ಸಾರ್ವಜನಿಕ ಸೇವೆಯಲ್ಲಿ ವೃತ್ತಿನಿಷ್ಠೆಯಿಂದ ಹೆಸರು ಉಳಿಸಿಕೊಳ್ಳಲು ಸಾಧ್ಯ: ಪ್ರಭು

KannadaprabhaNewsNetwork |  
Published : Oct 04, 2024, 01:15 AM IST
ಸಾರ್ವಜನಿಕ ಸೇವೆಯಲ್ಲಿ  ವೃತ್ತಿನಿಷ್ಠೆ ಬೆಳೆಸಿಕೊಂಡಾಗ ಹೆಸರು ಉಳಿಸಿಕೊಳ್ಳಲು ಸಾಧ್ಯ : ಪ್ರಭು | Kannada Prabha

ಸಾರಾಂಶ

ಸಂಘದ ಮಾಜಿ ಅಧ್ಯಕ್ಷರಾದ ಪದ್ಮರಾಜ್ ಬಳ್ಳಾಲ್, ಎ. ಗೋಪಿನಾಥ ರೈ, ಮಾಜಿ ಉಪಾಧ್ಯಕ್ಷ ಎಸ್. ಅರ್ಕಕೀರ್ತಿ ಇಂದ್ರ, ಕುಕ್ಕಿಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶೇಖರ್ ಶೆಟ್ಟಿ, ಸಂಘದ ಸದಸ್ಯರಾದ ಶಶಿಧರ್ ರೈ, ಜಗದೀಶ್ ಆಳ್ವ, ಸಂಘದ ನಿವೃತ್ತ ಲೆಕ್ಕಿಗ ನಾಗರಾಜ್ ನುಡಿನಮನ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಬಂಟ್ವಾಳ

ಸಾರ್ವಜನಿಕ ಸೇವೆಯಲ್ಲಿರುವ ವ್ಯಕ್ತಿಗಳು ವೃತ್ತಿ ನಿಷ್ಠೆಯೊಂದಿಗೆ ಸಮಾಜದ ಎಲ್ಲ ವರ್ಗದ ಜನರೊಂದಿಗೆ ಸಮಾನತೆಯಿಂದ ಬೆರೆತುಕೊಂಡಾಗ ನಿರಂತರವಾಗಿ ಹೆಸರು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಅಭಿಪ್ರಾಯಪಟ್ಟರು.

ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 33 ವರ್ಷಗಳಿಂದ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿಗೊಂಡು ಇತ್ತೀಚಿಗೆ ದೈವಾಧೀನರಾದ ದಿವಂಗತ ಕೆ. ಶೀನ ಶೆಟ್ಟಿ ಅವರಿಗೆ ಸಂಘದ ಬೆಳ್ಳಿಪಾಡಿ ಕೃಷ್ಣ ರೈ ರೈತ ಸಭಾಂಗಣದಲ್ಲಿ ನಡೆದ ಸಾರ್ವಜನಿಕ ಶ್ರದ್ಧಾಂಜಲಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಂಘದ ಮಾಜಿ ಅಧ್ಯಕ್ಷರಾದ ಪದ್ಮರಾಜ್ ಬಳ್ಳಾಲ್, ಎ. ಗೋಪಿನಾಥ ರೈ, ಮಾಜಿ ಉಪಾಧ್ಯಕ್ಷ ಎಸ್. ಅರ್ಕಕೀರ್ತಿ ಇಂದ್ರ, ಕುಕ್ಕಿಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶೇಖರ್ ಶೆಟ್ಟಿ, ಸಂಘದ ಸದಸ್ಯರಾದ ಶಶಿಧರ್ ರೈ, ಜಗದೀಶ್ ಆಳ್ವ, ಸಂಘದ ನಿವೃತ್ತ ಲೆಕ್ಕಿಗ ನಾಗರಾಜ್ ನುಡಿನಮನ ಸಲ್ಲಿಸಿದರು.

ಸಿದ್ದಕಟ್ಟೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ರತ್ನ ಕುಮಾರ್ ಚೌಟ, ರಾಯಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂತೋಷ ಕುಮಾರ್ ರಾಯಿಬೆಟ್ಟು, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆರತಿ ಶೆಟ್ಟಿ, ಮೃತರ ಪುತ್ರ ಆಶೀಶ್ ಶೆಟ್ಟಿ ಉಪಸ್ಥಿತರಿದ್ದರು.

ಸಂಘದ ನಿರ್ದೇಶಕರಾದ ಸಂದೇಶ್ ಶೆಟ್ಟಿ ಪೊಡಂಬ, ರಾಜೇಶ್ ಶೆಟ್ಟಿ ಕೊನೆರಬೆಟ್ಟು, ಜಾರಪ್ಪ ನಾಯ್ಕ್, ಉಮೇಶ್ ಗೌಡ, ದೇವರಾಜ ಸಾಲಿಯಾನ್, ಶ್ರೀಮತಿ ಅರುಣಾ ಎಸ್ ಶೆಟ್ಟಿ, ಮಂದಾರತಿ ಎಸ್. ಶೆಟ್ಟಿ, ವೃತ್ತಿ ಪರ ನಿರ್ದೇಶಕರಾದ ಮಾಧವ ಶೆಟ್ಟಿಗಾರ್, ಮಾಜಿ ನಿರ್ದೇಶಕರಾದ ಸೀತಾರಾಮ ಶೆಟ್ಟಿ, ವಸಂತ ಗೌಡ,ಪ್ರಮುಖರಾದ ಲೋಕೇಶ್ ಶೆಟ್ಟಿ ಸಿದ್ದಕಟ್ಟೆ ಜಯರಾಮ ಅಡಪ,ಜಗತ್ ಪಾಲ ಶೆಟ್ಟಿ, ರಶ್ಮಿತ್ ಶೆಟ್ಟಿ,ಪುರಂದರ ಭಟ್, ಹರಿಪ್ರಸಾದ್ ಶೆಟ್ಟಿ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು. ಸಂಘದ ಸಿಬ್ಬಂದಿ ಸುಭಾಷ್‌ ಬಂಗೇರ ಇದ್ದರು.

PREV

Recommended Stories

ವಿಶ್ವಾದ್ಯಂತ ಒಂದೇ ದಿನ ಕಾಂತಾರ ಚಾಪ್ಟರ್ 1 ಬಿಡುಗಡೆ
ಈರುಳ್ಳಿ, ಹೂ, ಪಚ್ಚ ಬಾಳೆ ಬೆಲೆ ಧರೆಗೆ!