ಕನ್ನಡಪ್ರಭ ವಾರ್ತೆ ಸವದತ್ತಿ
ಕನೇರಿಮಠದ ಅದೃಷ್ಯ ಕಾಡಸಿದ್ದೇಶ್ವರ ಸ್ವಾಮೀಜಿಯವರಿಗೆ ವಿವಿಧ ಜಿಲ್ಲೆಗಳಿಗೆ ಪ್ರವೇಶ ನಿಷೇಧಿಸಿರುವುದನ್ನು ಖಂಡಿಸಿ ಗುರುವಾರ ಬಸವಾದಿ ಶರಣರ ಹಿಂದೂ ವೇದಿಕೆಯವರಿಂದ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರವು ಹಿಂದೂ ಧರ್ಮ ಮತ್ತು ಸಂಸ್ಕೃತಿಗೆ ನಿರ್ಬಂಧನ ಹಾಕುತ್ತಿದ್ದು, ಇದಕ್ಕೆ ತಕ್ಕಪಾಠವನ್ನು ಕಾಂಗ್ರೆಸ್ ಸರ್ಕಾರಕ್ಕೆ ಕಲಿಸಬೇಕಿದೆ ಎಂದರು.
ಕನೇರಿಮಠದ ಶ್ರೀಗಳಿಗೆ ನಿರ್ಬಂಧವಿಧಿಸಿದರುವುದು ಸಾಧು ಸಂತರಿಗೆ ಮಾಡಿದ ಅವಮಾನವಾಗಿದೆ. ಸಾಧು ಸಂತರ ಮತ್ತು ರೈತ ವಿರೋಧಿ ಸರ್ಕಾರದ ವಿರುದ್ಧ ಇಂದು ರೈತರು ಬೀದಿಗೆ ಬಂದು ಹೋರಾಟ ಮಾಡುತ್ತಿದ್ದು, ರೈತರು ಬೆಳೆದ ಬೆಳೆಗೆ ಸೂಕ್ತ ಬೆಲೆ ನೀಡುವಲ್ಲಿ ಸರ್ಕಾರ ಅಸಹಾಯಕವಾಗಿ ಕೈಕಟ್ಟಿ ಕುಳಿತುಕೊಂಡಿದೆ. ಗೋ ಭಕ್ಷಕರಿಗಿಂತ ಗೋ ರಕ್ಷರಿಗೆ ಇಂದು ಕಾಂಗ್ರೆಸ್ ಸರ್ಕಾರ ನಿರ್ಬಂಧನ ಹೇರುತ್ತಿರುವುದು ವಿಷಾದನೀಯ ಎಂದರು. ಅದೃಷ್ಯ ಕಾಡಸಿದ್ದೇಶ್ವರ ಶ್ರೀಗಳು ನೈಸರ್ಗಿಕ ಕೃಷಿ ಚಟುವಟಿಕೆಗಳ ಮೂಲಕ ಜನೋಪಯೋಗಿ ಸೇವಾ ಚಟುವಟಿಕೆಗಳ ಮೂಲಕ ಗುರುಕುಲ ಪದ್ಧತಿಯನ್ನು ಅನುಸರಿಸುತ್ತಿದ್ದು, ಅಂತವರಿಗೆ ರಾಜ್ಯ ಸರ್ಕಾರ ನಿರ್ಬಂಧ ಹಾಕುತ್ತಿರುವುದು ಯಾವ ನ್ಯಾಯ ಎಂದರು.ಅಧ್ಯಾತ್ಮದ ದೇಶ ನಮ್ಮದಾಗಿದ್ದು, ಕಾಂಗ್ರೆಸ್ಸಿಗರೇ ನಮ್ಮ ಸಂಸ್ಕೃತಿ ಮತ್ತು ಧರ್ಮದ ಬಗ್ಗೆ ತಮಗೆ ನಂಬಿಕೆ ಇಲ್ಲದಿದ್ದರೇ ಬಾಯಿ ಮುಚ್ಚಿಕೊಂಡು ಸುಮ್ಮನ್ನಿರಿ. ಅದನ್ನು ಬಿಟ್ಟು ದೇಶ, ಜಾತಿ, ಭಾಷೆಗಳನ್ನು ಒಡೆಯುವ ಕಾರ್ಯವನ್ನು ಮಾಡದಿರಿ. ಕಾಂಗ್ರೆಸ್ ಸರ್ಕಾರವು ಅನ್ಯ ಮಾರ್ಗಗಳ ಮೂಲಕ ಇಂದು ಲಿಂಗಾಯತರನ್ನು ಒಡೆಯುವ ಕೆಲಸ ಮಾಡುತ್ತಿದೆ ಎಂದರು.
