ತಿಮ್ಮಾಪೂರ ಮೇಲಿನ ಆರೋಪ ಖಂಡಿಸಿ ಪ್ರತಿಭಟನೆ

KannadaprabhaNewsNetwork |  
Published : Nov 11, 2024, 11:50 PM IST
ಜಮಖಂಡಿ ಸಚಿವ ತಿಮ್ಮಾಪೂರ ವಿರುದ್ಧದ ಆರೋಪ ಖಂಡಿಸಿ ದಲಿತ ಸಂಘಟನೆಗಳು ಹಾಗೂ ಅಭಿಮಾನಿಬಳಗದವರು ಪತ್ರಿಕಾಗೋಷ್ಟಿ ನಡೆಸಿದರು. | Kannada Prabha

ಸಾರಾಂಶ

ಬಾಗಲಕೋಟೆಯಲ್ಲಿ ಸಮುದಾಯ ಭವನದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ರ‍್ಯಾಲಿ ನಡೆಯಲಿದೆ. ದಲಿತಪರ ಸಂಘಟನೆಗಳು, ಅಭಿಮಾನಿ ಬಳಗದ ಪದಾಧಿಕಾರಿಗಳು ಸೇರಿದಂತೆ ಸಾವಿರಾರು ಜನ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ

ಕನ್ನಡಪ್ರಭ ವಾರ್ತೆ ಜಮಖಂಡಿ

ಅಬಕಾರಿ ಸಚಿವ ತಿಮ್ಮಾಪೂರ ವಿರುದ್ಧ ಬಿಜೆಪಿಯವರು ಮಾಡುತ್ತಿರುವ ಆರೋಪ ಖಂಡಿಸಿ ನ.12ರಂದು ಜಿಲ್ಲಾಕೇಂದ್ರ ಬಾಗಲಕೋಟೆಯಲ್ಲಿ ಎಲ್ಲ ದಲಿತ ಸಂಘಟನೆಗಳು ಹಾಗೂ ತಿಮ್ಮಾಪೂರ ಅಭಿಮಾನಿ ಬಳಗದಿಂದ ಬೃಹತ್ ಪ್ರತಿಭಟನಾ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಉದ್ಯಮಿ ತೌಫಿಕ್ ಪಾರ್ಥನಳ್ಳಿ ತಿಳಿಸಿದ್ದಾರೆ.

ನಗರದ ನಿರೀಕ್ಷಣಾ ಮಂದಿರ ರಮಾನಿವಾಸದಲ್ಲಿ ಸಚಿವ ತಿಮ್ಮಾಪೂರ ಅಭಿಮಾನಿಗಳ ಬಳಗ ಹಾಗೂ ವಿವಿಧ ದಲಿತ ಸಂಘಟನೆಗಳ ಆಶ್ರಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಗಲಕೋಟೆಯಲ್ಲಿ ಸಮುದಾಯ ಭವನದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ರ‍್ಯಾಲಿ ನಡೆಯಲಿದೆ. ದಲಿತಪರ ಸಂಘಟನೆಗಳು, ಅಭಿಮಾನಿ ಬಳಗದ ಪದಾಧಿಕಾರಿಗಳು ಸೇರಿದಂತೆ ಸಾವಿರಾರು ಜನ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.

ಸರಳ ಸಜ್ಜನ ರಾಜಕಾರಣಿ, ದಲಿತ ಮಂತ್ರಿ ತಿಮ್ಮಾಪೂರ ವಿರುದ್ಧ ಆರೋಪ ಮಾಡುತ್ತಿರುವ ಬಿಜೆಪಿ ಮುಖಂಡರು ಪುರಾವೆ ನೀಡಲಿ. ಮುಖ್ಯ ಮಂತ್ರಿಗಳ ಹೆಸರು ಕೆಡಿಸಲು ಬಿಜೆಪಿ ಹುನ್ನಾರ ನಡೆಸಿದೆ. ಇದನ್ನು ರಾಜ್ಯದ ಜನರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಉಪಚುನಾವಣೆಗಳಲ್ಲಿ ಅವರಿಗೆ ತಕ್ಕಪಾಠ ಕಲಿಸಲಿದ್ದಾರೆ. ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಲಿದೆ ಎಂದರು.

