371ಜೆ ಸಮರ್ಪಕ ಅನುಷ್ಠಾನಕ್ಕೆ ಆಗ್ರಹಿಸಿ ಕನಕಗಿರಿಯಲ್ಲಿ 29ರಂದು ಪ್ರತಿಭಟನೆ

KannadaprabhaNewsNetwork |  
Published : Jul 24, 2024, 12:16 AM IST
೨೩ಕೆಎನ್‌ಕೆ-೨                                                                                                             ಕನ್ನಡಪ್ರಭ ವಾರ್ತೆ, ಕನಕಗಿರಿ                                                                                                                        ೩೭೧(ಜೆ) ಕಾಯ್ದೆಯ ಅಸಮರ್ಪಕ ಅನುಷ್ಠಾನವನ್ನು ಹಾಗೂ ಮೀಸಲಾತಿಯನ್ನು ರದ್ದುಪಡಿಸುವಂತೆ ಒತ್ತಾ¬ಸಿ ಕಲ್ಯಾಣ ಕರ್ನಾಟಕ ಪ್ರದೇಶದ ಜನತೆಗೆ ಅನ್ಯಾಯ ವೆಸಗಲು ಮುಂದಾಗಿರುವ ಹಸಿರು ಪ್ರತಿಷ್ಠಾನ ಸಂಘಟನೆಗೆ ದಿಟ್ಟ ಉತ್ತರ ನೀಡುವುದಕ್ಕಾಗಿ ಪಟ್ಟಣದ ರಂಭಾಪುರಿತ ಕಲ್ಯಾಣ ಮಂಟಪದಲ್ಲಿ ತಾಲೂಕು ಅನುಷ್ಠಾನ ಸಮಿತಿಯ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಪೂರ್ವಭಾವಿ ಸಭೆ ಮಂಗಳವಾರ ನಡೆಯಿತು.    ಸಭೆಯನ್ನುದ್ದೇಶಿಸಿ ಚಿಂತಕ ಅಲ್ಲಾಗಿರಿರಾಜ ಮಾತನಾಡಿ, ೩೭೧ (ಜೆ) ನಮ್ಮ ಭಾಗದ ಯುವ ಜನಾಂಗಕ್ಕೆ ಶಿಕ್ಷಣ ಮತ್ತು ಉದ್ಯೋಗ, ಪ್ರತಿ ಹಾಗೂ ನೌಕರರ ಮುಂಬಡ್ತಿ ಸೇರಿ ಇಲ್ಲಿಯ ಸಮಗ್ರ ಅಭಿವೃದ್ಧಿಯನ್ನು ಸಹಿಸದ ಹಸಿರು ಪ್ರತಿಷ್ಠಾನದಂತಹ ಸಂಘಟನೆಗಳ ಮೂಲಕ ಅಡ್ಡಿ ಉಂಟು ಮಾಡುತ್ತಿವೆ. ಈಗ ನಮಗೆ ನೀಡಿದ ಮೀಸಲಾತಿ ರದ್ದುಗೊಳಿಸಬೇಕೆನ್ನುವ ಕೂಗು ಅಸಂವಿಧಾನಿಕವಾಗಿದೆ. ಕಲ್ಯಾಣ ಕರ್ನಾಟಕ ಭಾಗದ ಎಲ್ಲರೂ ಈ ಹುನ್ನಾರ ಹಾಗೂ ಅನ್ಯಾಯವನ್ನು ನಾವೆಲ್ಲರೂ ಸೇರಿ ಖಂಡಿಸಿ, ಪ್ರತಿಭಟಿಸಬೇಕಾಗಿದೆ. ಈಗಾಗಲೇ ಬೀದರ, ಕಲಬುರ್ಗಿ, ರಾಯಚೂರು, ಗಂಗಾವತಿ, ಕಾರಟಗಿಯಲ್ಲಿ ಪ್ರತಿಭಟನೆಗಳಾಗಿವೆ. ಅದರಂತೆ ಕನಕಗಿರಿಯಲ್ಲಿಯೂ ಪ್ರತಿಭಟಿಸುವ ಮೂಲಕ ಉತ್ತರ ನೀಡಲು ನಾವೆಲ್ಲರೂ ಕಂಕಣ ಬದ್ಧರಾಗೋಣ ಎಂದರು.ಪ್ರಮುಖರಾದ ರಮೇಶ ನಾಯಕ, ಮಹಾಂತೇಶ ಸಜ್ಜನ, ಶರಣಪ್ಪ ಭತ್ತದ, ವಾಗೇಶ ಹಿರೇಮಠ ಅಯ್ಯನಗೌಡ ಅಳ್ಳಳ್ಳಿ ಮಾತನಾಡಿ, ಹೋರಾಟಕ್ಕೆ ಪ್ರತಿಯೊಬ್ಬರು ಬೆಂಬಲಿಸಬೇಕೆಂದು ಮನವಿ ಮಾಡಿದರು. ಹಿರಿಯರು, ಹೋರಾಟಗಾರರು ಸಲಹೆಯಂತೆ ಜು.೨೯ರಂದು ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಲಾಯಿತು. ಪ್ರಮುಖರಾದ ವಿರೇಶ ಸಮಗಂಡಿ, ಗಂಗಾಧಾರಸ್ವಾಮಿ, ಸಂಗಪ್ಪ ಸಜ್ಜನ, ಸುರೇಶ ಗುಗ್ಗಳಶೆಟ್ರ, ಕೆ.ಎಚ್ ಕುಲಕರ್ಣಿ,  ದುರ್ಗದಾಸ ಯಾದವ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಇದ್ದರು.೨೩ಕೆಎನ್‌ಕೆ-೨                                                                                        ೩೭೧(ಜೆ) ಸಮರ್ಪಕ ಅನುಷ್ಠಾನಕ್ಕಾಗಿ ಆಗ್ರಹಿಸಿ ಕನಕಗಿರಿಯಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿಯಲ್ಲಿ ಚಿಂತಕ ಅಲ್ಲಾಗಿರಿರಾಜ ಮಾತನಾಡಿದರು.   | Kannada Prabha

