)
ಪೂರ್ವ ನಗರ ಪಾಲಿಕೆಯು ಪಾಲಿಕೆಯ ಸ್ವಂತ ಸಂಪನ್ಮೂಲಗಳಿಂದ 3,354 ಕೋಟಿ ರು. ಆದಾಯ ಸಂಗ್ರಹಿಸುವ ಗುರಿ ಹೊಂದಿದೆ. ಕೇಂದ್ರ ಹಾಗೂ ರಾಜ್ಯದ ಸರ್ಕಾರದ ಅನುದಾನಗಳಿಂದ 534 ಕೋಟಿ ರು. ಆದಾಯ ನಿರೀಕ್ಷೆ.
ನೈರ್ಮಲೀಕರಣ ಮತ್ತು ಪೌರಕಾರ್ಮಿಕರ ಕ್ಷೇಮಾಭಿವೃದ್ಧಿ- ಕಸ ವಿಲೇವಾರಿ, ಸಂಗ್ರಹಣೆ ಮತ್ತು ಸ್ವಚ್ಛತಾ ಅಭಿವೃದ್ಧಿ ಕಾಮಗಾರಿಗಳಿಗೆ 2026-27ನೇ ಸಾಲಿನಲ್ಲಿ 300 ಕೋಟಿ ರು. ಮೀಸಲು. - ಪೌರಕಾರ್ಮಿಕರ ಆರೋಗ್ಯದ ದೃಷ್ಟಿಯಿಂದ ಗ್ಲೌಸ್, ಮಾಸ್ಕ್ ಮತ್ತು ಶೂಗಳಿಗಾಗಿ 1.50 ಕೋಟಿ ರು. ಅನುದಾನ.- ಸ್ವಚ್ಛತಾ ಸಿಬ್ಬಂದಿಗೆ ವಿಶ್ರಾಂತಿ ಮತ್ತು ಸೌಲಭ್ಯ ಕೇಂದ್ರಗಳ ನಿರ್ಮಾಣಕ್ಕೆ 2 ಕೋಟಿ ರು.ಸಾರ್ವಜನಿಕ ಕಾಮಗಾರಿ- ಪಾಲಿಕೆ ವ್ಯಾಪ್ತಿಯ 50 ವಾರ್ಡ್ಗಳಲ್ಲಿ ರಸ್ತೆ ಮತ್ತು ಚರಂಡಿಗಳ ಸಮಗ್ರ ನಿರ್ವಹಣೆಗಾಗಿ 112.50 ಕೋಟಿ ರು. ಮೀಸಲು.- ಸಿಲ್ಕ್ ಬೋರ್ಡ್ ಜಂಕ್ಷನ್ನಿಂದ ಕೆ.ಆರ್.ಪುರವರೆಗಿನ ಹೊರವರ್ತುಲ ರಸ್ತೆ ಅಭಿವೃದ್ಧಿಗೆ 450 ಕೋಟಿ ಮೊತ್ತದ ಯೋಜನೆ - ಮುನಿಸಿಪಲ್ ಬಾಂಡ್ ಮೂಲಕ 50 ಕೋಟಿ ವೆಚ್ಚದಲ್ಲಿ ಆಲ್ಪೈನ್ ಇಕೋ ರಸ್ತೆ, 150 ಕೋಟಿ ವೆಚ್ಚದಲ್ಲಿ ವರ್ತೂರಿನಿಂದ ಗುಂಜೂರುವರೆಗೆ ಫ್ಲೈಓವರ್ - ಸೋಡಿಯಂ ವೇಪರ್ ದೀಪಗಳನ್ನು ಎಲ್ಇಡಿ ದೀಪಗಳಾಗಿ ಪರಿವರ್ತಿಸಲು 38 ಕೋಟಿ ರು. ಮೀಸಲು.
