ಗಡಿ ರಕ್ಷಿಸುವುದು ಸೈನಿಕನ ಪ್ರಾಥಮಿಕ ಜವಾಬ್ದಾರಿ: ಚನ್ನಬಸಪ್ಪ ಹುಲ್ಲತ್ತಿ

KannadaprabhaNewsNetwork |  
Published : Aug 04, 2026, 02:00 AM IST
ಬ್ಯಾಡಗಿ ದೇಶ ಸೇವೆ ಪೂರ್ಣಗೊಳಿಸಿದ ತಾಲೂಕಿನ ಶಿಡೇನೂರ ಗ್ರಾಮದ ಸೈನಿಕ ನಿವೃತ್ತ ಯೋಧ ನೂರಅಹ್ಮದ ಇಂಗಳಗೊಂದಿ ಅವರಿಗೆ ಗ್ರಾಮದ ವತಿಯಿಂದ ಸನ್ಮಾನ ಸಮಾರಂಭ ಜರುಗಿತು. | Kannada Prabha

ಸಾರಾಂಶ

ರಾಷ್ಟ್ರೀಯ ಭದ್ರತೆ ಕಾಪಾಡುವುದರ ಜೊತೆಗೆ, ಪ್ರಾದೇಶಿಕ ಗಡಿ ರಕ್ಷಿಸುವುದು ಸೈನಿಕನ ಪ್ರಾಥಮಿಕ ಜವಾಬ್ದಾರಿ. "ಸ್ವಯಂ ಸೇವೆಗೆ ಮುನ್ನ ದೇಶ ಸೇವೆ " ಎಂಬ ಮೂಲ ತತ್ವದೊಂದಿಗೆ ನಿಯಂತ್ರಿಸಲ್ಪಡುವ ಸೈನಿಕನ ಕರ್ತವ್ಯ ಬಾಹ್ಯ ಆಕ್ರಮಣ ಮತ್ತು ಆಂತರಿಕ ಬೆದರಿಕೆಗಳಿಂದ ದೇಶದ ರಕ್ಷಣೆಯಾಗಿದೆ ಎಂದು ಕೆಸಿಸಿ ಬ್ಯಾಂಕ್ ನಿರ್ದೇಶಕ ಚನ್ನಬಸಪ್ಪ ಹುಲ್ಲತ್ತಿ ಅಭಿಪ್ರಾಯ ವ್ಯಕ್ತಪಡಿಸಿದರು.

ಬ್ಯಾಡಗಿ: ರಾಷ್ಟ್ರೀಯ ಭದ್ರತೆ ಕಾಪಾಡುವುದರ ಜೊತೆಗೆ, ಪ್ರಾದೇಶಿಕ ಗಡಿ ರಕ್ಷಿಸುವುದು ಸೈನಿಕನ ಪ್ರಾಥಮಿಕ ಜವಾಬ್ದಾರಿ. "ಸ್ವಯಂ ಸೇವೆಗೆ ಮುನ್ನ ದೇಶ ಸೇವೆ " ಎಂಬ ಮೂಲ ತತ್ವದೊಂದಿಗೆ ನಿಯಂತ್ರಿಸಲ್ಪಡುವ ಸೈನಿಕನ ಕರ್ತವ್ಯ ಬಾಹ್ಯ ಆಕ್ರಮಣ ಮತ್ತು ಆಂತರಿಕ ಬೆದರಿಕೆಗಳಿಂದ ದೇಶದ ರಕ್ಷಣೆಯಾಗಿದೆ ಎಂದು ಕೆಸಿಸಿ ಬ್ಯಾಂಕ್ ನಿರ್ದೇಶಕ ಚನ್ನಬಸಪ್ಪ ಹುಲ್ಲತ್ತಿ ಅಭಿಪ್ರಾಯ ವ್ಯಕ್ತಪಡಿಸಿದರು.

ದೇಶ ಸೇವೆ ಪೂರ್ಣಗೊಳಿಸಿದ ತಾಲೂಕಿನ ಶಿಡೇನೂರ ಗ್ರಾಮದ ಸೈನಿಕ ನಿವೃತ್ತಯೋಧ ನೂರಅಹ್ಮದ ಇಂಗಳಗೊಂದಿ ಅವರಿಗೆ ಏರ್ಪಡಿಸಿದ್ದ ಸನ್ಮಾನ ಸಮಾರಂಭವನ್ನುದ್ದೇಶಿಸಿ ಅವರು ಮಾತನಾಡಿದರು.

