ಕನ್ನಡಪ್ರಭ ವಾರ್ತೆ ಆಳಂದ
ಸೆ.೧೩ರಂದು (ಶುಕ್ರವಾರ) ಆಳಂದ ತಾಲೂಕಿನ ಕೋಲಿ ಸಮಾಜದ ಗೌರವಧ್ಯಕ್ಷರಾದ ಪಡಸಾವಳಿ ನಿವಾಸಿ ವಿಶ್ವನಾಥ ಜಮಾದಾರರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಕೂಡಲೇ ಆರೋಪಿಗಳನ್ನು ಬಂಧಿಸಿ ಕಠಿಣ ಕಾನೂನು ಶಿಕ್ಷೆಗೆ ಗುರಿಪಡಿಸಬೇಕು ಮತ್ತು ಸರ್ಕಾರದಿಂದ ಕುಟುಂಬಕ್ಕೆ ಒಂದು ಕೋಟಿ ರು. ಪರಿಹಾರ ನೀಡಬೇಕೆಂದು ಸಮಾಜ ಮುಖಂಡರು ಒತ್ತಾಯಿಸಿದರು.
ಕೊಲೆಗಿಡಾದ ವಿಶ್ವನಾಥರ ಕುಟುಂಬಕ್ಕೆ ಸರ್ಕಾರಿ ನೌಕರಿ ಕೋಡಬೇಕು ಹಾಗೂ ಮೃತರ ಕುಟುಂಬಕ್ಕೆ ಸೂಕ್ತವಾದ ರಕ್ಷಣೆ ನೀಡಬೇಕು ಮತ್ತು ಆರೋಪಿಗಳನ್ನು ಬಂಧಿಸಿ ಗಲ್ಲಿಗೇರಿಸಬೇಕು. ಈ ಕುರಿತು ಪಾರದರ್ಶಕ ತನಿಖೆ ಆಗಬೇಕು, ಪ್ರಕರಣದ ಬೆಳವಣಿಗೆಯಲ್ಲಿ ಪೊಲೀಸರ ನಡೆಯನ್ನು ನಮಗೆ ಸಂಶಯ ಮೂಡುತ್ತಿದೆ. ಆದ್ದರಿಂದ ಪೊಲೀಸ ವರಿಷ್ಠಾಧಿಕಾರಿಗಳು ಪಾರದರ್ಶಕ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿ ಗಲ್ಲಿಗೇರಿಸಬೇಕೆಂಬ ಆಗ್ರಹ ಕೇಳಿಬಂದವು.ಪಾರ್ಥಿವ ಶರೀರ ಮರಳಿ ತರಲು ಪಟ್ಟು:
ಆದರೆ ತರಾತುರಿಯಲ್ಲಿ ಪೊಲೀಸರು ಪಡಸಾವಳಿ ಗ್ರಾಮಕ್ಕೆ ಶವವನ್ನು ಸಾಗಿಸಿದ್ದಾರೆ ಎಂದು ಸಮಾಜ ಬಾಂಧವರು ಕುಪಿತಗೊಂಡು ಮರಳಿ ತರಬೇಕು. ಇಲ್ಲಿಯೇ ಪಾರ್ಥಿವ ಶರೀರಕ್ಕೆ ಗೌರವ ಸಲ್ಲಿಸಲಾಗುವುದು ಎಂದು ಪಟ್ಟುಹಿಡಿದು ಕೊಲೆ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು. ಕುಟುಂಬಕ್ಕೆ ಸರ್ಕಾರಿ ನೌಕರಿ ಮತ್ತು ಒಂದು ಕೋಟಿ ರುಪಾಯಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದರು.
ಕೋಲಿ ಸಮಾಜದ ಮುಖಂಡರಾದ ಅವ್ವಣ್ಣ ಮ್ಯಾಕೇರಿ, ನ್ಯಾಯವಾದಿ ಸಿದ್ರಾಮಪ್ಪ ಮೇಳಕುಂದಿ ಸೇರಿದಂತೆ ಕೋಲಿ ಸಮಾಜದ ತಾಲೂಕು ಅಧ್ಯಕ್ಷ ಶಿವಲಿಂಗಪ್ಪ ಎಂ. ಜಮಾದಾರ, ಮುಖಂಡ ಕಲ್ಯಾಣಿ ಜಮಾದಾರ ಭೂಸನೂರ, ಸೀತಾರಾಮ ಜಮಾದಾರ, ಅಂಬರಾಯ ಜಮಾದಾರ ಚಿತಲಿ ಸೇರಿದಂತೆ ಕೊಲೆಯಾದ ವಿಶ್ವನಾಥ ಜಮಾದಾರ ಕುಟುಂಬ ಹಾಗೂ ಬಂಧು ಬಾಂಧವರು ಕೋಲಿ ಸಮಾಜ ಬಾಂಧವರು ಪಾಲ್ಗೊಂಡಿದ್ದರು.