ಮುಖಂಡ ಮಾಮೂನ ಪಾರ್ಥನಳ್ಳಿ ಮಾತನಾಡಿ, ಸಚಿವರ ಹೆಸರಿಗೆ ಕಳಂಕ ತರಲು ಬಿಜೆಪಿ ನಡೆಸಿರುವ ಹುನ್ನಾರ ನಡೆಯುವದಿಲ್ಲ. ಇದರ ಪರಿಣಾಮ ಎದುರಿಸಬೇಕಾಗುತ್ತದೆ. ಸುಳ್ಳು ಆರೋಪಗಳಿಂದ ಯಾವುದೇ ಸಾಧನೆ ಮಾಡಲು ಸಾಧ್ಯವಿಲ್ಲ ಎಂದು ದೂರಿದರು. ನಗರಸಭೆ ಮಾಜಿ ಅಧ್ಯಕ್ಷ ಸಿದ್ದು ಮೀಸಿ ಮಾತನಾಡಿ, ಸರಾಯಿ ಮಾರಾಟ ಮಾಡುವ ಸಂಘಟನೆಯವರು ಸಚಿವರಿಗೆ ಹಣ ಕೊಟ್ಟಿರುವ ಬಗ್ಗೆ ಪುರಾವೆ ನೀಡಲಿ, ಸುಳ್ಳು ಆರೋಪ ಮಾಡಿದರೆ ಪರಿಣಾಮ ಎದುರಿಸಬೇಕಾಗುತ್ತದೆ. ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಕರೋನಾ ಸಮಯದಲ್ಲಿ ಪಿಪಿಇ ಕಿಟ್ ಖರೀದಿ ಹಗರಣದಲ್ಲಿ ಸಿಲುಕಿದ್ದಾರೆ ಅದರ ಬಗ್ಗೆ ನಾಯಕರು ಮಾತನಾಡಲಿ ಎಂದರು. ಸಚಿವ ತಿಮ್ಮಾಪೂರ ಅವರಿಗೆ ತೊಂದರೆ ಕೊಡಲು ಯತ್ನಿಸಿದರೆ ದಲಿತ ಸಮಾಜ ಸಹಿಸುವುದಿಲ್ಲ ಎಂದು ಎಚ್ಚರಿಸಿದರು.

ಮುಖಂಡ ಶ್ಯಾಮ ಘಾಟಗೆ ಮಾತನಾಡಿ, ಬಿಜೆಪಿ ಮತ್ತು ರಾಜ್ಯಪಾಲರು ಸೇರಿಕೊಂಡು ಮುಖ್ಯ ಮಂತ್ರಿಗಳಿಗೆ ತೊಂದರೆ ಕೊಡಲು ಯತ್ನಿಸಿ ವಿಫಲವಾದರು. ಈಗ ದಲಿತ ಸಚಿವರ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು. ಮೈಸೂರಿನ ಗುರುಸ್ವಾಮಿ ಎಂಬುವರು ಆರೋಪ ಮಾಡಿದ್ದು ಅವರು ದಾಖಲೆಗಳನ್ನು ನೀಡಲಿ ಎಂದರು. ಮದ್ಯಮಾರಾಟಗಾರರು ಎಸಗುವ ಅಕ್ರಮಗಳ ವಿರುದ್ಧ ಸರ್ಕಾರ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು. ನವೆಂಬರ 20 ರಂದು ಮದ್ಯದ ಅಂಗಡಿಗಳನ್ನು ಬಂದ್ ಮಾಡುವುದಾಗಿ ಹೇಳಿರುವ ಅವರು ಇದರಿಂದ ಯಾವುದೇ ಪರಿಣಾಮ ಆಗುವುದಿಲ್ಲ ಮದ್ಯಮಾರಾಟಗಾರರ ಸಂಘದ ನಡೆ ದಲಿತಪರ ಸಂಘಟನೆಗಳು ಖಂಡಿಸುತ್ತವೆ ಎಂದರು.

ಮುಂಖಡ ಮಹೇಶ ಕೋಳಿ, ಕುಂಚನೂರು ಗ್ರಾಪಂ ಅಧ್ಯಕ್ಷ ಶಂಕರ ಕಾಂಬ್ಳೆ, ಬಿಜೆಪಿ ನಾಯಕರ ನಡೆ ಖಂಡಿಸಿ, ದಲಿತ ಸಮಾಜದ ತಂಟೆಗೆ ಬಂದರೆ ಉಗ್ರ ಹೋರಾಟ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಯಾಸಿನ ಯಾದವಾಡ, ಮಕಬುಲ್ ಅಥಣಿಕರ, ಮುತ್ತಪ್ಪ ಮೈತ್ರಿ, ಈಶ್ವರ ವಾಳೆಣ್ಣವರ, ದಿಲಾವರ ಶಿರೋಳ, ರಾಜು ತೆಲಸಂಘ ಮುಂತಾದವರಿದ್ದರು.

PREV

Recommended Stories

ಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ಗೃಹಲಕ್ಷ್ಮೀ ಯರಿಗೆ ಇಲ್ಲಿದೆ ಸಿಹಿ ಸುದ್ದಿ
''ಪ್ರಜ್ವಲ್‌ ಬಚಾವ್‌ಗೆ ಆತನ ಪೋಷಕರು ತಂತ್ರ ಮಾಡಿದ್ರು ''