂತಿಗೆ ಮುನ್ನುಡಿ ಬರೆದರು ಎಂದು ನಿವೃತ್ತ ಮುಖ್ಯೋಪಾಧ್ಯಾಯ ರಮೇಶ ನವಲೆ ಹೇಳಿದರು.

ಲಕ್ಷ್ಮೇಶ್ವ ರ: ಸಮಾಜದಲ್ಲಿನ ಮೂಢನಂಬಿಕೆ, ಜಾತಿ ಪದ್ಧತಿ ವಿರುದ್ಧ 12ನೇ ಶತಮಾನದಲ್ಲಿ ಶರಣರು ತಮ್ಮ ವಚನ ಹಾಗೂ ನಡೆ ನುಡಿಗಳ ಮೂಲಕ ಸಾಮಾಜಿಕ ಕ್ರಾಂತಿಗೆ ಮುನ್ನುಡಿ ಬರೆದರು ಎಂದು ನಿವೃತ್ತ ಮುಖ್ಯೋಪಾಧ್ಯಾಯ ರಮೇಶ ನವಲೆ ಹೇಳಿದರು.

ಬುಧವಾರ ಪಟ್ಟಣದ ಅಕ್ಕಮಹಾದೇವಿ ದೇವಸ್ಥಾನದಲ್ಲಿ ನಡೆಯುತ್ತಿರುವ ಶ್ರಾವಣ ಕಾರ್ಯಕ್ರಮದ 20ನೇ ವರ್ಷದ ಶ್ರಾವಣ ಸಂಜೆಯಲ್ಲಿ ಭಾಗವಹಿಸಿ ಸಾಂಪ್ರದಾಯಕತೆ ಹಾಗೂ ಆಧುನಿಕತೆ ಎಂಬ ವಿಷಯದ ಮೇಲೆ ಉಪನ್ಯಾಸ ನೀಡಿ ಮಾತನಾಡಿದರು.

ಸಂಪ್ರದಾಯವೆಂದರೆ ನಮ್ಮ ನಂಬಿಕೆ, ಸಮಾಜ, ಸಮುದಾಯ, ನಾಡು, ಆಚರಣೆಗಳು, ಹಬ್ಬ ಹರಿದಿನಗಳು. ಸಂಪ್ರದಾಯದ ದೊಡ್ಡ ಕೆಲಸವೆಂದರೆ ಒಂದು ಸಮುದಾಯ ಒಗ್ಗಟ್ಟಾಗಿ ಇಡುತ್ತದೆ. ಆಧುನಿಕತೆಯೆಂದರೆ ಪ್ರಗತಿ, ಶಿಕ್ಷಣ, ಬದಲಾವಣೆ ಅಭಿವೃದ್ಧಿ ಇದು ಆಧುನಿಕತೆಯಾಗಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಹಿರಿಯ ಬಂಡಾಯ ಸಾಹಿತಿ ಸಿ.ಜಿ .ಹಿರೇಮಠ ಮಾತನಾಡಿ, ಸಂಪ್ರದಾಯದ ಜತೆಗೆ ಆಧುನಿಕತೆ ಬೇಕೆ ಬೇಕು, ಎರಡನ್ನು ಪ್ರೀತಿಯಿಂದ ಸ್ವೀಕಾರ ಮಾಡ್ಕೋಬೇಕು, ಸಂಪ್ರದಾಯ ಜಡತ್ವದ ಸಂಕೇತ, ಅತಿಯಾಗಿ ಸಂಪ್ರದಾಯದ ಮೇಲೆ ಅವಲಂಬನೆ ಆಗಬಾರದು. ಕೆಲವು ಮೂಢನಂಬಿಕೆ ಸಂಪ್ರದಾಯವಾಗಿ ಮಾಡಿಕೊಂಡಿದ್ದಾರೆ ಎಂದು ಹೇಳಿದರು.

ಈ ವೇಳೆ ಪತ್ರಕರ್ತ ಅಶೋಕ ಸೊರಟೂರ, ಶಿವಲಿಂಗಯ್ಯ ಹೊತಗಿಮಠ, ಸೋಮಣ್ಣ ಯತ್ತಿನಹಳ್ಳಿ, ಶಿಕ್ಷಕ ಸಚ್ಚಿದಾನoದ ಹಿರೇಮಠ ಮಾತನಾಡಿದರು.

ಈ ಸಂದರ್ಭದಲ್ಲಿ ಪೂರ್ಣಾಜಿ ಕರಾಟೆ, ವಿ.ಎಂ. ಹೂಗಾರ, ಗಂಗಾಧರ ಅರಳಿ, ನಿಂಗಪ್ಪ ಗೋರವರ, ಅಂದಾನಪ್ಪ ವಾಲಿಶೆಟ್ಟರ, ಶರಣಪ್ಪ ಹಸರೆಡ್ಡಿ, ಪ್ರತಿಮಾ ಮಹಾಜನಶೆಟ್ಟರ, ಲಲಿತಕ್ಕ ಕೆರಿಮನಿ, ವೀಣಾ ಹತ್ತಿಕಾಳ, ನಿರ್ಮಲಾ ಅರಳಿ, ಅನ್ನಪೂರ್ಣ ಓದುನವರ, ಡಿ.ಎಫ್. ಪಾಟೀಲ ಸೇರಿದಂತೆ ಅನೇಕರು ಇದ್ದರು.

ಅರುಂಧತಿ ಬಿಂಕದಕಟ್ಟಿ ಪ್ರಾಥಿಸಿದರು, ನಂದಿನಿ ಮಾಳವಾಡ ಸ್ವಾಗತಿಸಿದರು, ರತ್ನಾ ಕರ್ಕಿ ನಿರೂಪಿಸಿದರು, ಜಯಶ್ರೀ ಮತ್ತಿಕಟ್ಟಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ
‘ಜಿ ರಾಮ್‌ ಜಿ’ ವಿರುದ್ಧ ಸಮರಕ್ಕೆ ನಾಳೆ ಕೈ ವಿಶೇಷ ಸಂಪುಟ ಸಭೆ