ಕಲ್ಕೆರೆ ಮಾರುಗುಡಿಗೆ ಅನುಮತಿ ಪಡೆಯದೇ ಖಾಸಗಿ ವಾಹನದಲ್ಲಿ ಯಾನ
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ರೈತ ಮುಖಂಡರು ಅತಿಕ್ರಮವಾಗಿ ಖಾಸಗಿ ಕಾರು ತೆಗೆದುಕೊಂಡು ಹೋಗಿದ್ದು, ಈ ಸಂಬಂಧ ಅರಣ್ಯ ಇಲಾಖೆಯು ಮುಖಂಡರ ಕಾರುಗಳನ್ನು ಜಪ್ತಿ ಮಾಡಿದ್ದಾರೆ ಎನ್ನಲಾಗಿದೆ. ಆದರೆ ಕೇಸು ದಾಖಲು ಮಾಡಲು ಅರಣ್ಯ ಇಲಾಖೆ ಮುಂದಾಗಿದೆ ಎಂದು ತಿಳಿದು ಬಂದಿದೆ.ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಹೆಡಿಯಾಲ ಉಪ ವಿಭಾಗದ ಐನೋರು ಮಾರಿಗುಡಿ (ಕಲ್ಕರೆ) ವಲಯದಲ್ಲಿನ ಮಾರಮ್ಮನ ದೇವಸ್ಥಾನಕ್ಕೆ ನೂರಾರು ಮಂದಿ ಸಾರ್ವಜನಿಕರು ಟ್ರ್ಯಾಕ್ಟರ್ನಲ್ಲಿ ಹಾಗೂ ರೈತ ಮುಖಂಡರು 2 ಕಾರುಗಳಲ್ಲಿ ಅರಣ್ಯ ಇಲಾಖೆ ಅನುಮತಿ ಇಲ್ಲದೆ ಪರಿಸರ ಸೂಕ್ಷ್ಮ ವಲಯಕ್ಕೆ ಹೋಗಿರುವುದು ಖಚಿತವಾದ ಬಳಿಕ ಟ್ರ್ಯಾಕ್ಟರ್ಗಳಲ್ಲಿ ಹೋಗಿದ್ದವರನ್ನು ಅರಣ್ಯ ಇಲಾಖೆ ಬಿಟ್ಟು ಕಳುಹಿಸಿದೆ.
ಆದರೆ ಸ್ಥಳದಲ್ಲಿದ್ದ ರೈತ ಸಂಘದ ಜಿಲ್ಲಾಧ್ಯಕ್ಷ ಮಾಡ್ರಹಳ್ಳಿ ಮಹದೇವಪ್ಪ, ತಾಲೂಕು ಅಧ್ಯಕ್ಷ ಗಣೇಶ್ ಹಾಗೂ ಮುಖಂಡ ಲೋಕೇಶ್ ಸೇರಿದಂತೆ ಮತ್ತಿತರ ಮುಖಂಡರು ಅರಣ್ಯ ಇಲಾಖೆ ಅನುಮತಿ ಇಲ್ಲದೆ, ಅಕ್ರಮವಾಗಿ ಕಾರು ಸಮೇತ ಹೋಗಿದ್ದಾರೆ. ವಾಪಾಸ್ ಬರುವಾಗ ಅರಣ್ಯ ಇಲಾಖೆ ಸಿಬ್ಬಂದಿ ಪ್ರಶ್ನಿಸಿದಾಗ, ಅವರೊಂದಿಗೆ ಮಾತಿನ ಚಕಮಕಿ ಏರ್ಪಟ್ಟು ರೈತ ಮುಖಂಡರು ಅರಣ್ಯ ಇಲಾಖೆ ವಿರುದ್ಧ ಪ್ರತಿಭಟಿಸಿದ್ದಾರೆ. ಪರಿಣಾಮ ಇಲಾಖೆಯು ಕಾರುಗಳನ್ನು ಜಪ್ತಿ ಮಾಡಿ, ಮದ್ದೂರು ವಲಯ ಅರಣ್ಯ ಕಚೇರಿ ಆವರಣದಲ್ಲಿ ತಂದು ನಿಲ್ಲಿಸಿದೆ.
---
- ಎಲ್. ನಂದೀಶ್, ಡಿಸಿಎಫ್, ಬಂಡೀಪುರ