ನಾಡಿಗಾಗಿ ಕನ್ನಡಕ್ಕಾಗಿ ಕಾಯಿ ಒಡೆಯೋಣ: ಕನ್ನಡಪರ ಹೋರಾಟಗಾರ
ವಿಧಾನ ಸಭೆಯಿಂದ ವಿಪಕ್ಷದ 18 ಮಂದಿ ಶಾಸಕರನ್ನು 6 ತಿಂಗಳು ಅಮಾನತು ಮಾಡಿದ ಸ್ವೀಕರ್ ನಡೆ ಸರಿಯಲ್ಲ. ವಿಧಾನ ಸಭೆಯಲ್ಲಿ ಆಡಳಿತ ಪಕ್ಷ ಮತ್ತು ವಿಪಕ್ಷಗಳ ನಡುವೆ ಪರ ವಿರೋಧ ಇರುತ್ತದೆ, ವಿಪಕ್ಷ ಸದಸ್ಯರು ಕೂಡ ತಮ್ಮ ಮಿತಿಯನ್ನು ಮೀರಿ ವರ್ತಿಸಿದ್ದಾರೆ, ಅದು ಸರಿಯಲ್ಲ. ಆದರೆ ಸ್ವೀಕರ್ ಅದನ್ನು ವೈಯಕ್ತಿಕವಾಗಿ ತೆಗೆದುಕೊಂಡು ಶಾಸಕರನ್ನು 6 ತಿಂಗಳು ಹೊರಗೆ ಹಾಕಿದ್ದು ಕೂಡ ಸರಿಯಲ್ಲ. ವಿಪಕ್ಷ ಸದಸ್ಯರು ತಾವು ಕುಳಿತಲ್ಲಿಂದಲೇ ಮಾತಿನ ಮೂಲಕ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕುವಂತೆ ಮಾಡಬಹುದಿತ್ತಲ್ಲ. ಒಟ್ಟಿನಲ್ಲಿ ಈ ಘಟನೆ ಶಾಸನ ಸಭೆಗೆ ಗೌರವ ತರುವಂತಹದ್ದಲ್ಲ ಎಂದು ವಾಟಾಳ್ ವಿಶ್ಲೇಷಿಸಿದರು.ಸುವರ್ಣ ಕಾಲ ಈಗಿಲ್ಲ:
ನಿಜಲಿಂಗಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ನಾನು ಪ್ರಥಮ ಬಾರಿಗೆ ನನ್ನ 25ನೇ ವಯಸ್ಸಿನಲ್ಲಿ ಶಾಸಕನಾಗಿದ್ದೆ. ಅದು ಶಾಸನಸಭೆಯ ಸುವರ್ಣಯುಗವಾಗಿತ್ತು. ಆಗ ಸದನಕ್ಕೆ ಒಂದು ಗಾಂಭೀರ್ಯ, ಘನತೆ ಇತ್ತು. ಕನ್ನಡಪರ, ರೈತರಪರ ಪ್ರಶ್ನೆಗಳನ್ನು ಕೇಳಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲಾಗುತ್ತಿತ್ತು. ಚರ್ಚೆಗಳು ನಡೆದು ಸದನದ ಸದುಪಯೋಗವಾಗುತ್ತಿತ್ತು. ಆದರೆ ಇಂದು ಅಂತಹ ವಾತಾವರಣ ಇಲ್ಲ, ಬೇರೆ ಅನಾವಶ್ಯಕ ವಿಷಯಗಳನ್ನು ಎಳೆದು ತಂದು ಮಾತನಾಡುತ್ತಾರೆ. ಶಾಸನಸಭೆಯ ಘನತೆ ಎಲ್ಲೆಲ್ಲೋ ಕಳೆದುಹೋಗುತ್ತಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದವರು ಬೇಸರಿಸಿದರು.-------------ರಿಷಭ್ ಶೆಟ್ಟಿ ಶಿವಾಜಿ ಪಾತ್ರ ಮಾಡಕೂಡದು!
ರಿಷಭ್ ಶೆಟ್ಟಿ ಹಿಂದಿಯಲ್ಲಿ ನಿರ್ಮಾಣವಾಗುತ್ತಿರುವ ಸಿನಿಮಾದ ಶಿವಾಜಿ ಪಾತ್ರದಲ್ಲಿ ಅಭಿನಯಿಸಬಾರದು. ಇದರಿಂದ ಅನಗತ್ಯ ತಕರಾರು ಉಂಟಾಗುತ್ತದೆ ಎಂದು ವಾಟಾಳ್ ಹೇಳಿದರು.ರಿಷಭ್ ಶೆಟ್ಟಿ ಕಾಂತಾರ ಸಿನಿಮಾ ಮಾಡಿ ಒಳ್ಳೆಯ ಹಣ, ಹೆಸರು, ಗೌರವ ಸಂಪಾದಿಸಿದ್ದಾರೆ. ಶಿವಾಜಿ ಸಿನಿಮಾ ಮಾಡಿದರೆ ಅದೆಲ್ಲ ಕಳೆದುಕೊಳ್ಳುತ್ತಾರೆ. ಯಾಕೆ ಶಿವಾಜಿ ಸಿನಿಮಾದಲ್ಲಿ ನಟಿಸಿ ಅನಗತ್ಯ ತಕರಾರು ಮಾಡಿಕೊಳ್ಳಬೇಕು, ರಾಜ್ಯದಲ್ಲಿ ದೊಡ್ಡದೊಡ್ಡ ಮಹಾನೀಯರು, ಸ್ವಾತಂತ್ರ್ಯ ಹೋರಾಟಗಾರರಿದ್ದಾರೆ. ಅವರ ಬಗ್ಗೆ ಸಿನಿಮಾದಲ್ಲಿ ನಟಿಸಲಿ, ಶಿವಾಜಿ ಸಿನಿಮಾದಲ್ಲಿ ನಟಿಸಕೂಡದು ಎಂದು ಈಗಾಗಲೇ ಅವರಿಗೆ ಹೇಳಿದ್ದೇನೆ. ಈ ಬಗ್ಗೆ ಅವರು ಏನು ತೀರ್ಮಾನ ತೆಗೆದುಕೊಳ್ಳುತ್ತಾರೆ ನೋಡೋಣ ಎಂದವರು ಹೇಳಿದರು.