ಸಂಪೂರ್ಣ ನಿಷ್ಠೆ: ಮಾತೃಭೂಮಿಯ ಸಾರ್ವಭೌಮತ್ವ ಮತ್ತು ಶಾಂತಿ ಕಾಪಾಡಲು ಅಂತಿಮ ಯೋಧರ ತ್ಯಾಗ ಮಹತ್ವದ ಸ್ಥಾನವನ್ನು ಪಡೆದುಕೊಂಡಿದೆ. ನಿವೃತ್ತ ಯೋಧ ನೂರಅಹ್ಮದ ಕಳೆದ 28 ವರ್ಷದಿಂದ ಸೈನಿಕನಾಗಿ ಅತ್ಯಂತ ಕಷ್ಟದ ಸಂದರ್ಭಗಳನ್ನು ಎದುರಿಸಿದ ಹೆಮ್ಮೆಯ ಪುತ್ರನಾಗಿದ್ದು ಇಂತಹ ಯೋಧನಿಗೆ ಗ್ರಾಮದಲ್ಲಿ ದೊರೆತಿರುವ ಅಭೂತ ಪೂರ್ವ ಸ್ವಾಗತ ನಿಜಕ್ಕೂ ಅತ್ಯಂತ ಶ್ಲಾಘನೀಯ ಎಂದರು.

ಚಿರಋಣಿಯಾಗಿರುತ್ತೇನೆ: ಸನ್ಮಾನ ಸ್ವೀಕರಿಸಿ ಮಾತನಾಡಿದ ನೂರಅಹ್ಮದ, ಗಡಿಗಳ ರಕ್ಷಣೆ, ವಿಪರೀತ ಹವಾಮಾನ ಮತ್ತು ಭೂಪ್ರದೇಶದ ಅಡಿಯಲ್ಲಿ ವಿದೇಶಿ ಆಕ್ರಮಣ, ಒಳನುಸುಳುವಿಕೆ ಮತ್ತು ಅಕ್ರಮ ದಾಟುವಿಕೆಗಳ ವಿರುದ್ಧ ಗಡಿಗಳನ್ನು ಕಾಪಾಡುವುದು ಸೇರಿದಂತೆ ಗರಿಷ್ಠ ದೈಹಿಕ ಸ್ವಾಸ್ಥ್ಯ ಶಸ್ತ್ರಾಸ್ತ್ರ ಪ್ರಾವೀಣ್ಯತೆ ಮತ್ತು ಒಂದು ಕ್ಷಣದ ಸೂಚನೆಯಲ್ಲಿ ನಿಯೋಜಿಸಲು ಯುದ್ಧತಂತ್ರದ ಕೌಶಲ್ಯಗಳನ್ನು ಕಾಪಾಡಿಕೊಳ್ಳುವ ಮೂಲಕ ಯುದ್ಧ ಸಿದ್ಧತೆಯಲ್ಲಿರಬೇಕಾಗುತ್ತದೆ, ನಿವೃತ್ತಿಯ ಬಳಿಕ ಗ್ರಾಮಸ್ಥರು ಇದೀಗ ನನ್ನ ಮೇಲೆ ತೋರುತ್ತಿರುವ ಅಪಾರ ಗೌರವ ಹಾಗೂ ಸನ್ಮಾನಗಳಿಗೆ ನಾನು ಚಿರಋಣಿಯಾಗಿರುತ್ತೇನೆ ಎಂದರು. ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳ ಉಪಾಧ್ಯಕ್ಷ ಶಂಭನಗೌಡ ಪಾಟೀಲ ಸೇರಿದಂತೆ ಮಂಜುನಾಥ ನಂದಿಹಳ್ಳಿ, ಬಸವರಾಜ ಅರಳೀಕಟ್ಟಿ, ಈರಪ್ಪ ತೆವರಿ, ಶಂಕ್ರಪ್ಪ ಬಣಕಾರ ಹಾಗೂ ಇನ್ನತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಫ್‌ಪಿಒಗಳ ಅಭಿವೃದ್ಧಿಗೆ ಮೌಲ್ಯವರ್ಧನೆ, ಇ-ಮಾರ್ಕೆಟಿಂಗ್ ಅಗತ್ಯ: ಜಯಣ್ಣ
ಬೂತಮಟ್ಟದಲ್ಲಿ ಪಕ್ಷ ಸಂಘಟನೆಗೆ ಒತ್ತು