ಕಾವೇರಿ ನದಿ ರಕ್ಷಣೆ ಜನಸಮುದಾಯದ ಹೊಣೆ

KannadaprabhaNewsNetwork |  
Published : Feb 03, 2026, 02:45 AM IST
ಆರತಿ  ಕಾರ್ಯಕ್ರಮ ಸಂದರ್ಭ | Kannada Prabha

ಸಾರಾಂಶ

ಜೀವ ಕೋಟಿಗಳ ಸಲಹುವ ಜೀವ ನದಿ ಕಾವೇರಿ ನದಿಯ ಸಂರಕ್ಷಣೆ ನಾಡಿನ ಪ್ರತಿಯೊಂದು ಜನ ಸಮುದಾಯದ ಹೊಣೆಯಾಗುವ ಮೂಲಕ ಗಂಗಾ ಜಲವನ್ನು ಪೂಜನೀಯವಾಗಿಸಬೇಕು ಎಂದು ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಪೀಠಾಧಿಪತಿ ಶ್ರೀ ಸದಾಶಿವ ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಕುಶಾಲನಗರ

ಜೀವ ಕೋಟಿಗಳ ಸಲಹುವ ಜೀವ ನದಿ ಕಾವೇರಿ ನದಿಯ ಸಂರಕ್ಷಣೆ ನಾಡಿನ ಪ್ರತಿಯೊಂದು ಜನ ಸಮುದಾಯದ ಹೊಣೆಯಾಗುವ ಮೂಲಕ ಗಂಗಾ ಜಲವನ್ನು ಪೂಜನೀಯವಾಗಿಸಬೇಕು ಎಂದು ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಪೀಠಾಧಿಪತಿ ಶ್ರೀ ಸದಾಶಿವ ಸ್ವಾಮೀಜಿ ಹೇಳಿದರು.

