ರೈತರಿಗೆ ಸಮರ್ಪಕ ರಸಗೊಬ್ಬರ ಪೂರೈಸಿ: ರವಿಕಾಂತ ಅಂಗಡಿ

KannadaprabhaNewsNetwork |  
Published : May 09, 2026, 02:15 AM IST
ಪೊಟೋ-ವಿವಿಧ ರೈತಪರ ಹೋರಾಟಗಾರರು ರರೈತರಿಗೆ ಸರಿಯಾಗಿ ಗೊಬ್ಬರ ವಿತರಣೆ ಮಾಡುವಲ್ಲಿ ಸರ್ಕಾರ ಮುಂಜಾಗ್ರತೆ ವಹಿಸಬೇಕು ಎಂದು ಆಗ್ರಹಿಸಿ ಸುದ್ದಿಗೋಷ್ಟ ನಡೆಸಿದರು.  | Kannada Prabha

ಸಾರಾಂಶ

ಯೂರಿಯಾ ಗೊಬ್ಬರ ಬಗ್ಗೆ ಪೂರೈಸುವಲ್ಲಿ ಸರ್ಕಾರ ಹಿಂದೆ ಮುಂದೆ ನೋಡುತ್ತಿದೆ. ಎಕರೆಗೆ ಒಂದೇ ಚೀಲ ಎಂಬ ನೀತಿ ಕೈಬಿಟ್ಟು ಹೆಚ್ಚು ಗೊಬ್ಬರ ವಿತರಣೆ ಮಾಡಬೇಕು.

ಲಕ್ಷ್ಮೇಶ್ವರ: ಮುಂಗಾರು ಹಂಗಾಮಿನಲ್ಲಿ ರೈತರಿಗ ಸಮರ್ಪಕವಾಗಿ ರಸಗೊಬ್ಬರ ಪೂರೈಕೆ ಮಾಡಬೇಕು. ಒಬ್ಬ ರೈತನಿಗೆ ಒಂದೇ ಚೀಲ ಗೊಬ್ಬರ ಎಂಬ ಅವೈಜ್ಞಾನಿಕ ನೀತಿ ಕೈಬಿಡಬೇಕು. ಈ ಹಿಂದೆ ಯಾವ ಮಾದರಿಯಲ್ಲಿ ರೈತರಿಗೆ ಗೊಬ್ಬರ ಕೊಡುತ್ತಿದ್ದರೋ ಅದೇ ರೀತಿ ಗೊಬ್ಬರ ಪೂರೈಸುವಂತೆ ವಿವಿಧ ರೈತಪರ ಸಂಘಟನೆಗಳ ಒಕ್ಕೂಟದ ಸದಸ್ಯ ರವಿಕಾಂತ ಅಂಗಡಿ ಆಗ್ರಹಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಯೂರಿಯಾ ಗೊಬ್ಬರ ಬಗ್ಗೆ ಪೂರೈಸುವಲ್ಲಿ ಸರ್ಕಾರ ಹಿಂದೆ ಮುಂದೆ ನೋಡುತ್ತಿದೆ. ಎಕರೆಗೆ ಒಂದೇ ಚೀಲ ಎಂಬ ನೀತಿ ಕೈಬಿಟ್ಟು ಹೆಚ್ಚು ಗೊಬ್ಬರ ವಿತರಣೆ ಮಾಡಬೇಕು. ಕೃಷಿ ಹಾಗೂ ತೋಟಗಾರಿಕೆ ಇಲಾಖೆಯವರು ರೈತರಿಗೆ ಕೆಲವೇ ಕೆಲವು ಕಂಪನಿ ರಸಗೊಬ್ಬರಗಳ ಬಗ್ಗೆ ರೈತರಿಗೆ ಮಾಹಿತಿ ಕೊಡುತ್ತಾರೆ ಎಂದರು.

ಇನ್ನೂ ಹೆಚ್ಚಿನ ಗೊಬ್ಬರಗಳ ಕಂಪನಿಗಳ ಕುರಿತು ರೈತರಿಗೆ ಮಾಹಿತಿ ಕೊಡಿ, ಯಾವ ಬೆಳೆಗಳಿಗೆ ಯಾವ ರಸಗೊಬ್ಬರ ಹಾಕಬೇಕು ಎಂಬುದು ಸ್ಪಷ್ಟನೆ ಕೊಡಿ, ಕೃಷಿ ಮತ್ತು ತೋಟಗಾರಿಕಾ ಇಲಾಖೆಯವರು ರೈತ ಜನಜಾಗೃತಿ ಬಗ್ಗೆ ದುಡ್ಡನ್ನು ಖರ್ಚು ಮಾಡುತ್ತೀರಿ, ಮುಂಗಾರು ಪ್ರಾರಂಭದ ಪೂರ್ವದಲ್ಲಿ ರೈತರಿಗೆ ಜಾಗೃತಿ ಮೂಡಿಸಬೇಕು. ರೈತರಿಗೆ ಸಿಗುವ ಸೌಲಭ್ಯಗಳು ನೇರವಾಗಿ ರೈತರಿಗೆ ಮುಟ್ಟಿಸುವ ಕೆಲಸ ಆಗಬೇಕು. ಕೃಷಿ ಹಾಗೂ ತೋಟಗಾರಿಕೆ ಇಲಾಖೆಯಲ್ಲಿ ಏಜೆಂಟರ ಹಾವಳಿ ಹೆಚ್ಚಾಗಿದ್ದು, ಅದನ್ನು ನಿಯಂತ್ರಣ ಮಾಡಬೇಕು. ಶಿರಹಟ್ಟಿ ಮತಕ್ಷೇತ್ರದಲ್ಲಿ ಬೆಳೆವಿಮೆ ಮಾಡುವಲ್ಲಿ ಜಿಪಿಎಸ್ ಮಿಸ್ ಮ್ಯಾಚ್ ಆಗಿ ಸಾವಿರಾರು ರೈತರಿಗೆ ವಿಮಾ ಸಿಗುತ್ತಿಲ್ಲ. ಮಿಸ್ ಮ್ಯಾಚ್ ಮಾಡಿದ ವ್ಯೆಕ್ತಿಗಳ ಮೇಲೆ ಕ್ರಮ ಕೈಗೊಳ್ಳಿ ಎಂದು ಅಗ್ರಹಿಸಿದರು.

