ಪಿಯುಸಿ ಫಲಿತಾಂಶ: ಬಾಗಲಕೋಟೆಗೆ ಜಿಲ್ಲೆಗೆ 21ನೇ ಸ್ಥಾನ

KannadaprabhaNewsNetwork |  
Published : Apr 10, 2026, 02:30 AM IST
ಬೆಂಕಿ ಅವಘಡ | Kannada Prabha

ಸಾರಾಂಶ

ಪ್ರಸಕ್ತ 2026ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಗುರುವಾರ ಪ್ರಕಟಗೊಂಡಿದ್ದು, ಜಿಲ್ಲೆಯಲ್ಲಿ ಪರೀಕ್ಷೆ ಬರೆದ 23647 ವಿದ್ಯಾರ್ಥಿಗಳ ಪೈಕಿ 19892 ವಿದ್ಯಾರ್ಥಿಗಳು ತೇರ್ಗಡೆ ಹೊಂದುವ ಮೂಲಕ ಶೇ.84.12 ರಷ್ಟು ಫಲಿತಾಂಶ ಪಡೆದು ರಾಜ್ಯ ಮಟ್ಟದಲ್ಲಿ 21ನೇ ಸ್ಥಾನ ಪಡೆದುಕೊಂಡಿದೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಪ್ರಸಕ್ತ 2026ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಗುರುವಾರ ಪ್ರಕಟಗೊಂಡಿದ್ದು, ಜಿಲ್ಲೆಯಲ್ಲಿ ಪರೀಕ್ಷೆ ಬರೆದ 23647 ವಿದ್ಯಾರ್ಥಿಗಳ ಪೈಕಿ 19892 ವಿದ್ಯಾರ್ಥಿಗಳು ತೇರ್ಗಡೆ ಹೊಂದುವ ಮೂಲಕ ಶೇ.84.12 ರಷ್ಟು ಫಲಿತಾಂಶ ಪಡೆದು ರಾಜ್ಯ ಮಟ್ಟದಲ್ಲಿ 21ನೇ ಸ್ಥಾನ ಪಡೆದುಕೊಂಡಿದೆ.

2025ರಲ್ಲಿ ಶೇ.72.83ರಷ್ಟು ಫಲಿತಾಂಶ ಪಡೆಯುವ ಮೂಲಕ ರಾಜ್ಯ ಮಟ್ಟದಲ್ಲಿ 15ನೇ ಸ್ಥಾನ ಪಡೆದುಕೊಂಡಿತ್ತು. ಪ್ರಸಕ್ತ 2026 ರಲ್ಲಿ 21ನೇ ಸ್ಥಾನ ಪಡೆದುಕೊಂಡಿದ್ದರೂ ಫಲಿತಾಂಶದಲ್ಲಿ ಮಾತ್ರ ಹೆಚ್ಚಿಗೆ ಕಂಡುಬಂದಿದೆ.

ಕಲಾ ವಿಭಾಗದಲ್ಲಿ 8544 ವಿದ್ಯಾರ್ಥಿಗಳ ಪೈಕಿ 6289 ಜನ ತೇರ್ಗಡೆ ಹೊಂದಿ, ಶೇ.73.61ರಷ್ಟು ಫಲಿತಾಂಶವಾದರೆ, ವಾಣಿಜ್ಯ ವಿಭಾಗದಲ್ಲಿ 5016 ಪೈಕಿ 4399 ವಿದ್ಯಾರ್ಥಿಗಳು ತೇರ್ಗಡೆ ಹೊಂದಿ ಶೇ.87.70, ವಿಜ್ಞಾನ ವಿಭಾಗದಲ್ಲಿ 10087 ವಿದ್ಯಾರ್ಥಿಗಳ ಪೈಕಿ 9204 ವಿದ್ಯಾರ್ಥಿಗಳು ತೇರ್ಗಡೆಹೊಂದಿ ಶೇ.91.25ರಷ್ಟು ತೇರ್ಗಡೆ ಹೊಂದಿದ್ದಾರೆ.

ಈ ಬಾರಿ ಫಲಿತಾಂಶದಲ್ಲಿ ಕಲಾ ವಿಭಾಗದಲ್ಲಿ ಗಂಡು ವಿದ್ಯಾರ್ಥಿಗಳು ಶೇ.56.88 ರಷ್ಟು, ಶೇ.74.13ರಷ್ಟು ಫಲಿತಾಂಶ ಪಡೆಯುವ ಮೂಲಕ ಮಹಿಳೆಯರು ಮೇಲುಗೈ ಸಾಧಿಸಿದರೆ, ವಾಣಿಜ್ಯ ವಿಭಾಗದಲ್ಲಿ ಪುರುಷರು ಶೇ.74.59, ಮಹಿಳೆಯರು ಶೇ.88.96ರಷ್ಟು ಪಡೆಯುವ ಮೂಲಕ ಮೇಲುಗೈ ಸಾಧಿಸಿದ್ದಾರೆ. ಆದರೆ ವಿಜ್ಞಾನ ವಿಭಾಗದಲ್ಲಿ ಮಹಿಳಾ ವಿದ್ಯಾರ್ಥಿಗಳು ಶೇ.87.81ರಷ್ಟು ತೇರ್ಗಡೆ ಹೊಂದಿದರೆ, ಪುರುಷ ವಿದ್ಯಾರ್ಥಿಗಳು ಶೇ.88.36ರಷ್ಟು ತೆರ್ಗಡೆಹೊಂದುವ ಮೂಲಕ ಮೇಲುಗೈ ಸಾಧಿಸಿದ್ದಾರೆ.

