ಕಾಡಿನಿಂದ ನಾಡಿಗೆ ಬಂದ ಪುನಗು ಬೆಕ್ಕು: ಅರಣ್ಯ ಇಲಾಖೆ ರಕ್ಷಣೆ

KannadaprabhaNewsNetwork |  
Published : Aug 18, 2024, 01:54 AM IST
24 | Kannada Prabha

ಸಾರಾಂಶ

ಪುನಗು ಬೆಕ್ಕನ್ನು ರಕ್ಷಿಸಿದ್ದೇವೆ. ತೇವಾಂಶವಿರುವ ಜಾಗದಲ್ಲಿ ಈ ಪ್ರಾಣಿ ವಾಸಿಸುತ್ತಿದ್ದು, ಇದು ಮನುಷ್ಯರಿಗೆ ತೊಂದರೆ ಕೊಡುವುದಿಲ್ಲ. ಆಹಾರ ಹುಡುಕಿಕೊಂಡು ಗ್ರಾಮಕ್ಕೆ ಆಗಮಿಸಿರಬಹುದು. ಆರೋಗ್ಯದಲ್ಲಿ ವ್ಯತ್ಯಾಸವಾಗಿ ಮೊದಲಿಗೆ ಚಿಕಿತ್ಸೆ ಕೊಡಿಸಿ ನಂತರ ವೈದ್ಯರ ಹಾಗೂ ಇಲಾಖೆ ಮೇಲಾಧಿಕಾರಿಗಳ ಸಲಹೆ ಮೇರೆಗೆ ಕಾಡಿಗೆ ಬಿಡಲಾಗುವುದು.

ಶ್ರೀರಂಗಪಟ್ಟಣ: ತಾಲೂಕಿನ ನೆಲಮನೆ ಗ್ರಾಮದೊಳಗೆ ಬಂದು ನಿತ್ರಾಣಗೊಂಡಿದ್ದ ಅಪರೂಪದ ಪುನಗು ಬೆಕ್ಕನ್ನು ಗ್ರಾಮಸ್ಥರು ಅರಣ್ಯ ಇಲಾಖೆ ಸಿಬ್ಬಂದಿಯೊಂದಿಗೆ ರಕ್ಷಿಸಿ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದಿದ್ದಾರೆ.

ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಕಾಡಿನಿಂದ ಗ್ರಾಮದೊಳಗೆ ಬಂದಿದ್ದ ಈ ಬೆಕ್ಕಿಗೆ ಗ್ರಾಮದ ಮನೋಜ್ ಹಾಗೂ ಚಂದನ್ ಹಾಲು, ನೀರು, ಆಹಾರ ನೀಡಿದ್ದಾರೆ. ಅವರ ಮನೆ ಓಣಿಯಲ್ಲೇ ಓಡಾಡಿಕೊಂಡಿದ್ದು, ಶನಿವಾರ ಮಧ್ಯಾಹ್ನದ ವೇಳೆಗೆ ಬಿಸಿಲಿನ ತಾಪ ತಾಳಲಾರದೆ ನಿತ್ರಾಣ ಸ್ಥಿತಿಯಲ್ಲಿ ರಸ್ತೆ ಬದಿಯಲ್ಲಿ ಬಿದ್ದಿದೆ. ಇದನ್ನು ಗಮನಿಸಿದ ಗ್ರಾಮಸ್ಥರು, ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಬಲ್ಲೇನಹಳ್ಳಿ ಪಶುವೈದ್ಯಕೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಅರಣ್ಯ ಇಲಾಖೆ ಸಿಬ್ಬಂದಿಗೆ ಹಸ್ತಾಂತರಿಸಿದ್ದಾರೆ.

ಅರಣ್ಯ ಇಲಾಖೆ ಸಿಬ್ಬಂದಿ ಬಸವರಾಜು ಮಾತನಾಡಿ, ಪುನಗು ಬೆಕ್ಕನ್ನು ರಕ್ಷಿಸಿದ್ದೇವೆ. ತೇವಾಂಶವಿರುವ ಜಾಗದಲ್ಲಿ ಈ ಪ್ರಾಣಿ ವಾಸಿಸುತ್ತಿದ್ದು, ಇದು ಮನುಷ್ಯರಿಗೆ ತೊಂದರೆ ಕೊಡುವುದಿಲ್ಲ. ಆಹಾರ ಹುಡುಕಿಕೊಂಡು ಗ್ರಾಮಕ್ಕೆ ಆಗಮಿಸಿರಬಹುದು. ಆರೋಗ್ಯದಲ್ಲಿ ವ್ಯತ್ಯಾಸವಾಗಿ ಮೊದಲಿಗೆ ಚಿಕಿತ್ಸೆ ಕೊಡಿಸಿ ನಂತರ ವೈದ್ಯರ ಹಾಗೂ ಇಲಾಖೆ ಮೇಲಾಧಿಕಾರಿಗಳ ಸಲಹೆ ಮೇರೆಗೆ ಕಾಡಿಗೆ ಬಿಡಲಾಗುವುದು ಎಂದು ತಿಳಿಸಿದರು. ಗ್ರಾಪಂ ಸದಸ್ಯ ಎನ್.ಸಿ ಪ್ರಭಾಕರ್, ಗ್ರಾಮಸ್ಥರಾದ ಮನೋಜ್, ಚಂದನ್, ಭರತ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''