ಮಕ್ಕಳ ನಳಂದಕ್ಕೆ ನೀಲನಕ್ಷೆಗೆ ಸಿದ್ಧತೆ

KannadaprabhaNewsNetwork |  
Published : Jan 28, 2024, 01:16 AM IST
೨೭ಕೆಎಲ್‌ಆರ್-೪ಕೋಲಾರದ ರಂಗಮಂದಿರ ಸಭಾಂಗಣದಲ್ಲಿ ಸಂಗೊಳ್ಳಿ ರಾಯಣ್ಣ ಪ್ರಶಸ್ತಿ ಪುರಸ್ಕೃತ ಸಾಹಿತಿ ಚಿಂತಕ ನಾಟಕಕಾರ ಕೋಟಿಗಾನಹಳ್ಳಿ ರಾಮಯ್ಯರನ್ನು ವಿವಿಧ ಸಂಘಟನೆಗಳ ಮುಖಂಡರು ಸನ್ಮಾನಿಸಿದರು. | Kannada Prabha

ಸಾರಾಂಶ

ಅಂಬೇಡ್ಕರ್ ಟೆಂಟ್ ಶಾಲೆ (ಗ್ರಂಥಾಲಯ) ಆರಂಭಿಸಿದ್ದು, ಈ ಶಾಲೆಯ ಮುಖ್ಯ ಉದ್ದೇಶ ಕಳೆದ ೨೫ ವರ್ಷಗಳಲ್ಲಿ ಅಂಬೇಡ್ಕರ್ ಕುರಿತು ಪ್ರಕಟವಾಗಿರುವ ೧ ಸಾವಿರ ಕೃತಿಗಳನ್ನು ಸಂಗ್ರಹಿಸಿ, ಅವುಗಳನ್ನು ಪ್ರತಿ ಗ್ರಾಮದಲ್ಲಿ ಪ್ರದರ್ಶಿಸುವುದು

ಕನ್ನಡಪ್ರಭ ವಾರ್ತೆ ಕೋಲಾರ

ಮುಂದಿನ ಐದು ವರ್ಷಗಳಲ್ಲಿ ಇಡೀ ವಿಶ್ವವೇ ತಿರುಗಿ ನೋಡುವಂತ ಸಾಂಸ್ಕೃತಿಕ ಪರಂಪರೆಯ ಕಾರಿಡಾರ್ ಮಕ್ಕಳ ನಳಂದ ನೀಲನಕ್ಷೆ ತಯಾರಾಗುತ್ತಿದೆ, ಇದನ್ನು ಸಾಕಾರಗೊಳಿಸಲು ಎಲ್ಲರನ್ನು ಆಹ್ವಾನಿಸುತ್ತಿದ್ದೇನೆ ಎಂದು ಸಾಹಿತಿ ಚಿಂತಕ ಕೋಟಿಗಾನಹಳ್ಳಿ ರಾಮಯ್ಯ ಹೇಳಿದರು.

ನಗರದ ರಂಗಮಂದಿರದ ಸಭಾಂಗಣದಲ್ಲಿ ಸಂಗೊಳ್ಳಿ ರಾಯಣ್ಣ ಪ್ರಶಸ್ತಿ ಸಿಕ್ಕಿರುವ ಹಿನ್ನೆಲೆಯಲ್ಲಿ ವಿವಿಧ ಸಂಘಟನೆಗಳ ತಮಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

ಆದಿಮಾ, ಬುಡ್ಡಿ ದೀಪ ಸ್ಥಾಪನೆ

ಜಿಲ್ಲೆಯಲ್ಲಿ ರಂಗಾಯಣದಂತ ಕೇಂದ್ರ ಇಲ್ಲವೆಂಬ ಕಾರಣದಿಂದ ಆದಿಮ ಸಾಂಸ್ಕೃತಿಕ ಕೇಂದ್ರ ಹುಟ್ಟು ಹಾಕಿದ್ದು, ಕಲಾಶಾಲೆಯ ಕೊರತೆ ನೀಗಲು ಬುಡ್ಡಿದೀಪ ಸಾಂಸ್ಕೃತಿಕ ಕೇಂದ್ರವನ್ನು ಆರಂಭಿಸಿದೆ, ಈ ಕೇಂದ್ರವನ್ನು ಅಮ್ಮನ ಪ್ರಯೋಗಶಾಲೆಯನ್ನಾಗಿ ಮಾರ್ಪಡಿಸಲಾಗುತ್ತಿದ್ದು, ಹಲವರು ಕೈಜೋಡಿಸಿದ್ದಾರೆಂದು ವಿವರಿಸಿದರು.

ಅಂಬೇಡ್ಕರ್ ಟೆಂಟ್ ಶಾಲೆ (ಗ್ರಂಥಾಲಯ) ಆರಂಭಿಸಿದ್ದು, ಈ ಶಾಲೆಯ ಮುಖ್ಯ ಉದ್ದೇಶ ಕಳೆದ ೨೫ ವರ್ಷಗಳಲ್ಲಿ ಅಂಬೇಡ್ಕರ್ ಕುರಿತು ಪ್ರಕಟವಾಗಿರುವ ೧ ಸಾವಿರ ಕೃತಿಗಳನ್ನು ಸಂಗ್ರಹಿಸಿ, ಅವುಗಳನ್ನು ಪ್ರತಿ ಗ್ರಾಮದಲ್ಲಿ ಪ್ರದರ್ಶಿಸುವುದು. ಈ ಆಂದೋಲನವು ಫೆ.೧೫ ರಿಂದ ಏಪ್ರಿಲ್ ೧೪ ರವರೆಗೂ ನಡೆಯಲಿದೆ, ಆಂದೋಲನದ ಭಾಗವಾಗಿ ಏಳು ಮಂದಿ ನಟರು ವಿವಿಧ ನಾಟಕಗಳ ಅಭ್ಯಾಸ ಮಾಡುತ್ತಿದ್ದಾರೆ ಎಂದು ವಿವರಿಸಿದರು.

