ಹಾವೇರಿ: ಜಿಲ್ಲೆಯ ಸವಣೂರು ತಾಲೂಕಿನ ಕುರಬರಮಲ್ಲೂರು ಗ್ರಾಮದ ವಿದ್ಯಾರ್ಥಿ ಪ್ರಶಾಂತ ಕಳಸೂರನ ಸಾವಿಗೆ ಕಾರಣರಾದವರನ್ನು ಬಂಧಿಸುವಂತೆ ಆಗ್ರಹಿಸಿ ಗುರುವಾರ ಜಿಲ್ಲಾ ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ಧಿ ಸಂಘದಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯ ಎದುರು ಪ್ರತಿಭಟನೆ ನಡೆಸಲಾಯಿತು. ಒಂದು ವಾರದೊಳಗೆ ಆರೋಪಿಗಳನ್ನು ಬಂಧಿಸಬೇಕು, ಆರೋಪಿಗಳನ್ನು ಬಂಧಿಸದೇ ಒತ್ತಡಕ್ಕೆ ಮಣಿದಿರುವ ಶಿಗ್ಗಾಂವಿ ಡಿವೈಎಸ್ಪಿ ಅವರ ಮೇಲೆ ಕ್ರಮ ಕೈಗೊಳ್ಳಬೇಕು, ವಿದ್ಯಾರ್ಥಿ ಪ್ರಶಾಂತ ಕಳಸೂರನ ಕುಟುಂಕ್ಕೆ ಸೂಕ್ತ ಪರಿಹಾರ ವಿತರಿಸುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಹಾಗೂ ಗೃಹಮಂತ್ರಿಗಳಿಗೆ ಮನವಿ ಅರ್ಪಿಸಿದರು.
ಈ ಬಗ್ಗೆ ಸವಣೂರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿ ಒಂದುವಾರ ಗತಿಸಿದರೂ ಆರೋಪಿಗಳನ್ನು ಬಂಧಿಸಿಲ್ಲ. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಗಮನ ತಂದರೂ ಕ್ರಮ ಕೈಗೊಂಡಿಲ್ಲ. ಆರೋಪಿಗಳನ್ನು ರಕ್ಷಣೆ ಮಾಡುತ್ತಿರುವ ಪೊಲೀಸ್ ಅಧಿಕಾರಿಯನ್ನು ಒಂದುವಾರದೊಳಗೆ ಅಮಾನತುಗೊಳಿಸಿಬೇಕು. ಇಲ್ಲದೇ ಹೋದರೆ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎದು ಎಚ್ಚರಿಕೆ ನೀಡಿದರು.
ಅಶೋಕ ಹರನಗೇರಿ, ನಾಗರಾಜ್ ಬಡಮ್ಮನವರ್, ಶ್ರೀಧರ್ ದೊಡ್ಡಮನಿ, ಶ್ರೀಧರ್ ಆನವಟ್ಟಿ, ಮಾಲತೇಶ್ ಹೊಳೆಮ್ಮನವರ್, ಮಾಲತೇಶ್ ರಿತ್ತಿ, ಮಾಲತೇಶ್ ಬಾಲಣ್ಣನವರ್, ಮಲ್ಲಿಕಾರ್ಜುನ ಬೂದಗಟ್ಟಿ, ಜಗದೀಶ್ ಕೊಂಡೆಮ್ಮನವರ, ಶ್ರೀಕಾಂತ್ ತಳವಾರ, ಹೊನ್ನಪ್ಪ ಗೋಣಮ್ಮನವರ, ಜಗದೀಶ್ ಮನ್ನಂಗಿ, ಎಲ್ಲಪ್ಪ ದೇವಗೇರಿ, ಪ್ರಕಾಶ್ ಕಳಸೂರ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.