ಕನ್ನಡಪ್ರಭ ವಾರ್ತೆ ಚಾಮರಾಜನಗರ
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ ಹಿಂದುಳಿದ ಜಿಲ್ಲೆಗಳಲ್ಲಿ ಉನ್ನತ ಶಿಕ್ಷಣವನ್ನು ಪ್ರಗತಿಯತ್ತ ಕೊಂಡೊಯ್ಯಲು ಚಾಮರಾಜನಗರ ಸೇರಿದಂತೆ ೯ ಜಿಲ್ಲೆಗಳಲ್ಲಿ ಸರ್ಕಾರ ಹೊಸ ವಿಶ್ವವಿದ್ಯಾನಿಲಯ ಸ್ಥಾಪನೆ ಮಾಡಲಾಗಿದ್ದು, ಕಳೆದ ಎರಡು ವರ್ಷಗಳಿಂದ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ ಎಂದರು.
ವಿವಿಗಳ ವಾರ್ಷಿಕ ನಿರ್ವಹಣೆಗೆ ೩೪೨ ಕೋಟಿ ರೂ. ಅಗತ್ಯವಿದ್ದು, ಹಣಕಾಸು ಇಲಾಖೆಗೆ ಹೊರೆಯಾಗಲಿದೆ. ವಿವಿಗೆ ಮೂಲಸೌಕರ್ಯ ಕಲ್ಪಿಸಲು ೧೦೦ ರಿಂದ ೨೦೦ ಎಕರೆ ಜಾಗಬೇಕು, ಎಲ್ಲ ವಿವಿಗಳಲ್ಲೂ ಅಷ್ಟು ಪ್ರಮಾಣದ ಜಾಗವಿಲ್ಲ ಎಂದು ಈಚೆಗೆ ಡಿಸಿಎಂ ನೇತೃತ್ವದ ಸಂಪುಟ ಉಪಸಮಿತಿ ರಾಜಕೀಯ ಪ್ರೇರಿತವಾಗಿ ಹೊಸ ವಿವಿಗಳನ್ನು ಮುಚ್ಚಲು ಮುಂದಾಗಿದೆ ಎಂದರು.ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸಬೇಕಾದ ಸರ್ಕಾರ ಕುಂಟುನೆಪ ಹೇಳಿ, ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಯತ್ನ ಮಾಡುತ್ತಿದೆ. ಸರ್ಕಾರ ಇಂತಹ ಅವೈಜ್ಞಾನಿಕ ನಿಧಾರದಿಂದ ಹಿಂದೆ ಸರಿಯಬೇಕು, ಇವುಗಳ ಅಭಿವೃದ್ಧಿ ದೃಷ್ಟಿಯಿಂದ ರಾಜ್ಯಸರ್ಕಾರ ಈ ಸಾಲಿನ ವಾರ್ಷಿಕ ಬಜೆಟ್ನಲ್ಲಿ ಸೂಕ್ತ ಅನುದಾನ ಮೀಸಲಿಡಬೇಕು ಎಂದು ಆಗ್ರಹಿಸಿದರು.