ಸಮಗ್ರ ರೈತಪರ ಹೋರಾಟ ಸಮಿತಿ ಅಧ್ಯಕ್ಷ ಮಂಜುನಾಥ ಮಾಗಡಿ, ಕೃಷಿಕ ಸಮಾಜ(ನವದೆಹಲಿ) ತಾಲೂಕು ಅಧ್ಯಕ್ಷ ಚನ್ನಪ್ಪ ಷಣ್ಮುಖಿ ಮಾತನಾಡಿ, ಬೆಳೆವಿಮೆ ರೈತರಿಗೆ ಬಂದಿಲ್ಲ. ಆದಷ್ಟು ಬೇಗ ಬೆಳೆ ವಿಮೆ ಬಿಡುಗಡೆ ಮಾಡಬೇಕು. ಎಂಎಸ್‌ಪಿ ಮೂಲಕ ಮಾರಿದ ಬೆಳೆಗಳಿಗೆ ಬೇಗನೆ ಹಣ ಜಮೆ ಮಾಡಬೇಕು. ಮುಂಗಾರು ಬಿತ್ತನೆ ಮಾಡಿಸುವ ಸಲುವಾಗಿ ರಸಗೊಬ್ಬರ ಸಂಗ್ರಹ ಮಾಡಿ ಇಡಬೇಕಾದ ಪರಿಸ್ಥಿತಿವಿದ್ದು, ರೈತರಿಗೆ ಸಮರ್ಪಕವಾಗಿ ವಿತರಣೆ ಮಾಡಬೇಕು ಎಂದರು.

ಪಕ್ಷಾತೀತ ರೈತಪರ ಹೋರಾಟ ವೇದಿಕೆ ಅಧ್ಯಕ್ಷ ಮಹೇಶ ಹೊಗೆಸೊಪ್ಪಿನ ರೈತರ ಸಮಸ್ಯೆ ಬಂದಾಗ ಪಕ್ಷಾತೀತವಾಗಿ ಹೋರಾಟ ಮಾಡಬೇಕಾಗುತ್ತದೆ. ರೈತರ ಹಕ್ಕುಗಳಿಗಾಗಿ ಹೋರಾಟ ಅನಿವಾರ್ಯ. ಶೀಘ್ರದಲ್ಲಿ ತಾಲೂಕಿನ ಕೊನೆಯ ಗ್ರಾಮ ಗೋವನಾಳದಲ್ಲಿನ ರೈತ ಹುತಾತ್ಮರ ಸ್ಮಾರಕಗಳಿಗೆ ಪೂಜೆ ಸಲ್ಲಿಸಿ ರೈತಪರ ಹೋರಾಟಗಾರರು ಪಟ್ಟಣದ ಶಿಗ್ಲಿ ಕ್ರಾಸ್‌ನಲ್ಲಿನ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಎದುರು ಪ್ರತಿಭಟನೆ ನಡೆಸುವ ಮೂಲಕ ತಹಶಿಲ್ದಾರರಿಗೆ ಮನವಿ ಸಲ್ಲಿಸುವ ಕುರಿತು ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.

ಈ ವೇಳೆ ಬಸವರಾಜ ಹಿರೇಮನಿ, ನೀಲಪ್ಪ ಶೇರಸೂರಿ, ಹೊನ್ನಪ್ಪ ವಡ್ಡರ, ಟಾಕಪ್ಪ ಸಾತಪುತೆ ಮಾತನಾಡಿದರು. ನಾಮದೇವ ಮಾಂಡ್ರೆ, ಸಂಜೀವ ಹುಡೇದ, ಟಾಕಪ್ಪ ಸಾತಪುತೆ, ಬಸವರಾಜ ಜಾಲಗಾರ, ಮಂಜುನಾಥ ಮುಳಗುಂದ, ಶಂಕರ ಬ್ಯಾಡಗಿ, ವೀರಣ್ಣ ಕಟಗಿ, ಪವನ ಬಂಕಾಪುರ, ಮುತ್ತಣ್ಣ ನೀರಲಗಿ, ಮಲ್ಲಿಕಾರ್ಜುನ ನೀರಾಲೋಟ, ರಾಜು ಗುಡಗೇರಿ, ಎಸ್.ಎಸ್. ತಾರಿಕೊಪ್ಪ, ಪದ್ಮನಗೌಡ ಪಾಟೀಲ, ಫಕ್ಕಿರಪ್ಪ ಕುಸಲಾಪುರ, ನಾಗನಗೌಡ ಪಾಟೀಲ್, ಮಂಜನಾಥಗೌಡ ಸಂದಿಗೋಡ, ಮಹಾಂತೇಶ ಉಮಚಗಿ ಅನೇಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೆಡ್ ಕ್ರಾಸ್ ಮಾನವೀಯ ಸೇವೆಯ ಪ್ರತೀಕ
ಮುರುಡೇಶ್ವರದಲ್ಲಿ ಕಾರು ಅಪಘಾತ: ಒಬ್ಬ ಸಾವು, ಮೂವರಿಗೆ ಗಾಯ