ಸಾರಾಂಶ

ಜು.೨೯ರಂದು ಬೃಹತ್ ಪ್ರತಿಭಟನೆ ನಡೆಸಲು ಸಭೆಯಲ್ಲಿ ನಿರ್ಧರಿಸಲಾಯಿತು.

ತಾಲೂಕು ಅನುಷ್ಠಾನ ಸಮಿತಿಯ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಪೂರ್ವಭಾವಿ ಸಭೆ

ಕನ್ನಡಪ್ರಭ ವಾರ್ತೆ ಕನಕಗಿರಿ

೩೭೧ ಜೆ ಕಾಯ್ದೆಯ ಸಮರ್ಪಕ ಅನುಷ್ಠಾನಕ್ಕೆ ಆಗ್ರಹಿಸಿ ಹಾಗೂ ಮೀಸಲಾತಿ ರದ್ದುಪಡಿಸುವಂತೆ ಒತ್ತಾಯಿಸಿ ಕಲ್ಯಾಣ ಕರ್ನಾಟಕ ಪ್ರದೇಶದ ಜನತೆಗೆ ಅನ್ಯಾಯವೆಸಗಲು ಮುಂದಾಗಿರುವ ಹಸಿರು ಪ್ರತಿಷ್ಠಾನ ಸಂಘಟನೆಗೆ ದಿಟ್ಟ ಉತ್ತರ ನೀಡುವುದಕ್ಕಾಗಿ ಪಟ್ಟಣದ ರಂಭಾಪುರಿ ಕಲ್ಯಾಣ ಮಂಟಪದಲ್ಲಿ ತಾಲೂಕು ಅನುಷ್ಠಾನ ಸಮಿತಿಯ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಪೂರ್ವಭಾವಿ ಸಭೆ ಮಂಗಳವಾರ ನಡೆಯಿತು.

ಸಭೆಯನ್ನುದ್ದೇಶಿಸಿ ಚಿಂತಕ ಅಲ್ಲಾಗಿರಿರಾಜ ಮಾತನಾಡಿ, ೩೭೧ಜೆ ನಮ್ಮ ಭಾಗದ ಯುವ ಜನಾಂಗಕ್ಕೆ ಶಿಕ್ಷಣ ಮತ್ತು ಉದ್ಯೋಗ, ಪ್ರತಿ ಹಾಗೂ ನೌಕರರ ಮುಂಬಡ್ತಿ ಸೇರಿ ಇಲ್ಲಿಯ ಸಮಗ್ರ ಅಭಿವೃದ್ಧಿಯನ್ನು ಸಹಿಸದ ಹಸಿರು ಪ್ರತಿಷ್ಠಾನದಂತಹ ಸಂಘಟನೆಗಳು ಅಡ್ಡಿ ಉಂಟು ಮಾಡುತ್ತಿವೆ. ಈಗ ನಮಗೆ ನೀಡಿದ ಮೀಸಲಾತಿ ರದ್ದುಗೊಳಿಸಬೇಕೆನ್ನುವ ಕೂಗು ಅಸಂವಿಧಾನಿಕವಾಗಿದೆ. ಕಲ್ಯಾಣ ಕರ್ನಾಟಕ ಭಾಗದ ಎಲ್ಲರೂ ಈ ಹುನ್ನಾರವನ್ನು ನಾವೆಲ್ಲರೂ ಸೇರಿ ಖಂಡಿಸಿ, ಪ್ರತಿಭಟಿಸಬೇಕಾಗಿದೆ. ಈಗಾಗಲೇ ಬೀದರ, ಕಲಬುರ್ಗಿ, ರಾಯಚೂರು, ಗಂಗಾವತಿ, ಕಾರಟಗಿಯಲ್ಲಿ ಪ್ರತಿಭಟನೆಗಳಾಗಿವೆ. ಅದರಂತೆ ಕನಕಗಿರಿಯಲ್ಲಿಯೂ ಪ್ರತಿಭಟಿಸುವ ಮೂಲಕ ಉತ್ತರ ನೀಡಲು ನಾವೆಲ್ಲರೂ ಬದ್ಧರಾಗೋಣ ಎಂದರು.