ಬಿಜೆಪಿ ತಾಲೂಕು ಅಧ್ಯಕ್ಷ ವಿರುಪಾಕ್ಷಣ್ಣ ಮಾಮನಿ ಹಾಗೂ ಮಡಿವಾಳಪ್ಪ ಬಿದರಗಡ್ಡಿ ಮಾತನಾಡಿ, ಕಾಂಗ್ರೆಸ್ ಸರಕಾರ ತಮ್ಮ ವೈಫಲ್ಯತೆಗಳನ್ನು ಮರೆಮಾಚುವದರ ಜೊತೆಗೆ ಅಧಿಕಾರದ ಆಸೆಗಾಗಿ ಹಿಂದೂ ಧರ್ಮ ಮತ್ತು ಲಿಂಗಾಯತ ಧರ್ಮವನ್ನು ಒಡೆಯುವ ಕಾರ್ಯವನ್ನು ಮಾಡುತ್ತಿರುವುದು ಅಸಹನೀಯ ಎಂದರು. ಕನ್ನೇರಿ ಶ್ರೀಗಳಿಗೆ ವಿವಿಧ ಜಿಲ್ಲೆಗಳಲ್ಲಿ ಪ್ರವೇಶ ನಿಷೇಧಿಸಿರುವದನ್ನು ಖಂಡಿಸುವುದರ ಜೊತೆಗೆ ಕೂಡಲೇ ಈ ನಿರ್ಬಂಧವನ್ನು ಹಿಂಪಡೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಚಿಕ್ಕುಂಬಿಯ ನಾಗಲಿಂಗ ಮಹಾಸ್ವಾಮೀಜಿ, ಉಗರಗೋಳದ ಮಹಾಂತ ಸ್ವಾಮೀಜಿ, ಗದ್ದಿಕೇರಿಯ ಸಚ್ಚಿದಾನಂದ ಸ್ವಾಮೀಜಿ, ಹಣಮನಳ್ಳಿಯ ಶಿವಬಸವ ಸ್ವಾಮೀಜಿ, ಶಿವಾನಂದ ಸ್ವಾಮೀಜಿ, ಈರಣ್ಣ ಚಂದರಗಿ, ಗೌತಮ ದ್ಯಾಮನಗೌಡರ, ಭರಮಪ್ಪ ಅಣ್ಣಿಗೇರಿ, ಈಶ್ವರ ಮೇಲಗೇರಿ, ಜಗದೀಶ ಕೌಜಗೇರಿ, ಕಲ್ಮೇಶ ನೀಲಿಶೆಟ್ಟಿ, ಪಲ್ಲವಿ ಪದಕಿ, ಕುಮಾರಸ್ವಾಮಿ ತಲ್ಲೂರಮಠ, ಪಾರ್ವತಿ ಕಾಂತಿಮಠ, ಸೋಮಯ್ಯ ಪಾಟೀಲ, ರವಿ ಕಾಸರ, ಉಮೇಶ ಕೋರಿಕೊಪ್ಪ, ಅಜ್ಜಪ್ಪ ಪೂಜೇರ, ಮಲ್ಲಿಕಾರ್ಜುನ ಬೀಳಗಿ ಇದ್ದರು.