ಕನ್ನಡಪ್ರಭ ವಾರ್ತೆ ಕುರುಗೋಡು
ತಾಲೂಕಿನ ದಮ್ಮೂರು ಗ್ರಾಮದಲ್ಲಿ ಧಾರವಾಡದ (ವಾಲ್ಮಿ) ಸಂಸ್ಥೆ, ಹಗರಿ ಕೃಷಿ ಮಹಾವಿದ್ಯಾಲಯದ ವತಿಯಿಂದ ತುಂಗಭದ್ರಾ ಅಚ್ಚುಕಟ್ಟು ವ್ಯಾಪ್ತಿಯ ನೀರು ಬಳಕೆದಾರರ ಸಂಘದ ಸದಸ್ಯರು ಮತ್ತು ರೈತರಿಗೆ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಬೆಳೆಗಳಿಗೆ ಅಗತ್ಯಕ್ಕಿಂತ ನೀರು, ಕ್ರಿಮಿನಾಶಕ ಮತ್ತು ರಸಗೊಬ್ಬರ ಬಳಸುವುದರಿಂದ ಭೂಮಿಯ ಫಲವತ್ತತೆ ನಾಶವಾಗುತ್ತಿದೆ.
ವಾಲ್ಮಿ ಸಂಸ್ಥೆಯ ಸಮಾಲೋಚಕ ಸುರೇಶ್ ಕುಲಕರ್ಣಿ ಮಾತನಾಡಿ, ದಮ್ಮೂರು ಗ್ರಾಮ ೯೦೦೦ಕ್ಕೂ ಅಧಿಕ ಎಕರೆ ನೀರಾವರು ಜಮೀನು ಹೊಂದಿದೆ. ನೀರು ಮತ್ತು ಮಣ್ಣು ನಿರ್ವಹಣೆ ಇಲ್ಲದೆ ಫಲವತ್ತತೆ ನಾಶವಾಗಿದೆ. ನೀರು ನಿರ್ವಹಣೆ ಮತ್ತು ಭೂ ಫಲವತ್ತತೆ ರಕ್ಷಣೆ ಕುರಿತು ವಾಲ್ಮಿ ಸಂಸ್ಥೆಯಲ್ಲಿ ತರಬೇತಿ ಪಡೆಯಿರಿ ಎಂದು ಸಲಹೆ ನೀಡಿದರು.ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಆದಿ ನಾರಾಯಣ ರೆಡ್ಡಿ ಕಾರ್ಯಾಗಾರ ಉದ್ಘಾಟಿಸಿದರು
ಸಲಹೆ:
ಮೆಣಸಿನಕಾಯಿ ಬೆಳೆಗಾರರು ಭೂಮಿ ನಿರ್ವಹಣೆ ಮಾಡದ ಪರಿಣಾಮ ಮುಟುರು ರೋಗ ಮತ್ತು ಕೀಟಗಳ ಬಾಧೆ ಎದುರಿಸಬೇಕಾಗಿದೆ. ಅಗತ್ಯಕ್ಕೆ ತಕ್ಕಷ್ಟು ನೀರು ಮತ್ತು ಕ್ರಿಮಿನಾಶಕ ರಸಗೊಬ್ಬರ ಬಳಸಬೇಕು ಎಂದು ವಾಲ್ಮಿ ಸಂಸ್ಥೆಯ ಸಮಾಲೋಚಕ ರಾಘವೇಂದ್ರ ತೆಗ್ಗಿ ಸಲಹೆ ನೀಡಿದರು.