)
ರೈತರಲ್ಲಿ ಮೂಡಿದೆ ಭರವಸೆ: ಮಾಜಿ ಶಾಸಕ ವೈ ಎಸ್.ವಿ.ದತ್ತ । ಕಲ್ಕೆರೆ ಗ್ರಾಮದಲ್ಲಿ ರೈತರೊಂದಿಗೆ ಸಭೆ
ನೀರಿನ ತೀವ್ರ ಭವಣೆ ಎದುರಿಸುತ್ತಿರುವ ತಾಲೂಕಿನ ಕಲ್ಕೆರೆಯ ಕುಕ್ಕಸಮುದ್ರದ ಕೆರೆಗೆ ತಾತ್ಕಾಲಿಕವಾಗಿ ಚಿತ್ರದುರ್ಗ ಶಾಖಾ ಕಾಲುವೆ ಮೂಲಕ ನೀರು ಹರಿಸುವ ಸಿದ್ಧತೆಗಳಿಂದ ನಮ್ಮ ರೈತರಲ್ಲೂ ಆಶಾಭಾವನೆ ಮೂಡಿದೆ ಎಂದು ಮಾಜಿ ಶಾಸಕ ವೈ ಎಸ್.ವಿ.ದತ್ತ ಹೇಳಿದರು.
ಭಾನುವಾರ ತಾಲೂಕಿನ ಕಲ್ಕೆರೆ ಗ್ರಾಮದ ಶ್ರೀ ಕರಿಯಮ್ಮನವರ ದೇವಾಲಯ ಆವರಣದಲ್ಲಿ ಸುತ್ತಮುತ್ತಲಿನ ಗ್ರಾಮಗಳ ರೈತರೊಂದಿಗೆ ಸಭೆ ನಡೆಸಿ ಮಾತನಾಡಿ ಬರದಿಂದ ಬರಿದಾಗಿರುವ ತಾಲೂಕಿನ ದೊಡ್ಡಕೆರೆ, ಕುಕ್ಕಸಮುದ್ರ ಕೆರೆಗೆ ತಾತ್ಕಾಲಿಕವಾಗಿ ನೀರು ತುಂಬಿಸುವಂತೆ ಸಚಿವರಾದ ಜಿ. ಪರಮೇಶ್ವರ್ , ಕೆ. ಜೆ.ಜಾರ್ಜ್ ಅವರಿಗೆ ಮನವಿ ಮಾಡಲಾಗಿತ್ತು. ಅದರಂತೆ ಸರ್ಕಾರದ ಕಾರ್ಯದರ್ಶಿ ಗೌರವ್ ಗುಪ್ತಾ ನೀರು ಹರಿಸಲು ಸೂಚನೆ ನೀಡಿರುವುದಾಗಿ ತಮಗೆ ತಿಳಿಸಿದ್ದಾರೆ. ಇದರಿಂದ ತಾತ್ಕಾಲಿಕವಾಗಿ ಕುಕ್ಕ ಸಮುದ್ರ ಕೆರೆಗೆ ಒಂದು ವಾರ ಭದ್ರಾ ಡ್ಯಾಂನಿಂದ ನೀರು ಹರಿಸಿದಲ್ಲಿ ನಮ್ಮ ರೈತರ ಕೊಳವೆ ಬಾವಿಗಳ ಅಂತರ್ಜಲ ಹೆಚ್ಚಾಗಲಿದೆ ಎಂದು ತಿಳಿಸಿದರು.ಈ ಸಂಭಂದ ವಿ.ಜೆ. ಎನ್ ಎಲ್, ಅಧಿಕಾರಿಗಳ ಭೇಟಿ ಮಾಡಿದಾಗ ಅವರು 23 ರಂದು ನೀರು ಹರಿಸುವ ಭರವಸೆ ರೈತರಲ್ಲಿ ಭರವಸೆ ಮೂಡಿಸಿದೆ ಎಂದರು.
ಯೋಜನೆಯಲ್ಲಿ ಚಿತ್ರದುರ್ಗ, ತುಮಕೂರು ಭಾಗದಲ್ಲಿ ನೀರಿನ ಕೂಗು ಎದ್ದಾಗ ಚಿತ್ರದುರ್ಗ ಶಾಖಾ ಕಾಲುವೆ (ಸಿಬಿಸಿ) ಮತ್ತು ತುಮಕೂರು ಶಾಖಾ ಕಾಲುವೆ (ಟಿಬಿಸಿ) ರಚನೆಯಾಗಿ ಹೆಬ್ಬೂರಿನಲ್ಲಿ ಜಂಕ್ಷನ್ ಆಯಿತು. ಸದ್ಯದ ಸ್ಥಿತಿಯಲ್ಲಿ ಸಚಿವರಾದ ರಘುಮೂರ್ತಿ ಶೀಘ್ರ ಚಿತ್ರದುರ್ಗಕ್ಕೆ ನೀರು ಹರಿಸಲು ಕ್ರಮ ಕೈಗೊಂಡಿರುವುದರಿಂದ ನಮ್ಮ ಕುಕ್ಕ ಸಮುದ್ರ ಕೆರೆಗೆ ನೀರು ಬರುವ ಆಶಾಭಾವ ವ್ಯಕ್ತವಾಗಿದೆ ಎಂದರು.
ತರೀಕೆರೆ ತಾ. ಹೆಗಡೇಹಳ್ಳಿಯಿಂದ (ಸಿಬಿಸಿ ಎಲ್) 14 ಕಿ.ಮೀ. ಕಾಮಗಾರಿ ಮುಗಿದಿದೆ. 780 ಮೀ. ಮಾತ್ರ ಬಾಕಿ ಇದ್ದು ಅದಕ್ಕೆ ಬಂಡೆ ಹೊಡೆವ ಕೆಲಸ ಸಾಗಿದೆ. 22 ರಂದು ನೀರು ಬರಲು ಗೇಟಿನ ಪಕ್ಕದ ಗೋಡೆ ಹೊಡೆದರೆ ಹಳ್ಳದ ಮೂಲಕ ಕುಕ್ಕಸಮುದ್ರ ಕೆರೆಗೆ ನೀರು ಹರಿಯಲಿದೆ ಎಂದರು.
ಇದೇ ಸಂದರ್ಭದಲ್ಲಿ ಮುಖಂಡರಾದ ಕೆ.ಎಂ.ಮಹೇಶ್ವರಪ್ಪ, ರೇವಣ್ಣ, ನಾಗೇಂದ್ರ , ಬಿದರೆ ಜಗದೀಶ್, ಸೀಗೇಹಡ್ಲು ಹರೀಶ್, ಬೀರೂರು ಮೋಹನ್, ಸೇರಿದಂತೆ ಗ್ರಾಮಸ್ಥರು ಇದ್ದರು.
ಭದ್ರಾ ಮೇಲ್ದಂಡೆ ಶಾಶ್ವತ ಪರಿಷ್ಕೃತ ಯೋಜನೆಯಲ್ಲಿ 5 ಜಿಲ್ಲೆಗಳ 180 ಕೆರೆಗಳಿಗೆ ನೀರು ತುಂಬಲಿದೆ. ಅಧಿಕಾರಿಗಳು ಮತ್ತು ಸಚಿವರು 22-23ರಂದು ನೀರು ಹರಿಸುವುದಾಗಿ ಹೇಳಿದ್ದು,10 ದಿನ ಕಾದು ನೋಡೋಣ ಇಲ್ಲದೇ ಹೋದಲ್ಲಿ ಹೋರಾಟ ಮಾಡೋಣ
16ಕೆಕೆಡಿಯು1.