-ಬೆಂ.ಗ್ರಾ. ಜಿಲ್ಲಾ ಅಹಿಂದ, ಶೋಷಿತ ಸಮುದಾಯಗಳ ಒಕ್ಕೂಟದಿಂದ ಮಾನವ ಸರಪಳಿ, ಧರಣಿ
ಮುಡಾ ಹಗರಣದ ನೆಪದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜ್ಯಪಾಲರು ನೋಟಿಸ್ ಜಾರಿ ಮಾಡಿರುವುದನ್ನು ವಿರೋಧಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಹಿಂದ ಸಂಘಟನೆಗಳ ಒಕ್ಕೂಟ, ಜಿಲ್ಲಾ ಶೋಷಿತ ಸಮುದಾಯಗಳ ಒಕ್ಕೂಟ ಜಂಟಿ ಸಹಭಾಗಿತ್ವದಲ್ಲಿ ಸೋಮವಾರ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ನಗರದ ರಾಜ್ಯ ಹೆದ್ದಾರಿ ಡಾ.ಅಂಬೇಡ್ಕರ್ ವೃತ್ತದಲ್ಲಿ ಮಾನವ ಸರಪಳಿ ರಚಿಸಿದ ಮುಖಂಡರು, ಆತುರಾತುರವಾಗಿ ನೋಟಿಸ್ ನೀಡಿರುವ ರಾಜ್ಯಪಾಲರ ನಡೆಯನ್ನು ಖಂಡಿಸಿದರು.ವಿವಿಧ ಸಮುದಾಯಗಳ ಮುಖಂಡರಾದ ಜಿ.ಲಕ್ಷ್ಮೀಪತಿ, ಕಂಟನಕುಂಟೆ ಕೃಷ್ಣಮೂರ್ತಿ, ಆದಿತ್ಯ ನಾಗೇಶ್, ಜೆ.ರಾಜೇಂದ್ರ, ಗೋಪಾಲ್ ನಾಯಕ್, ಶ್ರೀನಗರ ಬಶೀರ್ ಮಾತನಾಡಿ, ಮುಡಾ ನಿವೇಶನಗಳನ್ನು ಪಾರ್ವತಿ ಸಿದ್ದರಾಮಯ್ಯ ಅವರಿಗೆ ನೀಡಿದೆ ಎನ್ನಲಾದ ನಿವೇಶನದ ವಿಚಾರವಾಗಿ, ಅಪರಾಧ ಹಿನ್ನೆಲೆಯ ಆರ್ಟಿಐ ಕಾರ್ಯಕರ್ತ ಟಿ.ಜೆ.ಅಬ್ರಹಾಂ ದೂರನ್ನು ರಾಜ್ಯಪಾಲರು ಕೂಲಂಕಶವಾಗಿ ಪರಿಶೀಲಿಸದೇ, ಕೇಂದ್ರ ಸರ್ಕಾರದ ಒತ್ತಡಕ್ಕೆ ಮಣಿದು ತರಾತುರಿಯಲ್ಲಿ ನೋಟಿಸ್ ನೀಡಿದ್ದಾರೆ. ಇದು ಹಿಂದುಳಿದ ವರ್ಗದ ನೇತಾರನನ್ನು ತುಳಿಯುವ ಹುನ್ನಾರ ಎಂದು ಆರೋಪಿಸಿದರು.
ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ರಾಜ್ಯ ಸರ್ಕಾರ ನ್ಯಾಯಾಂಗ ತನಿಖೆ ನಡೆಸುತ್ತಿದೆ. ಆದರೆ ತನಿಖಾ ವರದಿ ಬರುವ ಮುನ್ನವೇ ರಾಜ್ಯಪಾಲರು ಬಿಜೆಪಿ ನಾಯಕರ ಒತ್ತಡಕ್ಕೆ ಮಣಿದು ಮುಖ್ಯಮಂತ್ರಿಗೆ ನೋಟಿಸ್ ನೀಡುವ ಮೂಲಕ ಸಿದ್ದರಾಮಯ್ಯ ಅವರ ತೇಜೋವಧೆ ಮಾಡಲು ಹೊರಟಿದ್ದಾರೆ ಎಂದು ದೂರಿದರು.
ಕಾನೂನು ಹೋರಾಟ:
ಭ್ರಷ್ಟಾಚಾರಿಗಳಿಂದ ಪಾದಯಾತ್ರೆ ನಾಟಕ:
ನಗರಸಭೆ ಸದಸ್ಯರಾದ ಎಚ್.ಎಸ್.ಶಿವಶಂಕರ್, ನಾಗರಾಜ್, ಆನಂದ್, ಅಖಿಲೇಶ್, ಸುರೇಶ್ (ಸುಬ್ಬು), ಶಿವು, ಮುಖಂಡರಾದ ಆಂಜನಮೂರ್ತಿ, ಹೇಮಂತ್ ರಾಜು, ಮೊಬೈಲ್ ಮುನಿರಾಜು, ರಾಮು ಮಡಿವಾಳ ಕೃಷ್ಣ, ರವಿ ಸಿದ್ದಪ್ಪ, ರಂಗಸ್ವಾಮಿ, ಹಾಸಿಫುಲ್ಲಾ, ಲಾವಣ್ಯ ನಾಗರಾಜ್, ನೆಲಮಂಗಲದ ಹೊನ್ನಸಿದ್ದಯ್ಯ, ಗಂಗರಾಜು, ನಾಗರಾಜು, ದೇವನಹಳ್ಳಿಯ ಕೊದಂಡಪ್ಪ, ಮಂಜುಳ, ಶಶಿಕಲಾ, ಭರಮಣ್ಣ ಸೇರಿ ನಾಲ್ಕು ತಾಲೂಕಿನ ಮುಖಂಡರು ಭಾಗವಹಿಸಿದ್ದರು.