ಶ್ರೀನಿವಾಸ ಸಾಗರ ಬಳಿ ಭದ್ರತೆ ಕಲ್ಪಿಸಿ

KannadaprabhaNewsNetwork |  
Published : Oct 27, 2024, 02:18 AM ISTUpdated : Oct 27, 2024, 02:19 AM IST
ಸಿಕೆಬಿ-5  ಮೈದುಂಬಿ 80 ಅಡಿಗಳ ಮೇಲಿನಿಂದ ದುಮ್ಮಿಕ್ಕಿ ಹರಿಯುತ್ತಿರುವ ಶ್ರೀನಿವಾಸ ಸಾಗರ ಜಲಾಶಯದ ನೀರಿನಲ್ಲಿ ಆಟವಾಡುತ್ತಿರುವ ಪ್ರವಾಸಿಗರು. | Kannada Prabha

ಸಾರಾಂಶ

ನೀರಿಗೆ ಇಳಿದು ಆಟವಾಡುವವರ 'ಹುಚ್ಚಾಟಗಳು ಭಯ ಹುಟ್ಟಿಸುವಂತಿರುತ್ತವೆ. ಶ್ರೀನಿವಾಸ ಸಾಗರದ ಕೋಡಿಯ ತಡೆಗೋಡೆಯ ಮೇಲೆ ಏರಲು ಯುವಕರು ತಾ ಮುಂದು ನಾ ಮುಂದು ಎಂದು ಮುಗಿಬೀಳುತ್ತಿದ್ದಾರೆ. ಎರಡು ವರ್ಷಗಳ ಹಿಂದೆ ಹೀಗೆ ತಡೆಗೋಡೆಯ ಮೇಲೆ ಹತ್ತಿದ ಯುವಕನೊಬ್ಬ ಏಕಾಏಕಿ ಬಿದ್ದು ಗಾಯಗೊಂಡಿದ್ದನು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಹಿಂಗಾರು ಮಳೆ ಧಾರಾಕಾರವಾಗಿ ಸುರಿದು ಧರೆಯನ್ನು ತಂಪು ಮಾಡಿದೆ. ಕೆರೆಕಟ್ಟೆ ಜಲಾಶಯಗಳ ಒಡಲು ಭರ್ತಿಯಾಗಿ ಕೋಡಿ ಹರಿಯುತ್ತಿವೆ. ಕೋಡಿ ಹರಿಯುವ ಜಲಾಶಯ ಕೆರೆಕಟ್ಟೆಯ ನೀರು ನೋಡಲು ಜನತೆ ತಂಡೋಪ ತಂಡವಾಗಿ ಆಗಮಿಸುತ್ತಿದ್ದಾರೆ. ಜನರ ದಾಳಿಯಿಂದ ಅಪಾಯವಾಗುವ ಮುನ್ನ ಜಿಲ್ಲಾಡಳಿತ ಎಚ್ಚರ ವಹಿಸುವ ಅಗತ್ಯವಿದೆ ಎನ್ನುವುದು ಸ್ಥಳೀಯರ ಆಗ್ರಹವಾಗಿದೆ.ಕೋಡಿ ಹರಿದ ಕೆರೆಗಳು

ಚಿಕ್ಕಬಳ್ಳಾಪುರ ಮತ್ತು ದೊಡ್ಡಬಳ್ಳಾಪುರ ನಗರಗಳಿಗೆ ಕುಡಿಯುವ ನೀರಿನ ಮೂಲವಾದ ಜಕ್ಕಲಮಡುಗು ಜಲಾಶಯದ ಒಡಲು ತುಂಬಿರುವುದು ಜನತೆಯ ಸಂತೋಷಕ್ಕೆ ಕಾರಣವಾಗಿದೆ. ಅದೇ ರೀತಿ ಶ್ರೀನಿವಾಸಸಾಗರ ಜಲಾಶಯ ಉಕ್ಕಿ ಬಂದಿದೆ. 80 ಅಡಿ ಮೇಲಿನಿಂದ ನೀರು ಕೋಡಿ ಹರಿಯುತ್ತಿರುವುದನ್ನು ನೋಡಲು ಎರಡು ಕಣ್ಣುಗಳೆ ಸಾಲದು.

ಆದರೆ ನೀರಿಗೆ ಇಳಿದು ಆಟವಾಡುವವರ ''''ಹುಚ್ಚಾಟಗಳು ಭಯ ಹುಟ್ಟಿಸುವಂತಿರುತ್ತವೆ. ಶ್ರೀನಿವಾಸ ಸಾಗರದ ಕೋಡಿಯ ತಡೆಗೋಡೆಯ ಮೇಲೆ ಏರಲು ಯುವಕರು ತಾ ಮುಂದು ನಾ ಮುಂದು ಎಂದು ಮುಗಿಬೀಳುತ್ತಿದ್ದಾರೆ. ಎರಡು ವರ್ಷಗಳ ಹಿಂದೆ ಹೀಗೆ ತಡೆಗೋಡೆಯ ಮೇಲೆ ಹತ್ತಿದ ಯುವಕನೊಬ್ಬ ಏಕಾಏಕಿ ಬಿದ್ದಿ ಘಟನೆ ನಡೆದಿತ್ತು. ಗೋಡೆ ಏರುವುದ ತಡೆಗಟ್ಟಿ

ಧುಮುಕುವ ನೀರಿನಲ್ಲಿ ನಾಲ್ಕಾರು ಯುವಕರು ಒಟ್ಟಿಗೆ ತಡೆಗೋಡೆಯನ್ನು ಹತ್ತುವುದು, ಪೈಪೋಟಿಗೆ ಬಿದ್ದಂತೆ ಮೇಲೆ ಏರುತ್ತಾರೆ. ಕಡಿದಾದ ತಡೆಗೋಡೆಯಿಂದ ಸ್ವಲ್ಪ ಜಾರಿದರೂ ಕೆಳಕ್ಕೆ ಬೀಳಬೇಕಾಗುತ್ತದೆ. ಇಲ್ಲಿ ಪಹರೆ ನಿಯೋಜಿಸಿ ಭದ್ರತೆಯನ್ನು ಕಲ್ಪಿಸಬೇಕು. ನೀರಿನಲ್ಲಿ ಆಟವಾಡಲಿ. ಆದರೆ ಹೀಗೆ ಹುಚ್ಚಾಟಗಳು ಅನಗತ್ಯ ಎಂಬುದು ಪ್ರವಾಸಿಗರ ಅನಿಸಿಕೆ ಮತ್ತು ಜನರ ಜೀವದ ಕಾಳಜಿಯಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