ನ್ಯಾಯವಾದಿ ಮೇಲಿನ ಹಲ್ಲೆ ಖಂಡಿಸಿ ಪ್ರತಿಭಟನೆ

KannadaprabhaNewsNetwork |  
Published : Apr 24, 2025, 12:31 AM IST
ನ್ಯಾಯವಾದಿ ಸದಾಶಿವರಡ್ಡಿ ಅವರ ಮೇಲಿನ ಹಲ್ಲೆ ಪ್ರಕರಣ ಖಂಡಿಸಿ ಅಥಣಿ ನ್ಯಾಯವಾದಿಗಳು ಸಂಘದ  ವಕೀಲರು ಪ್ರತಿಭಟಿಸಿ  ಸರ್ಕಾರಕ್ಕೆ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ಭಾರತೀಯ ವಕೀಲರ ಪರಿಷತ್‌ನ ಕೋ-ಚೇರಮನ್‌ ಹಿರಿಯ ನ್ಯಾಯವಾದಿ ವೈ.ಆರ್.ಸದಾಶಿವರಡ್ಡಿ ಮೇಲಿನ ಹಲ್ಲೆ ಖಂಡಿಸಿ ಅಥಣಿ ನ್ಯಾಯವಾದಿಗಳ ಸಂಘದ ಸದಸ್ಯರು ಕೋರ್ಟ್ ಕಲಾಪವನ್ನು ಬಹಿಷ್ಕರಿಸಿ ನ್ಯಾಯವಾದಿಗಳಿಗೆ ಸೂಕ್ತ ರಕ್ಷಣೆ ನೀಡಬೇಕು, ಹಲ್ಲೆ ಮಾಡಿದ ಆರೋಪಿಗಳಿಗೆ ಕಾನೂನು ರೀತಿ ಶಿಸ್ತುಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಅಥಣಿ

ಭಾರತೀಯ ವಕೀಲರ ಪರಿಷತ್‌ನ ಕೋ-ಚೇರಮನ್‌ ಹಿರಿಯ ನ್ಯಾಯವಾದಿ ವೈ.ಆರ್.ಸದಾಶಿವರಡ್ಡಿ ಮೇಲಿನ ಹಲ್ಲೆ ಖಂಡಿಸಿ ಅಥಣಿ ನ್ಯಾಯವಾದಿಗಳ ಸಂಘದ ಸದಸ್ಯರು ಕೋರ್ಟ್ ಕಲಾಪವನ್ನು ಬಹಿಷ್ಕರಿಸಿ ನ್ಯಾಯವಾದಿಗಳಿಗೆ ಸೂಕ್ತ ರಕ್ಷಣೆ ನೀಡಬೇಕು, ಹಲ್ಲೆ ಮಾಡಿದ ಆರೋಪಿಗಳಿಗೆ ಕಾನೂನು ರೀತಿ ಶಿಸ್ತುಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಪಟ್ಟಣದಲ್ಲಿ ಸೋಮವಾರ ಅಥಣಿ ನ್ಯಾಯವಾದಿಗಳ ಸಂಘದ ವಕೀಲರು ಪ್ರತಿಭಟನಾ ಮೆರವಣಿಗೆ ನಡೆಸಿ ಕೈಗೆ ಕೆಂಪು ಬಟ್ಟೆ ಧರಿಸಿ ಪ್ರಮುಖ ಬೀದಿಗಳ ಪ್ರತಿಭಟನೆ ನಡೆಸಿ ಹಲ್ಯಾಳ ವೃತ್ತದಲ್ಲಿ ಸಭೆ ನಡೆಸಿ ಅಥಣಿ ತಹಸೀಲ್ದಾರ್‌ ಸಿದ್ರಾಯ ಭೋಸಗಿ ಅವರಿಗೆ ಮನವಿ ಸಲ್ಲಿಸಿದರು. ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎನ್.ಬಿ.ಖೋಕಲೆ, ಹಿರಿಯ ನ್ಯಾಯವಾದಿ ಕಲ್ಲಪ್ಪ ವಣಜೋಳ ಮಾನಾತನಾಡಿದರು. ಈ ವೇಳೆ ಬಾಹುಸಾಹೇಬ ಕಾಂಬಳೆ, ಸುನಿಲ ಸಂಕ, ಬಿ.ಐ.ಡಂಗಿ, ಬಿ.ಎಸ್.ಪಾಟೀಲ, ಜಿ.ಟಿ.ಕಾಂಬಳೆ, ಎ.ಎಸ್.ಹುಚಗೌಡರ, ಮಿತೇಶ ಪಟ್ಟಣ, ಶಶಿ ಬಾಡಗಿ, ಬಂಗಾರಪ್ಪ ಕಾಂಬಳೆ, ಅರುಣ ಮೇಲಗಡೆ, ರಾಮ ಮರಳೆರ, ರೇಖಾ ಪಾಟೀಲ, ವಿದ್ಯಾ ಖುರ್ಧ, ವಿ.ಎಸ್.ದೇಸಾಯಿ ಸೇರಿದಂತೆ ಹಲವು ನ್ಯಾಯವಾದಿಗಳು ಉಪಸ್ಥಿತರಿದ್ದರು.

ನ್ಯಾಯವಾದಿಗಳ ಮೇಲೆ ನಿರಂತರವಾಗಿ ನಡೆಯುತ್ತಿರುವ ಹಲ್ಲೆಗಳು ನಿಲ್ಲಬೇಕು. ನ್ಯಾಯದ ಪರವಾಗಿ ವಾದಿಸುವ ವಕೀಲರ ಮೇಲೆ ಹಲ್ಲೆಗಳು ಮೇಲಿಂದ ಮೇಲೆ ನಡೆಯುತ್ತಿದ್ದು, ನ್ಯಾಯವಾದಿಗಳ ರಕ್ಷಣೆಗೆ ಸರ್ಕಾರ ಮುಂದಾಗಬೇಕು. ಭಾರತೀಯ ವಕೀಲರ ಪರಿಷತ್‌ನ ಕೋ-ಚೇರಮನ್ ಹಿರಿಯ ನ್ಯಾಯವಾದಿ ಸದಾಶಿವರಡ್ಡಿ ಮೇಲೆ ಹಲ್ಲಿ ಮಾಡಿರುವ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕು.

-ಎನ್.ಬಿ.ಖೋಕಲೆ,

ನ್ಯಾಯವಾದಿಗಳ ಸಂಘದ ಅಧ್ಯಕ್ಷರು.

ಭಾರತೀಯ ವಕೀಲರ ಪರಿಷತ್‌ನ ಕೋ-ಚೇರಮನ್ ಹಿರಿಯ ನ್ಯಾಯವಾದಿ ವೈ.ಆರ್ ಸದಾಶಿವರಡ್ಡಿ ಮೇಲೆ ಅಪರಿಚಿತರಿಂದ ನಡೆದ ಹಲ್ಲೆಗೆ ಗಂಭೀರವಾಗಿ ಗಾಯಗೊಂಡಿದ್ದು, ಇಂತಹ ಪ್ರಕರಣಗಳ ಮರುಕಳುಹಿಸದಂತೆ ಕಠಿಣ ಕ್ರಮವನ್ನು ಜರುಗಿಸಬೇಕು ಹಾಗೂ ಸರ್ಕಾರ ನ್ಯಾಯವಾದಿಗಳ ರಕ್ಷಣೆಗೆ ಸೂಕ್ತಕ್ರಮ ವಹಿಸಬೇಕು.

- ಕಲ್ಲಪ್ಪ ವಣಜೋಳ, ಹಿರಿಯ ನ್ಯಾಯವಾದಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