ಹಿರೇಕೆರೂರು: ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಭದ್ರತೆ, ಆರ್ಥಿಕ ಪ್ರಗತಿಗೆ ಹಾಗೂ ಬಡವರು, ರೈತರು, ಮಹಿಳೆಯರಿಗೆ ಸೌಕರ್ಯಗಳನ್ನು ಕಲ್ಪಿಸಿದ್ದಾರೆ. ದೇಶದ ಭದ್ರತೆಗೆ ಆದ್ಯತೆ ನೀಡಿ ಉಗ್ರರನ್ನು ಮಟ್ಟ ಹಾಕುವ ಕಾರ್ಯ ಮಾಡಿ ದೇಶದ ಜನತೆ ನೆಮ್ಮದಿಯಿಂದ ಇರುವಂತೆ ಮಾಡಿದ್ದು ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಲು ಜನತೆ ಸಂಕಲ್ಪ ಮಾಡಿದ್ದಾರೆ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಬಲಿಷ್ಠ ಭಾರತ ನಿರ್ಮಾಣದ ಜತೆಗೆ ಆಯುಷ್ಮಾನ್ ಭಾರತ, ಪಿಎಂ ಆವಾಸ್ ಯೋಜನೆ, ಶೌಚಾಲಯ ನಿರ್ಮಾಣ, ಉಜ್ವಲ ಯೋಜನೆ, ಮುದ್ರಾ ಯೋಜನೆ, ಕಿಸಾನ್ ಸಮ್ಮಾನ ಯೋಜನೆಗಳಂತಹ ಜನರ ಏಳಗೆ ಹಾಗೂ ನಿತ್ಯ ಜೀವನದಲ್ಲಿ ಅನಕೂಲವಾಗುವಂತಹ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಎಸ್.ಎಸ್. ಪಾಟೀಲ, ಜಿ. ಶಿವನಗೌಡ್ರ, ಗ್ರಾಪಂ ಸದಸ್ಯ ಸಿದ್ದು ಗವಿಯಪ್ಪನವರ, ಲೋಕಪ್ಪ ಹುಲ್ಲತ್ತಿ, ರವಿಶಂಕರ ಬಾಳಿಕಾಯಿ, ಗುತೇಪ್ಪ ಮಾದರ, ಮಾರುತೆಪ್ಪ ಮುಗಳಳ್ಳಿ, ಮಂಜು ಹೊಸಗೌಡ್ರ, ರಮೇಶ ಮಾಗನೂರು, ಪರಮೇಶಪ್ಪ ಗಿರಿಮಳ್ಳಿ, ಸಂಜೀವ ಶ್ರಿರಾಮನಕೋಪ್ಪ, ಸಿದ್ದರಾಜ ಮೂಲಿಮನಿ, ಭೀಮಪ್ಪ ನರೇಗೌಡ್ರ, ಮಲೇಶಪ್ಪ ಜಾಡರ್ ಸೇರಿದಂತೆ ಕಾರ್ಯಕರ್ತರಿದ್ದರು.