ರಂಗ ಕಲೆಗಳ ಉತ್ತೇಜನಕ್ಕೆ ಒತ್ತಾಸೆ ಅಗತ್ಯ: ಕೃಷ್ಣಪ್ಪ

KannadaprabhaNewsNetwork |  
Published : Mar 30, 2024, 12:54 AM IST
ದೊಡ್ಡಬಳ್ಳಾಪುರದ ಕನ್ನಡ ಜಾಗೃತ ಭವನದಲ್ಲಿ ಬೆಂ.ಗ್ರಾ ಜಿಲ್ಲಾ ರಂಗಭೂಮಿ ಕಲಾವಿದರ ಸಂಘದಿಂದ ನಡೆದ ವಿಶ್ವ ರಂಗಭೂಮಿ ದಿನಾಚರಣೆ ಕಾರ್‍ಯಕ್ರಮದಲ್ಲಿ ಹಿರಿಯ ಕಲಾವಿದರಿಗೆ ರಂಗ ಕೌಸ್ತುಭ ಬಿರುದು ನೀಡಿ ಅಭಿನಂದಿಸಲಾಯಿತು. | Kannada Prabha

ಸಾರಾಂಶ

ದೊಡ್ಡಬಳ್ಳಾಪುರ: ರಂಗ ಕಲೆಗಳ ಉತ್ತೇಜನಕ್ಕೆ ಎಲ್ಲ ವಲಯಗಳ ಒತ್ತಾಸೆ ಅಗತ್ಯವಾಗಿದೆ. ಸರ್ಕಾರದ ಸಂಸ್ಥೆಗಳ ಜತೆಗೆ ಜನಸಂಘಟನೆಗಳೂ ಕಲಾ ಪ್ರಜ್ಞೆಯ ಜೀವಂತಿಕೆಯ ಆಶಯವನ್ನು ಪ್ರತಿನಿಧಿಸುವುದು ಅಗತ್ಯ ಎಂದು ಬೆಂ.ಗ್ರಾ. ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಎನ್.ಕೃಷ್ಣಪ್ಪ ಹೇಳಿದರು.

ದೊಡ್ಡಬಳ್ಳಾಪುರ: ರಂಗ ಕಲೆಗಳ ಉತ್ತೇಜನಕ್ಕೆ ಎಲ್ಲ ವಲಯಗಳ ಒತ್ತಾಸೆ ಅಗತ್ಯವಾಗಿದೆ. ಸರ್ಕಾರದ ಸಂಸ್ಥೆಗಳ ಜತೆಗೆ ಜನಸಂಘಟನೆಗಳೂ ಕಲಾ ಪ್ರಜ್ಞೆಯ ಜೀವಂತಿಕೆಯ ಆಶಯವನ್ನು ಪ್ರತಿನಿಧಿಸುವುದು ಅಗತ್ಯ ಎಂದು ಬೆಂ.ಗ್ರಾ. ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಎನ್.ಕೃಷ್ಣಪ್ಪ ಹಙೇಳಿದರು.

ದೊಡ್ಡಬಳ್ಳಾಪುರದ ಕನ್ನಡ ಜಾಗೃತ ಭವನದಲ್ಲಿ ಬುಧವಾರ ಬೆಂ.ಗ್ರಾ. ಜಿಲ್ಲಾ ರಂಗಭೂಮಿ ಕಲಾವಿದರ ಸಂಘದ ನೇತೃತ್ವದಲ್ಲಿ ನಡೆದ ವಿಶ್ವ ರಂಗಭೂಮಿ ದಿನಾಚರಣೆ ಕಾರ್‍ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಂಗ ಕಲೆಗಳ ಉತ್ತೇಜನಕ್ಕೆ ಸರ್ಕಾರದ ಜತೆಗೆ ಸ್ಥಳೀಯ ಆಡಳಿತ ವ್ಯವಸ್ಥೆ ಹಾಗೂ ಸಂಘಟನೆಗಳ ಸಹಕಾರ ಮುಖ್ಯ. ಸಮಕಾಲೀನ ಅಗತ್ಯತೆಗಳಿಗೆ ಪೂರಕವಾಗಿ ರಂಗ ಚಿಂತನೆಗಳು ವಿಸ್ತರಣೆಯಾಗುವ ಅಗತ್ಯವಿದೆ ಎಂದು ಅವರು ತಿಳಿಸಿದರು.

ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಅಧ್ಯಕ್ಷ ಡಾ.ಹುಲಿಕಲ್ ನಟರಾಜ್ ಮಾತನಾಡಿ, ಹೊಸಪೀಳಿಗೆಯ ಕಲಾವಿದರು ಹೆಚ್ಚಿನ ಸಂಖ್ಯೆಯಲ್ಲಿ ರಂಗ ಅಖಾಡ ಪ್ರವೇಶಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದ ಅವರು, ಸ್ಥಳೀಯ ಹಂತದಲ್ಲಿ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಅನೇಕ ಯೋಜನೆಗಳಿವೆ. ಅವುಗಳ ಕುರಿತ ಅರಿವು, ಸಹಭಾಗಿಯಾಗುವ ಉತ್ಸಾಹ ಮುಖ್ಯವಾಗಿದೆ ಎಂದರು.

ಬೆಂ.ಗ್ರಾ. ಜಿಲ್ಲಾ ರಂಗಭೂಮಿ ಕಲಾವಿದರ ಸಂಘದ ಗೌರವಾಧ್ಯಕ್ಷ ಡಾ.ಕೆ.ಎಂ.ಕೃಷ್ಣಮೂರ್ತಿ, ದೊಡ್ಡಬಳ್ಳಾಪುರ ಸಾಂಸ್ಕೃತಿಕ ಕಲಾ ಚಟುವಟಿಕೆಗಳಿಗೆ ಹೆಸರಾಗಿದ್ದು, ಇಲ್ಲಿನ ನಾಟಕ, ಸಾಂಸ್ಕೃತಿಕ ಪರಂಪರೆ ಅನನ್ಯವಾಗಿದೆ. ಬಹುದೊಡ್ಡ ನಾಟಕ ಪರಂಪರೆ ಹಾಗೂ ಕಲಾವಿದ ಬಳಗವನ್ನು ಹೊಂದಿರುವ ದೊಡ್ಡಬಳ್ಳಾಪುರದಲ್ಲಿ ನಾಡಿನ ಅಪ್ರತಿಮ ಕಲಾವಿದರನೇಕರು ತಮ್ಮ ಪ್ರತಿಭಾ ಪ್ರದರ್ಶನವನ್ನು ನೀಡಿರುವುದು ಇತಿಹಾಸ. ಕಲಾ ಕ್ಷೇತ್ರದಲ್ಲಿ ಮಹಿಳೆಯರ ಕೊಡುಗೆ ಆಪಾರ ಎಂದರು.

ಜಿಲ್ಲಾ ಕಲಾವಿದರ ಸಂಘದ ಅಧ್ಯಕ್ಷ ಡಾ.ರಬ್ಬನಹಳ್ಳಿ ಕೆಂಪಣ್ಣ ಮಾತನಾಡಿ, ಒಂದೇ ಮಾದರಿಯ ನಾಟಕಗಳಿಂದ ಹೊಸ ಪ್ರೇಕ್ಷಕವಲಯವನ್ನು ಸೃಷ್ಟಿಸಲು ಸಾಧ್ಯವಿಲ್ಲ. ಈ ಹಂತದಲ್ಲಿ ಕನ್ನಡ ನಾಟಕ ಸಾಹಿತ್ಯ ಪರಂಪರೆಯನ್ನು ಹೊಸ ನಿರೀಕ್ಷೆಗಳಿಗೆ ಪೂರಕವಾಗಿ ಸಜ್ಜುಗೊಳಿಸುವುದು ಅಗತ್ಯ. ನಾಟಕ ಅಕಾಡೆಮಿ ಈ ಹಂತದಲ್ಲಿ ರಚನಾತ್ಮಕವಾಗಿ ಚಿಂತಿಸಬೇಕು ಎಂದರು.

ನಾಟಕ ಅಕಾಡೆಮಿ ಪುರಸ್ಕಾರ ವಿಜೇತ ಕಲಾವಿದ ಕೆ.ಪಿ.ಪ್ರಕಾಶ್, ರಂಗಭೂಮಿ ದಿನಾಚರಣೆಯ ಸಂದೇಶ ಓದಿದರು.