ಪ್ರಮುಖರಾದ ರಮೇಶ ನಾಯಕ, ಮಹಾಂತೇಶ ಸಜ್ಜನ, ಶರಣಪ್ಪ ಭತ್ತದ, ವಾಗೇಶ ಹಿರೇಮಠ ಅಯ್ಯನಗೌಡ ಅಳ್ಳಳ್ಳಿ ಮಾತನಾಡಿ, ಹೋರಾಟಕ್ಕೆ ಪ್ರತಿಯೊಬ್ಬರು ಬೆಂಬಲಿಸಬೇಕೆಂದು ಮನವಿ ಮಾಡಿದರು. ಎಲ್ಲರ ಸಲಹೆಯಂತೆ ಜು.೨೯ರಂದು ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಲಾಯಿತು.

ಪ್ರಮುಖರಾದ ವೀರೇಶ ಸಮಗಂಡಿ, ಗಂಗಾಧಾರಸ್ವಾಮಿ, ಸಂಗಪ್ಪ ಸಜ್ಜನ, ಸುರೇಶ ಗುಗ್ಗಳಶೆಟ್ರ, ಕೆ.ಎಚ್. ಕುಲಕರ್ಣಿ, ದುರ್ಗದಾಸ ಯಾದವ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಇದ್ದರು.ಎಸ್ಸೆಸ್ಸೆಲ್ಸಿ ಮಕ್ಕಳ ಜತೆ ತಾಪಂ ಇಒ ಸಂವಾದ:

ಕನಕಗಿರಿ ತಾಲೂಕಿನ ಕಲಿಕೇರಿ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ತಾಪಂ ಕಾರ್ಯನಿರ್ವಾಹಕಾಧಿಕಾರಿ ಕೆ. ರಾಜಶೇಖರ ಭೇಟಿ ನೀಡಿ, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.ಶಾಲೆಯ ಫಲಿತಾಂಶ ಕುಂಠಿತವಾಗಿದ್ದರಿಂದ 10ನೇ ತರಗತಿ ವಿದ್ಯಾರ್ಥಿಗಳೊಂದಿಗೆ ಚರ್ಚಿಸಿದ ಇಒ ಅವರು, ಈ ಭಾರಿ ಎಸ್ಎಸ್ಎಲ್ಸಿಯಲ್ಲಿ ಉತ್ತಮ ಫಲಿತಾಂಶ ಪಡೆಯುವ ಮೂಲಕ ಜಿಲ್ಲೆಗೆ ಕೀರ್ತಿ ತರಬೇಕು. ಅಧ್ಯಯನ ಯಾವ ರೀತಿ ಮಾಡಬೇಕೆನ್ನುವ ಕುರಿತು ವಿಷಯವಾರು ಶಿಕ್ಷಕರ ಜತೆ ಚರ್ಚಿಸಬೇಕು. ಕಲಿಕೆಗೆ ಏನಾದರೂ ಸಮಸ್ಯೆಗಳಿದ್ದರೆ ಮುಖ್ಯೋಪಾಧ್ಯಾಯರನ್ನು ಸಂಪರ್ಕಿಸುವಂತೆ ತಿಳಿಸಿದರು.ಇದಕ್ಕೂ ಮೊದಲು ಸುಳೇಕಲ್ ಗ್ರಾಪಂ ಕಚೇರಿಗೆ ತೆರಳಿದ ಇಒ ಪ್ರಗತಿ ಪರಿಶೀಲನೆ ನಡೆಸಿದರು.

ಶಾಲಾ ಶಿಕ್ಷಕ ಮಹದೇವಪ್ಪಸ್ವಾಮಿ, ತಾಂತ್ರಿಕ ಸಂಯೋಜಕರಾದ ಸಯ್ಯದ್ ತನ್ವೀರ್, ಗ್ರಾಪಂ ಕಾರ್ಯದರ್ಶಿ ನಾಗಪ್ಪ, ಸದಸ್ಯ ಬೆಟ್ಟಪ್ಪ, ಗಣಕಯಂತ್ರ ಸಹಾಯಕ ದುರುಗೇಶ್ ಸೇರಿದಂತೆ ಗ್ರಾಪಂ ಸಿಬ್ಬಂದಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರಿನಲ್ಲಿ ಕಾಳು ಹಾಕಿ ಕಲಬೆರಿಕೆ ಪತ್ತೆ ಮಾಡಿ
ಭಾಷಣ ಮಾಡಿಕೊಂಡು ಹೋದವನಲ್ಲ, ಪಕ್ಷದ ಎಲ್ಲಾ ಕೆಲ್ಸ ಮಾಡಿದ್ದೇನೆ: ಡಿಕೆಶಿ