ಕುಶಾಲನಗರದ ಕಾವೇರಿ ಮಹಾ ಆರತಿ ಬಳಗ ಆಶ್ರಯದಲ್ಲಿ ಸ್ಥಳೀಯ ವೀರಶೈವ ಸಮಾಜದ ಸಹಯೋಗದಲ್ಲಿ ಅಯ್ಯಪ್ಪ ಸ್ವಾಮಿ ದೇವಾಲಯ ಬಳಿಯ ಕಾವೇರಿ ಆರತಿ ಕ್ಷೇತ್ರದಲ್ಲಿ ಹುಣ್ಣಿಮೆ ಅಂಗವಾಗಿ ನಡೆದ 182ನೇ ಮಹಾ ಆರತಿ ಕಾರ್‍ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೇವರ ಸೃಷ್ಟಿಯಾಗಿರುವ ಕಾವೇರಿ ಜೀವ ಜಲಕ್ಕೆ ಮಾನವನ ಹಸ್ತಕ್ಷೇಪ ಇಲ್ಲದೇ ಹೋದಲ್ಲಿ ನದಿಯ ಅಸ್ತಿತ್ವವು ಉಳಿಯುತ್ತದೆ ಹಾಗೂ ಸ್ವಚ್ಛಂದವಾಗಿ ಹರಿಯಲು ಸಾಧ್ಯ ಎಂದ ಶ್ರೀಗಳು, ನಿರಂತರ ಆರಾಧನೆ ಮೂಲಕ ನದಿ ಪರಿಸರದ ಸಂರಕ್ಷಣೆ ಆಗಲಿ ಎಂದು ಆಶಯ ವ್ಯಕ್ತಪಡಿಸಿದರು.ವೀರಶೈವ ಮಹಾಸಭಾದ ಕೊಡಗು ಜಿಲ್ಲಾ ಅಧ್ಯಕ್ಷ ಎಚ್.ವಿ. ಶಿವಪ್ಪ ಮಾತನಾಡಿ, ಕುಶಾಲನಗರದಲ್ಲಿ ಹರಿದಿರುವ ಕಾವೇರಿ ನದಿಯ ಪರಿಸರ ಇಂದು ಒಂದಷ್ಟು ಸ್ವಚ್ಚಂದವಾಗಿ ಇದೆ ಎಂದಾದರೆ ಅದು ಸಾಮಾಜಿಕ ಚಿಂತನೆಯ ನದಿ ಉಳಿವಿನ ಹೋರಾಟಗಾರ ಚಂದ್ರಮೋಹನ್ ಅವರ ಶ್ರಮದ ಫಲ. ನದಿಗೆ ಯಾರು ಕೂಡ ತ್ಯಾಜ್ಯ ಎಸೆಯದಂತೆ, ಸ್ವಚ್ಛಂದವಾಗಿ ಹರಿಯಲು ಪ್ರತಿಯೊಬ್ಬರೂ ಕೈಜೋಡಿಸಬೇಕಾಗಿದೆ ಎಂದರು. ನದಿ ಸ್ವಚ್ಚತಾ ಆಂದೋಲನದ ಸಂಚಾಲಕ ಎಂ.ಎನ್. ಚಂದ್ರಮೋಹನ್ ಮಾತನಾಡಿ, ನದಿ ದಂಡೆಗೆ ಕಾಲಿಡದಷ್ಟು ಕೊಳಚೆಯಾಗಿದ್ದ ನದಿ ತಟ ಪರಿಸರ ಸ್ವಚ್ಛತೆಗೆ ಕಳೆದ ಎರಡು ದಶಕಗಳಿಂದಲೂ ನಿರಂತರ ಶ್ರಮ ವಹಿಸಿ ಒಂದಷ್ಟು ಸ್ವಚ್ಛತೆ ಹಾಗೂ ಪೂಜ್ಯತಾ ಭಾವನೆ ಮೂಡಿಸುವಲ್ಲಿ ಯಶಸ್ಸು ಕಂಡಿದ್ದೇವೆ. ಬೊಗಸೆಯಿಂದ ಕುಡಿಯಲು ಯೋಗ್ಯವಾಗಿದ್ದ ಕಾವೇರಿ ನೀರು ಇಂದು ಕಲುಷಿತ ಗೊಳ್ಳದಂತೆ ಎಲ್ಲರ ಸಹಕಾರ ಅಗತ್ಯ ಎಂದರು.ಹಿರಿಯ ಅರ್ಚಕ ಕೃಷ್ಣಮೂರ್ತಿ ಭಟ್ ಅವರು ಅಷ್ಟೋತ್ತರ ಕುಂಕುಮಾರ್ಚನೆ ಮಾಡಿದ ನಂತರ ನದಿಗೆ ಸಾಮೂಹಿಕವಾಗಿ ಆರತಿ ಬೆಳಗಲಾಯಿತು.ಮಹಾಸಭಾದ ಜಿಲ್ಲಾ ಕಾರ್‍ಯದರ್ಶಿ ಶಾಂಬಶಿವಯ್ಯ, ಉಪಾಧ್ಯಕ್ಷ ಎಚ್.ಪಿ. ಉದಯ ಕುಮಾರ್, ಜಿಲ್ಲಾ ಶರಣ ಸಾಹಿತ್ಯ ಪರಿಷತ್‌ ಅಧ್ಯಕ್ಷ ಕೆ.ಎಸ್. ಮೂರ್ತಿ, ಜಿಲ್ಲಾ ಕಾರ್‍ಯದರ್ಶಿ ಬಿ. ನಟರಾಜು,ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಜಿಲ್ಲಾ ನಿರ್ದೇಶಕಿ ಲೀಲಾವತಿ, ಯೋಜನಾಧಿಕಾರಿ ಹನುಮಂತಪ್ಪ ಅಂಗಡಿ, ಮೇಲ್ವಿಚಾರಕರಾದ ನಾಗರಾಜ್, ಕಾವೇರಿ ಮಹಾ ಆರತಿ ಬಳಗದ ಸಂಚಾಲಕಿ ವನಿತಾ ಚಂದ್ರಮೋಹನ್, ಧರಣಿ ಸೋಮಯ್ಯ, ಕುಶಾಲನಗರ ತಾಲೂಕು ಮಹಾಸಭಾ ಅಧ್ಯಕ್ಷ ಎಚ್.ಎಂ. ಮಧುಸೂದನ್, ಕಾರ್‍ಯದರ್ಶಿ ಶುಭಶೇಖರ್, ಕುಶಾಲನಗರ ಅಕ್ಕನ ಬಳಗದ ಅಧ್ಯಕ್ಷೆ ಕಮಲಾ ಉದಯ ಕುಮಾರ್, ಮಾಜಿ ಅಧ್ಯಕ್ಷೆ ವಿಜಯಪಾಲಾಕ್ಷ, ಸರೋಜಾ ಆರಾಧ್ಯ, ಡಾ. ದೀಪಿಕಾ, ವೇದಾವತಿ,

ನಿವೃತ್ತ ಪ್ರಾಂಶುಪಾಲ ಕೆಂಚಪ್ಪ, ಉಪನ್ಯಾಸಕ ಪರಮೇಶ್, ಗಣೇಶ್, ವಿರೂಪಾಕ್ಷ, ಹೇಮಲತಾ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾವೇರಿ 33 ಹಳ್ಳಿಗಳಲ್ಲಿ ಪ್ರತಿ ದಿನ ಸಂಜೆ 7- 9 ಗಂಟೆವರೆಗೆ ಮೊಬೈಲ್‌, ಟಿವಿ ಬಂದ್‌
ಗೃಹಲಕ್ಷ್ಮೀಯರಿಗೆ ಗುಡ್ ನ್ಯೂಸ್ ಕೊಟ್ರು ಸಚಿವೆ ಲಕ್ಷ್ಮೀ