ಕಲಾ ವಿಭಾಗದಲ್ಲಿ ಜಿಲ್ಲೆಗೆ ಅತೀ ಹೆಚ್ಚು ಅಂಕ ಪಡೆದ ಜಮಖಂಡಿಯ ಬಿ.ಎಚ್.ಎಸ್. ಕಲಾ ಮತ್ತು ಟಿಜಿಪಿ ವಿಜ್ಞಾನ ಮಹಾವಿದ್ಯಾಲಯದ ವಿದ್ಯಾರ್ಥಿ ಮಹಮ್ಮದ ಅಯಾನ್‌ ನದಾಫ್ 600ಕ್ಕೆ 595 ಅಂಕ ಪಡೆದು (ಪ್ರಥಮ) ಹಾಗೂ ರಾಜ್ಯಕ್ಕೆ 2ನೇ ಸ್ಥಾನ, ಬಾಗಲಕೋಟೆಯ ಶಂಕ್ರಪ್ಪ ಸಕ್ರೀ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ದ್ಯಾಮವ್ವ ಯಡಹಳ್ಳಿ 600ಕ್ಕೆ 594 ಅಂಕ ಪಡೆದು (ದ್ವಿತೀಯ) ಹಾಗೂ ರಾಜ್ಯಕ್ಕೆ ಎರಡನೇ ಸ್ಥಾನ, ತುಂಗಳ ಸರಕಾರಿ ಪದವಿ ಪೂರ್ವ ಕಾಲೇಜಿನ ಯೋಗಿತಾ ಸುರೇಂದ್ರ ಯಾದವ 600ಕ್ಕೆ 592 ಅಂಕ ಪಡೆದು (ತೃತೀಯ) ಸ್ಥಾನ ಪಡೆದುಕೊಂಡಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ಜಿಲ್ಲೆಗೆ ಅತೀ ಹೆಚ್ಚು ಅಂಕ ಪಡೆದ ತೇರದಾಳ ಜೆವಿ ಮಂಡಳಿ ಪದವಿ ಪೂರ್ವ ಕಾಲೇಜಿನ ಸಂಗೀತಾ ಗಡದರ 600ಕ್ಕೆ 593 ಅಂಕ ಪಡೆದು (ಪ್ರಥಮ), ಇಳಕಲ್ಲಿನ ಗುರು ಚೈತನ್ಯ ಪದವಿ ಪೂರ್ವ ಕಾಲೇಜಿನ ವಾಣಿಶ್ರೀ ಆದಾಪೂರ 600ಕ್ಕೆ 592 ಅಂಕ ಪಡೆದು (ದ್ವೀತೀಯ) ಹಾಗೂ ಲೋಕಾಪೂರದ ಬಸವೇಶ್ವರ ಮಹಿಳಾ ಪದವಿ ಪೂರ್ವ ಕಾಲೇಜಿನ ಸೃಷ್ಟಿ ಉಪ್ಪಾರ 600ಕ್ಕೆ 589 ಅಂಕ ಪಡೆದು (ತೃತೀಯ) ಸ್ಥಾನ ಪಡೆದುಕೊಂಡಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಜಿಲ್ಲೆಗೆ ಹೆಚ್ಚು ಅಂಕ ಪಡೆದ ಬಾಗಲಕೋಟೆಯ ತುಂಗಳ ವಿಜ್ಞಾನ ಪದವಿ ಪೂರ್ವ ಕಾಲೇಜಿನ ಶ್ರೇಯಾ ಯಾವಗಲ್ 595 ಅಂಕ ಪಡೆದು (ಪ್ರಥಮ), ಬಾಗಲಕೋಟೆ ಬಸವೇಶ್ವರ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಸಾಕ್ಷಿ ಮಠಪತಿ 593 ಪಡೆದು (ದ್ವಿತೀಯ) ಹಾಗೂ ನವನಗರದ ತೇಜಸ್ ಅಂತರರಾಷ್ಟ್ರೀಯ ಪದವಿ ಪೂರ್ವ ಕಾಲೇಜಿನ ತರುಣ ಕಕರಡ್ಡಿ 593 ಅಂಕ ಪಡೆದು (ತೃತೀಯ) ಸ್ಥಾನ ಪಡೆದುಕೊಂಡಿದ್ದಾರೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪುಂಡಲೀಕ ಕಾಂಬಳೆ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಠ್ಯೇತರ ಚಟುವಟಿಕೆಗಳಿಗೆ ವಿಟಿಯು ಆದ್ಯತೆ
ಮಸ್ಟ್ 3ನೇ ಪುಟಕ್ಕೆ.... ನೀರಿನ ಹೊಂಡಕ್ಕೆ ಬಿದ್ದು ಯುವಕ ಸಾವು