ಶವ ಸಂಸ್ಕಾರಕ್ಕೆ ಸ್ಥಳ ನೀಡುತ್ತಿಲ್ಲವೆಂದು ದಲಿತರಿಂದ ಪ್ರತಿಭಟನೆ

KannadaprabhaNewsNetwork |  
Published : Oct 29, 2024, 12:45 AM ISTUpdated : Oct 29, 2024, 12:46 AM IST
28ಕೆಎಂಎನ್ ಡಿ11 | Kannada Prabha

ಸಾರಾಂಶ

ಶವ ಸಂಸ್ಕಾರಕ್ಕೆ ಮೀಸಲಿದ್ದ ಜಮೀನಿನಲ್ಲಿ ತೆಂಗಿನಮರ ಹಾಗೂ ಇತರೆ ತರಕಾರಿ ಸಸಿಗಳನ್ನು ನೆಟ್ಟು ತೊಂದರೆ ಕೊಡುತ್ತಿದ್ದಾರೆ. ಪಕ್ಕದ ಹಳ್ಳದಲ್ಲಿ ಹೂಳುವಂತೆ ಬೆದರಿಸುತ್ತಾರೆ. ಇದರಿಂದ ದಲಿತ ಜನಾಂಗಕ್ಕೆ ಶವ ಸಂಸ್ಕಾರ ನಡೆಸಲು ತೊಂದರೆಯಾಗುತ್ತಿದೆ. ಕೂಡಲೇ ನಿಗದಿಯಾಗಿರುವ ಜಮೀನನಲ್ಲಿ ಸಂಸ್ಕಾರ ನಡೆಸಲು ಅವಕಾಶ ಮಾಡಿಕೊಡಬೇಕು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಪೂರ್ವಿಕರ ಕಾಲದಿಂದಲೂ ಶವ ಸಂಸ್ಕಾರ ನಡೆಸುತ್ತಿದ್ದ ಸ್ಥಳದಲ್ಲಿ ಹೆಣ ಹೂಳಲು ಅವಕಾಶ ಕೊಡುತ್ತಿಲ್ಲ ಎಂದು ಆರೋಪಿಸಿ ತಾಲೂಕಿನ ಪಟ್ಟಸೋಮನಹಳ್ಳಿಯ ದಲಿತರು ಹಾಗೂ ದಸಂಸ ಮುಖಂಡರು ಪಟ್ಟಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ಸೇರಿದ ಪ್ರತಿಭಟನಾಕಾರರು ಕಚೇರಿ ಮುತ್ತಿಗೆ ಹಾಕಿ ಸರ್ಕಾರಿ ಜಾಗದಲ್ಲಿ ಶವ ಸಂಸ್ಕಾರ ನಡೆಸಲು ತಡೆಯೊಡ್ಡುತ್ತಿರುವವ ವಿರುದ್ಧ ಕ್ರಮ ಕೈಗೊಳ್ಳಬೇಕು. ದಲಿತರ ಶವ ಹೂಳಲು ಅವಕಾಶ ಮಾಡಿಕೊಡಬೇಕು ಎಂದು ತಹಸೀಲ್ದಾರ್ ಎಸ್.ಸಂತೋಷ್ ಅವರಿಗೆ ಮನವಿ ಸಲ್ಲಿಸಿದರು.

ಗ್ರಾಮದ ಹೊರವಲಯದ ಲೋಕಪಾವನಿ ನದಿ ತಟದಲ್ಲಿರುವ ಸರ್ಕಾರಿ ಜಾಗದಲ್ಲಿ ಪೂರ್ವಿಕರ ಕಾಲದಿಂದಲೂ ಯಾವುದೇ ಅಡ್ಡಿ ಇಲ್ಲದೆ ಶವ ಸಂಸ್ಕಾರ ನಡೆಸಿಕೊಂಡು ಬಂದಿದ್ದೇವೆ. ಇತ್ತೀಚೆಗೆ ಪಕ್ಕದ ಜಮೀನಿನ ಮಾಲೀಕ ಶವ ಹೂಳಲು ಅವಕಾಶ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶವ ಸಂಸ್ಕಾರಕ್ಕೆ ಮೀಸಲಿದ್ದ ಜಮೀನಿನಲ್ಲಿ ತೆಂಗಿನಮರ ಹಾಗೂ ಇತರೆ ತರಕಾರಿ ಸಸಿಗಳನ್ನು ನೆಟ್ಟು ತೊಂದರೆ ಕೊಡುತ್ತಿದ್ದಾರೆ. ಪಕ್ಕದ ಹಳ್ಳದಲ್ಲಿ ಹೂಳುವಂತೆ ಬೆದರಿಸುತ್ತಾರೆ. ಇದರಿಂದ ದಲಿತ ಜನಾಂಗಕ್ಕೆ ಶವ ಸಂಸ್ಕಾರ ನಡೆಸಲು ತೊಂದರೆಯಾಗುತ್ತಿದೆ. ಕೂಡಲೇ ನಿಗದಿಯಾಗಿರುವ ಜಮೀನನಲ್ಲಿ ಸಂಸ್ಕಾರ ನಡೆಸಲು ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ಮನವಿ ಸ್ವೀಕರಿಸಿದ ತಹಸೀಲ್ದಾರ್ ಎಸ್.ಸಂತೋಷ್, ಅ.29ರಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸ್ಮಶಾನ ಜಾಗ ತೆರವುಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈಬಿಡಲಾಯಿತು.

ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ಹಾರೋಹಳ್ಳಿ ಸೋಮು, ಚಿಕ್ಕಮೂಗಯ್ಯ, ಮಲ್ಲೇಶ, ಮಹದೇವು, ಕುಮಾರ, ಅಶೋಕ, ಶಂಕರ, ರವಿ, ಧನಂಜಯ, ಶಶಿ, ಚಿಕ್ಕಹನುಮ, ಸಾವಿತ್ರಮ್ಮ, ದೇವಮ್ಮ, ದೇವಿಕ, ರಾಜ, ವಿಜಿ, ಪುಟ್ಟ ಇತರರು ಇದ್ದರು.

PREV

Recommended Stories

ಖಾಸಗಿ ಸಂಘಟನೆಗಳಿಗೆ ನಿಷೇಧ ಹೇರಿದ್ದು ಜಗದೀಶ್‌ ಶೆಟ್ಟರ್‌ : ಪರಂ
ಕರ್ನಾಟಕಕ್ಕೆ ₹385 ಕೋಟಿ ಕೇಂದ್ರೀಯ ನೆರೆ ಪರಿಹಾರ