ಬೆಂ.ಗ್ರಾ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್‍ಯದರ್ಶಿ ಪ್ರೊ.ಕೆ.ಆರ್.ರವಿಕಿರಣ್, ಕೋಶಾಧ್ಯಕ್ಷ ಡಾ.ಮುನಿರಾಜು, ದೇವನಹಳ್ಳಿ ತಾ.ಕಲಾವಿದರ ಸಂಘದ ಅಧ್ಯಕ್ಷ ಮೋಹನ್‌ ಬಾಬು, ಹೊಸಕೋಟೆಯ ನಟರಾಜ್, ಕಲಾವಿದರ ಸಂಘದ ಪದಾಧಿಕಾರಿಗಳಾದ ಸಿದ್ದರಾಮಯ್ಯ, ನಾಗರಾಜ್, ಮಂಜುನಾಥ್, ಮುನಿರಾಜು, ಶ್ರೀಧರ್‌ಗೌಡ, ಪುಟ್ಟಸಿದ್ದಯ್ಯ, ಕೆ.ನಾಗರತ್ನಮ್ಮ, ಮುನಿರಾಜು, ಸಂಜೀವರಾಯಪ್ಪ ಮತ್ತಿತರರು ಉಪಸ್ಥಿತರಿದ್ದರು.ಬಾಕ್ಸ್...........

8 ಕಲಾವಿದರಿಗೆ ರಂಗ ಕೌಸ್ತುಭ ಬಿರುದು:

ಇದೇ ವೇಳೆ ದೇವನಹಳ್ಳಿಯ ಚಂದ್ರಶೇಖರ್, ವಿ.ಗೋವಿಂದರಾಜು, ವಿಜಯಪುರದ ಎ.ಎಂ.ನಾರಾಯಣಸ್ವಾಮಿ, ಹೊಸಕೋಟೆಯ ಸಿ.ನಾರಾಯಣಸ್ವಾಮಿ, ಲಿಂಗನಹಳ್ಳಿಯ ಎಲ್.ಎಸ್.ನಾರಾಯಣಸ್ವಾಮಿ, ಕೊನಘಟ್ಟದ ರಾಮಣ್ಣ, ನೆಲಮಂಗಲದ ಎ.ಕೃಷ್ಣಯ್ಯ, ಕನಸವಾಡಿಯ ಸುಂದರಯ್ಯ ಅವರಿಗೆ ರಂಗ ಕೌಸ್ತುಭ ಬಿರುದು ನೀಡಿ ಅಭಿನಂದಿಸಲಾಯಿತು.

ಸುಗಮ ಸಂಗೀತ, ಭಜನೆ, ಜನಪದ ಗೀತೆ, ಸೋಬಾನೆ ಪದಗಳು, ಚಲನಚಿತ್ರ ಗೀತೆಗಳು, ಏಕಪಾತ್ರಾಭಿನಯ, ಭರತನಾಟ್ಯ, ಕಿರುನಾಟಕ ಸೇರಿದಂತೆ ಅನೇಕ ಕಲಾ ಪ್ರದರ್ಶನಗಳು ನಡೆದವು.

27ಕೆಡಿಬಿಪಿ1-

ದೊಡ್ಡಬಳ್ಳಾಪುರದ ಕನ್ನಡ ಜಾಗೃತ ಭವನದಲ್ಲಿ ಬೆಂ.ಗ್ರಾ ಜಿಲ್ಲಾ ರಂಗಭೂಮಿ ಕಲಾವಿದರ ಸಂಘದಿಂದ ನಡೆದ ವಿಶ್ವ ರಂಗಭೂಮಿ ದಿನಾಚರಣೆ ಕಾರ್‍ಯಕ್ರಮದಲ್ಲಿ ಹಿರಿಯ ಕಲಾವಿದರಿಗೆ ರಂಗ ಕೌಸ್ತುಭ ಬಿರುದು ನೀಡಿ ಅಭಿನಂದಿಸಲಾಯಿತು.27ಕೆಡಿಬಿಪಿ2-

ದೊಡ್ಡಬಳ್ಳಾಪುರದಲ್ಲಿ ನಡೆದ ಜಿಲ್ಲಾ ಮಟ್ಟದ ವಿಶ್ವ ರಂಗಭೂಮಿ ದಿನಾಚರಣೆ ಕಾರ್‍ಯಕ್ರಮವನ್ನು ಕಲಾವಿದರ ಸಂಘದ ಗೌರವಾಧ್ಯಕ್ಷ ಕೆ.ಎಂ.ಕೃಷ್ಣಮೂರ್ತಿ, ಕಸಾಪ ಜಿಲ್ಲಾಧ್ಯಕ್ಷ ಕೃಷ್ಣಪ್ಪ ಉದ್ಘಾಟಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''