ಟನ್ ಕಬ್ಬಿಗೆ ಬಾಕಿ ₹100 ಪಾವತಿಸುವಂತೆ ಒತ್ತಾಯಿಸಿ ಪ್ರತಿಭಟನೆ

KannadaprabhaNewsNetwork |  
Published : Jun 25, 2026, 01:30 AM IST
24ಕೆಎಂಎನ್ ಡಿ12 | Kannada Prabha

ಸಾರಾಂಶ

ರೈತರಿಗೆ ಕಬ್ಬು ಸರಬರಾಜು ಆದ 15 ದಿನದೊಳಗೆ ಪೂರ್ಣ ಹಣ ಪಾವತಿ, ಅವಧಿ ಮೀರಿದರೆ ಬಡ್ಡಿ ಸಮೇತ ಹಣ ಪಾವತಿಸಬೇಕು. ಕಾರ್ಖಾನೆ ಆಡಳಿತ ಮಂಡಳಿ ರೈತರ ಬಗ್ಗೆ ಕಾಳಜಿ ವಹಿಸಬೇಕು ಎಂದು ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ಕಬ್ಬು ಸರಬರಾಜುದಾರರಿಗೆ ಸರ್ಕಾರ ಪ್ರೋತ್ಸಾಹ ಧನವಾಗಿ ₹50 ಹಾಗೂ ಕಾರ್ಖಾನೆ ವತಿಯಿಂದ ₹50 ಸೇರಿ ಒಟ್ಟು ಟನ್ ಕಬ್ಬಿಗೆ ₹100 ಪಾವತಿಸುವಂತೆ ಒತ್ತಾಯಿಸಿ ಭಾರತ್ ಕಿಸಾನ್ ಸಂಘದ ಕಾರ್ಯಕರ್ತರು ಚಾಂಷುಗರ್ ಕಾರ್ಖಾನೆ ಬಳಿ ಪ್ರತಿಭಟನೆ ನಡೆಸಿದರು.

ಸಂಘದ ಜಿಲ್ಲಾಧ್ಯಕ್ಷ ಬಿ.ಪಿ.ಅಪ್ಪಾಜಿ ಮಾತನಾಡಿ, ರಾಜ್ಯದ ಎಲ್ಲಾ ಕಾರ್ಖಾನೆಗಳು ರೈತರಿಗೆ ಕೊಡಬೇಕಾದ ₹100 ಪಾವತಿಸಿವೆ. ಆದರೆ, ದಕ್ಷಿಣ ಭಾಗದ ಕಾರ್ಖಾನೆಗಳ ವ್ಯಾಪ್ತಿಯ ರೈತರಿಗೆ ಸರ್ಕಾರದ ₹50 ತಲುಪಿದೆ. ಕಾರ್ಖಾನೆಯವರು ಕೊಡಬೇಕಾದ ₹50 ತಕ್ಷಣ ರೈತರಿಗೆ ಪಾವತಿಸಬೇಕು ಎಂದು ಒತ್ತಾಯಿಸಿದರು.

ಉತ್ತರ ಕರ್ನಾಟಕದ ಎಲ್ಲಾ ಕಾರ್ಖಾನೆಗಳು ಈಗಾಗಲೇ ರೈತರಿಗೆ ಪಾವತಿ ಮಾಡಿವೆ. ಕಬ್ಬು ತೂಕ ಮತ್ತು ಇಳುವರಿ ಅಂಶವನ್ನು ತೂಕದ ಯಂತ್ರ ಹಾಗೂ ಇಂಟೆಕ್ಟ್ ಮೆಷಿನ್ ಅಳವಡಿಸಿ ಪಾರದರ್ಶಕವಾಗಿ ರೈತರಿಗೆ ಸ್ಥಳದಲ್ಲೇ ತಿಳಿಸಬೇಕು ಎಂದು ಆಗ್ರಹಿಸಿದರು.

ಕಬ್ಬು ಸರಬರಾಜು ಮಾಡುವ ರೈತರಿಗೆ ಮುಖ್ಯವಾಗಿ ಶುದ್ಧ ಕುಡಿಯುವ ನೀರು, ಶೌಚಾಲಯದ ವ್ಯವಸ್ಥೆ ಮಾಡುವುದು. ಜಾನುವಾರುಗಳಿಗೆ ನೆರಳು ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಜುಲೈ ಮೊದಲ ವಾರದಲ್ಲೇ ಕಾರ್ಖಾನೆಯನ್ನು ಪ್ರಾರಂಭಿಸಿ ಕೇಂದ್ರ ಸರ್ಕಾರ ನಿಗದಿಪಡಿಸಿದ ಎಪ್‌ಆರ್‌ಪಿ ದರವನ್ನು ಪೂರ್ಣವಾಗಿ ರೈತರಿಗೆ ಕೊಡಬೇಕು ಎಂದು ಒತ್ತಾಯಿಸಿದರು.

ರೈತರಿಗೆ ಕಬ್ಬು ಸರಬರಾಜು ಆದ 15 ದಿನದೊಳಗೆ ಪೂರ್ಣ ಹಣ ಪಾವತಿ, ಅವಧಿ ಮೀರಿದರೆ ಬಡ್ಡಿ ಸಮೇತ ಹಣ ಪಾವತಿಸಬೇಕು. ಕಾರ್ಖಾನೆ ಆಡಳಿತ ಮಂಡಳಿ ರೈತರ ಬಗ್ಗೆ ಕಾಳಜಿ ವಹಿಸಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಭಾರತ್ ಕಿಸಾನ್ ಸಂಘದ ಕಾರ್ಯಕರ್ತರು ಚಾಂಶುಗರ್ಸ್ ಕಾರ್ಖಾನೆ ಕಬ್ಬು ವಿಭಾಗದ ಜನರಲ್ ಮ್ಯಾನೇಜರ್ ಮಹದೇವ ಪ್ರಭು ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಚಾಂಷುಗರ್ ವ್ಯಾಪ್ತಿಯ ಕಿಸಾನ್ ಸಂಘದ ಅಧ್ಯಕ್ಷ ಸಿ.ಬಿ. ಜೋಗಿಗೌಡ, ಭಾರತೀಯ ಕಿಸಾನ್ ಸಂಘದ ಉಪಾಧ್ಯಕ್ಷ ಕೆ.ರಾಜೇಗೌಡ, ಕಾರ್ಯದರ್ಶಿ ಜೆ.ಕೆ. ಬಸವರಾಜು, ಚನ್ನೇಗೌಡ, ಸಿದ್ದರಾಜು, ಚಿಕ್ಕಣ್ಣ ಸೇರಿದಂತೆ ಮತ್ತಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೊಬೈಲ್ ಸೆಲ್ಫಿ ತೆಗೆದುಕೊಳ್ಳಲು ಹೋದ ನಾಲ್ವರು ಕಾವೇರಿ ನದಿಯಲ್ಲಿ ಜಲ ಸಮಾಧಿ
ಅಣೆಕಟ್ಟೆ ಕ್ರಸ್ಟ್ ಗೇಟ್‌ಗಳ ದುರಸ್ತಿ ಮುಗಿದ ಬಳಿಕ ನೀರು ಬಿಡುಗಡೆ: ಶಾಸಕ ದರ್ಶನ್ ಪುಟ್ಟಣ್ಣಯ್ಯ