ಗಂಗಾವತಿ: ತಾಲೂಕಿನಲ್ಲಿ ಸಾಕಷ್ಟು ಅರಣ್ಯ ಪ್ರದೇಶವಿದೆ. ಕೂಡಲೇ ಈ ಪ್ರದೇಶವನ್ನು ಮಹರ್ಷಿ ವಾಲ್ಮೀಕಿ ಅಭಯಾರಣ್ಯ ಪ್ರದೇಶವೆಂದು ಘೋಷಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಶಾಸಕ ಜನಾರ್ದನ ರೆಡ್ಡಿ ಹೇಳಿದರು.
ಅಂಜನಾದ್ರಿಯಲ್ಲಿ 5 ಸಾವಿರ ಜನರು ಕೂಡುವ ಕನ್ವೆನ್ಶನಲ್ ಹಾಲ್ ನಿರ್ಮಾಣಕ್ಕೆ ಪ್ರಯತ್ನ ನಡೆದಿದೆ. ರಾಜ್ಯ, ರಾಷ್ಟ್ರ ಮಟ್ಟದ ಗಮನ ಸೆಳೆಯುವಂತೆ ಮಾಡಲಾಗುತ್ತದೆ. ನಗರದಲ್ಲಿ ವಾಲ್ಮೀಕಿ ಸಮಾಜದ ಕಲ್ಯಾಣ ಮಂಟಪ ವಸತಿ ನಿಲಯ ಸೇರಿದಂತೆ ಕಾಲೋನಿ ನಿರ್ಮಿಸಲಾಗುತ್ತದೆ ಎಂದರು.
ಮಾಜಿ ವಿಪ ಸದಸ್ಯ ಎಚ್.ಆರ್.ಶ್ರೀನಾಥ ಮಾತನಾಡಿ, ವಾಲ್ಮೀಕಿ ಋಷಿ ಜಗತ್ತಿಗೆ ಆದರ್ಶವಾಗಿದ್ದಾರೆ. ವಾಲ್ಮೀಕಿ ಸಮಾಜ ಹಿಂದುಳಿದಿದೆ. ಜನಪ್ರತಿಗಳು ನ್ಯಾಯ ಒದಗಿಸದೇ ಇರುವುದು ವಿಷಾದಕರ ಸಂಗತಿ. ಈ ಹಿಂದೆ ಶಾಸಕರಾಗಿದ್ದ ಪರಣ್ಣ ಮುನವಳ್ಳಿ ಕಲ್ಯಾಣ ಮಂಟಪಕ್ಕೆ ₹1 ಕೋಟಿ ನೀಡಿದ್ದಾರೆ. ಜನಾರ್ದನ ರೆಡ್ಡಿ ಸಹಕಾರ ನೀಡುತ್ತಿದ್ದಾರೆ. ಗುಡ್ಡಗಾಡು ಪ್ರದೇಶವನ್ನು ವಾಲ್ಮೀಕಿ ಅಭಯಾರಣ್ಯವಾಗಿ ಘೋಷಿಸಬೇಕು. ರಸ್ತೆ ಅಭಿವೃದ್ಧಿಯಾಗ ಬೇಕು ಎಂದರು.ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ಈ ಹಿಂದೆ ತಾವು ನೀಡಿದ ಅನುದಾನದಿಂದ ಹಾಸ್ಟೇಲ್, ಕಲ್ಯಾಣ ಮಂಟಪ ನಿರ್ಮಾಣವಾಗುತ್ತಿದೆ. ಶಾಸಕರು ಇದನ್ನು ಮುಂದುವರಿಸಿಕೊಂಡು ಹೋಗಲಿ ಎಂದು ಸಲಹೆ ನೀಡಿದರು. ಮಹರ್ಶಿ ವಾಲ್ಮೀಕಿ ಆದರ್ಶ ತತ್ವಗಳನ್ನು ಪಾಲಿಸಿರಿ ಎಂದರು.