ಕನ್ನಡಪ್ರಭ ವಾರ್ತೆ ಮಂಡ್ಯ
ಮಂಡ್ಯ ಮಹಿಳಾ ಪೊಲೀಸ್ ಠಾಣೆಯ ಪಿಎಸ್ಐ ಸವಿತಾ ಬಿ.ಪೊಲೀಸ್ ಪಾಟೀಲ ಎಂಬುವರೇ ಕಪಾಳಮೋಕ್ಷಕ್ಕೆ ಒಳಗಾದವರು. ಗರ್ಭಗುಡಿ ಪ್ರಾಂಗಣದಲ್ಲಿ ಕರ್ತವ್ಯದಲ್ಲಿದ್ದ ತಮ್ಮ ಮೇಲೆ ಹಲ್ಲೆ ನಡೆಸಿ ಅವಾಚ್ಯ ಶಬ್ಧಗಳಿಂದ ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆಂದು ಐಶ್ವರ್ಯ ವಿರುದ್ಧ ಪಾಂಡವಪುರ ತಾಲೂಕು ಕ್ಯಾತನಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ.
ನಡೆದಿದ್ದೇನು?:ಪಿಎಸ್ಐ ಸವಿತಾ ಅವರು ಭೀಮನ ಅಮಾವಾಸ್ಯೆ ಹಿನ್ನೆಲೆಯಲ್ಲಿ ಆ.೧೨ರಂದು ಆರತಿ ಉಕ್ಕಡದ ಗರ್ಭಗುಡಿ ಪ್ರಾಂಗಣದಲ್ಲಿ ಕರ್ತವ್ಯಕ್ಕೆ ನೇಮಕಗೊಂಡಿದ್ದರು. ಸಂಜೆ ೪.೩೦ರ ಸಮಯಕ್ಕೆ ಮದ್ದೂರು ಪಿಎಸ್ಐ ಶೇಖರ್ ಒಬ್ಬ ಗಂಡಸು ಮತ್ತು ಇಬ್ಬರು ಹೆಂಗಸರನ್ನು ದೇವಸ್ಥಾನದ ಬಲಬದಿಗೆ ಕರೆದುಕೊಂಡು ಬಂದರು. ನಂತರ ಆ ಮೂವರು ಭಕ್ತಾಧಿಗಳು ಹೋಗುತ್ತಿದ್ದ ಸಾಲಿನ ವಿರುದ್ಧ ದಿಕ್ಕಿನಲ್ಲಿ ತೆರಳುತ್ತಿದ್ದಾಗ ಸವಿತಾ ಅವರು ತಡೆದಿದ್ದಾರೆ. ಈ ಸಮಯದಲ್ಲಿ ಐಶ್ವರ್ಯ ನಾನು ಗರ್ಭಗುಡಿಯ ಒಳಗೆ ಹೋಗಬೇಕು. ನನ್ನನ್ನು ನೇರವಾಗಿ ಒಳಗೆ ಹೋಗಲು ಬಿಡಿ ಎಂದು ಕೇಳಿದ್ದಾಳೆ. ಜನಸಂದಣಿ ಇರುವುದರಿಂದ ತಕ್ಷಣ ಒಳಗೆ ಬಿಡಲಾಗುವುದಿಲ್ಲ. ಸ್ವಲ್ಪ ಸಮಯ ಕಾಯುವಂತೆ ತಿಳಿಸಿದ್ದಾಗಿ ಸವಿತಾ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಇದರಿಂದ ಕ್ರೋಧಗೊಂಡ ಐಶ್ವರ್ಯ ಏರು ಧ್ವನಿಯಲ್ಲಿ ಮಾತನಾಡುತ್ತಾ ಅವಾಚ್ಯಶಬ್ಧಗಳಿಂದ ಸವಿತಾರನ್ನು ನಿಂದಿಸಿದ್ದಾಳೆ. ಆಗ ಅಲ್ಲಿಗೆ ಬಂದ ಇನ್ಸ್ಪೆಕ್ಟರ್ ಲಕ್ಷ್ಮೀ ಅವರಿಗೆ ಅವಳನ್ನು ಹೇಗೆ ಒಳಗೆ ಬಿಟ್ಟೆ. ನನ್ನನ್ನು ಏಕೆ ಇಲ್ಲಿ ನಿಲ್ಲಿಸಿದ್ದೀಯಾ ಎಂದು ಪ್ರಶ್ನಿಸುತ್ತಾ, ಸವಿತಾ ಕಡೆ ನೋಡುತ್ತಾ ನಿನಗೆ ಎಲ್ಲಿ ಬುದ್ದಿ ಕಲಿಸಬೇಕೆಂಬುದು ನನಗೆ ಗೊತ್ತೆಂದು ಹೇಳುತ್ತಾ ಏಕಾಏಕಿ ಕಪಾಳಮೋಕ್ಷ ಮಾಡಿದಳು. ಆ ಸಮಯದಲ್ಲಿ ನನ್ನನ್ನು ನಾನು ರಕ್ಷಿಸಿಕೊಳ್ಳಲು ನನ್ನ ಕೈ ಅಡ್ಡ ಮಾಡಿ ಅವಳ ಮುಖಕ್ಕೆ ತಳ್ಳಿದೆನು ಎಂದು ದೂರಿನಲ್ಲಿ ದಾಖಲಿಸಿದ್ದಾರೆ.
ಕರ್ತವ್ಯದಲ್ಲಿದ್ದ ನನಗೆ ಕಪಾಳಮೋಕ್ಷ ಮಾಡಿ ಅವಾಚ್ಯಶಬ್ಧಗಳಿಂದ ನಿಂದಿಸಿರುವ ಐಶ್ವರ್ಯ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಪಾಂಡವಪುರ ತಾಲೂಕು ಕ್ಯಾತನಹಳ್ಳಿ ಪೊಲೀಸ್ ಠಾಣೆಯಲ್ಲಿ ಸವಿತಾ ಅವರು ದೂರು ಸಲ್ಲಿಸಿದ್ದಾರೆ.
ಪುತ್ರಿ ಪರವಾಗಿ ತಂದೆ ಕ್ಷಮೆಯಾಚನೆ