ದಮನಿತರ ವಿಮೋಚನೆಗೆ ಯತ್ನ

ದಮನಿತರ ವಿಮೋಚನೆಗಾಗಿ ಬಿಡುಗಡೆಯ ನೀಲನಕ್ಷೆ ಯನ್ನು ತಾವು ರೂಪಿಸಿದ್ದು, ಒಂದು ಸಮರ್ಥ ಪೀಳಿಗೆಯನ್ನು ರೂಪಿಸಲು ಇದು ಸಹಕಾರಿಯಾಗಿದೆ, ಇದಕ್ಕಾಗಿ ಸಂಸ್ಕೃತಿ ಯಾನ ೧ ಆದಿಮದಲ್ಲಿ ಜರುಗಿದೆ, ಸಂಸ್ಕೃತಿಯಾನ ೨ ಮಂಡ್ಯದಲ್ಲಿ ನಡೆಯಲಿದೆ, ಸಂಸ್ಕೃತಿಯಾನ ೩ಕ್ಕಾಗಿ ಬುಡ್ಡಿದೀಪ ಕೇಂದ್ರವನ್ನು ಅಮ್ಮನ ಪ್ರಯೋಗಾಲಯವನ್ನಾಗಿ ರೂಪಿಸಲಾಗುತ್ತಿದೆ, ಇದಕ್ಕಾಗಿ ೧೫ ಮಂದಿಗೆ ತರಬೇತಿ ನೀಡಲಾಗುವುದು ಎಂದು ತಿಳಿಸಿದರು.

ಕನ್ನಡ ಸಂಸ್ಕೃತಿ ಇಲಾಖೆ ಮೂಲಕ ಕನ್ನಡ ಸಂಸ್ಕೃತಿ ಇಲಾಖೆಯು ತಮಗೆ ಜಾತಿಗೆ ಮಿತಿಗೊಳ್ಳದ ಸಂಗೊಳ್ಳಿ ರಾಯಣ್ಣ ಔನತ್ಯದ ಪ್ರಶಸ್ತಿಯನ್ನು ತಮಗೆ ನೀಡಿರುವುದು ಸಮಾಧಾನ ತಂದಿದೆ, ತಮ್ಮ ಮುಂದಿನ ಎಲ್ಲಾ ಕನಸುಗಳನ್ನು ನನಸು ಮಾಡುವುದಕ್ಕೆ ಕೈಜೋಡಿಸುವುದೇ ತಮಗೆ ನೀವು ನೀಡುವ ಸನ್ಮಾನ ಅಭಿನಂದನೆ ಎಂದು ನುಡಿದರು.

ಕೆ.ಸಿ. ರಾಜಣ್ಣ, ಅನಂತಕೀರ್ತಿ, ಗಾಂಧಿನಗರ ರೇಣು, ಸಿಎಂಆರ್ ಶ್ರೀನಾಥ, ಬಂಗಾರಪೇಟೆ ಕನ್ನಡ ಸಂಘದ ಪಲ್ಲವಿ ಮಣಿ, ರಾಜ್‌ಕುಮಾರ್, ಚಂದ್ರಮೌಳಿ, ದಲಿತ ನಾರಾಯಣಸ್ವಾಮಿ, ಚೇತನಬಾಬು, ಅಂಬೇಡ್ಕರ್ ನಗರ ಮುನಿಯಪ್ಪ, ನರಸಾಪುರ ನಾರಾಯಣಸ್ವಾಮಿ, ಕಲ್ಪಮಂಜಲಿ ಶಿವಣ್ಣ, ಪಾರೇಹೊಸಹಳ್ಳಿ ಮುನಿಯಪ್ಪ, ಸಿ.ವಿ.ನಾಗರಾಜ್, ಆನಂದ್ ಜೀವಿ ಸೇರಿದಂತೆ ವಿವಿಧ ಸಂಘಟನೆಗಳ ಅನೇಕ ಮಂದಿ ಕೋಟಿಗಾನಹಳ್ಳಿ ರಾಮಣ್ಣರನ್ನು ಅಭಿನಂದಿಸಿದರು. ರೇಣುಕಾ ಕಾರ್ಯಕ್ರಮ ನಿರೂಪಿಸಿದರು.

PREV

Recommended Stories

ವಿಶ್ವದಲ್ಲೇ ಮೊದಲ ಬಾರಿ ಬನ್ನೇರುಘಟ್ಟದಲ್ಲಿ ಕರಡಿಗೆ ಕೃತಕ ಕಾಲು ಜೋಡಣೆ
ರಾಜ್ಯದ ಸಿರಿಧಾನ್ಯ ಬೆಳೆಗಾರರಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