ಕನ್ನಡಪ್ರಭ ವಾರ್ತೆ ಬಳ್ಳಾರಿ
ಉದ್ಘಾಟಿಸಿದ ಹಿರಿಯ ರಂಗಭೂಮಿ ಕಲಾವಿದೆ ಎಳ್ಳಾರ್ತಿ ಚಾಮುಂಡಿ, ಅಪರೂಪ ಕಲೆಯಾದ ತೊಗಲುಗೊಂಬೆ ಪ್ರಕಾರವನ್ನು ಮುಂದಿನ ಪೀಳಿಗೆಗೆ ಪರಿಚಯಸಬೇಕಾದ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಅತಿ ವಿರಳವಾಗಿರುವ ತೊಗಲುಗೊಂಬೆ ಕಲಾವಿದರಿಗೆ ಪ್ರೋತ್ಸಾಹ ನೀಡಬೇಕಾಗಿದೆ ಎಂದರು.
ತೊಗಲುಗೊಂಬೆ ಕಲಾ ಪ್ರಕಾರವನ್ನು ಜತನದಿಂದ ಕಾಪಾಡುವ ಉದ್ದೇಶದಿಂದ ಶ್ರೀ ಹುಲಿಕುಂಟೆರಾಯ ಕಲಾ ತಂಡ ಅನೇಕ ವರ್ಷಗಳಿಂದ ಶ್ರಮಿಸುತ್ತಿದೆ. ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ತೊಗಲುಗೊಂಬೆಗಳ ಮೂಲಕ ದೇಶದ ಮಹಾಕಾವ್ಯಗಳಾದ ರಾಮಾಯಣ ಹಾಗೂ ಮಹಾಭಾರತದ ಪ್ರಸಂಗಗಳನ್ನು ಜನರಿಗೆ ಮನವರಿಕೆ ಮಾಡಿಕೊಡುತ್ತಿದೆ. ಟಿವಿ, ಸಿನಿಮಾ ಸೇರಿದಂತೆ ವಿವಿಧ ಮಾಧ್ಯಮ ಕ್ಷೇತ್ರದಲ್ಲಾಗುತ್ತಿರುವ ಹೊಸ ಆವಿಷ್ಕಾರಗಳಿಂದ ತೊಗಲುಗೊಂಬೆ ಹಾಗೂ ಬಯಲಾಟದಂತಹ ವಿಶಿಷ್ಟ ಕಲಾ ಪ್ರಕಾರಗಳು ತೆರೆಮರೆಗೆ ಸರಿಯುವ ಆತಂಕ ಮೂಡಿದೆ. ಜಿಲ್ಲೆಯ ಕಲಾಸಕ್ತರು ಗ್ರಾಮೀಣ ಸೊಗಡಗಿನ ಕಲೆಗಳನ್ನು ಉಳಿಸಿ, ಬೆಳೆಸುವ ಕೆಲಸ ಮಾಡಬೇಕು ಎಂದರು.ಲೋಕಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬರೂ ತಪ್ಪದೆ ಮತದಾನ ಮಾಡಬೇಕು. ಈ ಮೂಲಕ ಸಂವಿಧಾನಾತ್ಮಕ ಕರ್ತವ್ಯವನ್ನು ನಿರ್ವಹಿಸಬೇಕು. ಯಾವುದೇ ನೆಪವೊಡ್ಡಿ ಹಕ್ಕು ಚಲಾವಣೆಯಿಂದ ದೂರ ಸರಿಯಬಾರದು. ದೇಶದ ಸಮಗ್ರ ಅಭಿವೃದ್ಧಿ ನೆಲೆಯಲ್ಲಿ ಮತದಾನ ಮಾಡಬೇಕು ಎಂದು ಹೇಳಿದರು.
"ತೊಗಲುಗೊಂಬೆಗಳ ಹುಟ್ಟು-ಬೆಳವಣಿಗೆ ಹಾಗೂ ಎದುರಿಸುತ್ತಿರುವ ಸವಾಲುಗಳು " ಕುರಿತು ವಿಶೇಷ ಉಪನ್ಯಾಸ ನೀಡಿದರು.
ವೀ ವಿ ಸಂಘದ ಸ್ವತಂತ್ರ ಪಪೂ ಕಾಲೇಜಿನ ಕನ್ನಡ ಉಪನ್ಯಾಸಕ ಹಾಗೂ ಲೇಖಕ ಎ.ಎಂ.ಪಿ. ವೀರೇಶಸ್ವಾಮಿ ತಿಳಿಸಿದರು. .
ವಕೀಲರಾದ ಪಿ ಮಲ್ಲಯ್ಯ, ನಿವೃತ್ತ ಪೋಲಿಸ್ ಅಧಿಕಾರಿ ಪಿ.ಬಿ. ನಾಗರಾಜ್ ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗಹಿಸಿದ್ದರು. ನಂದಿ ಪಪೂ ಕಾಲೇಜಿನ ಕನ್ನಡ ಉಪನ್ಯಾಸಕ ಹನುಮಂತರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಹುಲಿಕುಂಟೆರಾಯ ಕಲಾ ತಂಡದ ಅಧ್ಯಕ್ಷ ಕೆ.ಹೊನ್ನೂರಸ್ವಾಮಿ ಅವರು ಪ್ರಾಸ್ತಾವಿಕ ಮಾತನಾಡಿದರು. ಕವಿತಾ ಡಿ. ಕಗ್ಗಲ್, ಪುಟ್ಟರಾಜ ಡಿ. ಕಗ್ಗಲ್ ಹಾಗೂ ವೀರ ಪಂಚಾಕ್ಷರಿ ವಚನಗಾಯನ ನಡೆಸಿಕೊಟ್ಟರು. ಕೆ.ಪುರುಷೋತ್ತಮ ಕಾರ್ಯಕ್ರಮ ನಿರ್ವಹಿಸಿದರು.