- ಪ್ರಮುಖ ರಸ್ತೆಗಳ ಜಂಕ್ಷನ್, ಸ್ಕೈವಾಕ್ ಮತ್ತು ಪಾದಚಾರಿ ಮಾರ್ಗಗಳ ಅಭಿವೃದ್ಧಿಗೆ 50 ಕೋಟಿ ರು.- ರೈಲ್ವೆ ಮೇಲ್ಸೆತುವೆ ಮತ್ತು ಕೆಳ ಸೇತುವೆ ನಿರ್ಮಾಣಕ್ಕಾಗಿ 25 ಕೋಟಿ ರು. ಮೀಸಲು.
- 50 ವಾರ್ಡ್ಗಳ ರಸ್ತೆ ಮತ್ತು ಚರಂಡಿಗಳ ಸಮಗ್ರ ನಿರ್ವಹಣೆಗಾಗಿ 112.50 ಕೋಟಿ ರು. ಕಂದಾಯ ವಿಭಾಗ-1,500 ಕೋಟಿ ಆದಾಯ ಸಂಗ್ರಹ ಗುರಿ. ಆಸ್ತಿಗಳ ಮೌಲ್ಯಮಾಪನದಿಂದ ತೆರಿಗೆ ವ್ಯಾಪ್ತಿಯಿಂದ ಹೊರಗಿರುವ ಆಸ್ತಿ ಗುರುತಿಸಿ ತೆರಿಗೆ ವ್ಯಾಪ್ತಿಗೆ ಒಳಪಡಿಸುವ ಮೂಲಕ ಗುರಿ ಸಾಧನೆ.
- ಜಿ.ಐ.ಎಸ್ ಆಧಾರಿತ ಆಸ್ತಿ ತೆರಿಗೆ ವ್ಯವಸ್ಥೆಯನ್ನು ಬೆಸ್ಕಾಂ,ಬಿಡಬ್ಲ್ಯುಎಸ್ಎಸ್ಬಿ ಸಂಸ್ಥೆಗಳೊಂದಿಗೆ ಏಕೀಕರಿಸಿ, ತೆರಿಗೆ ಪರಿಷ್ಕರಣೆಯಿಂದ ವರ್ಷಕ್ಕೆ 150 ಕೋಟಿ ರು. ಹೆಚ್ಚುವರಿ ಆದಾಯ ನಿರೀಕ್ಷೆ.
- ಸುಮಾರು 4.50 ಲಕ್ಷ ಕಾಗದದ ಖಾತೆಗಳ ಡಿಜಿಟಲೀಕರಣದಿಂದ ಇ-ಖಾತಾ ವ್ಯವಸ್ಥೆ. 1.30 ಲಕ್ಷ ಇ-ಖಾತೆಗಳು ವಿತರಣೆ. ಬಾಕಿ 3.20 ಲಕ್ಷ ಇ-ಖಾತೆಜಾಹೀರಾತು ವಿಭಾಗ
- ಹೊಸ ಸ್ಕೈವಾಕ್ ಅಭಿವೃದ್ಧಿಯಿಂದ ನೆಲ ಬಾಡಿಗೆ, ಜಾಹೀರಾತು ಶುಲ್ಕದ ರೂಪದಲ್ಲಿ 15 ಕೋಟಿ ಆದಾಯ ಸಂಗ್ರಹ ಗುರಿ.
- ಜಾಹೀರಾತು ಏಜೆನ್ಸಿ ಪರವಾನಗಿ ಮೂಲಕ 2.75 ಕೋಟಿ ರು. ಆದಾಯ ಸಂಗ್ರಹ ನಿರೀಕ್ಷೆ.ನಗರ ಯೋಜನೆ- ಕಟ್ಟಡ ನಕ್ಷೆ ಮಂಜೂರಾತಿ, ಪ್ಲಿಂತ್ ಪ್ರಮಾಣಪತ್ರ, ಸ್ವಾಧೀನಾನುಭವ ಪ್ರಮಾಣಪತ್ರ, ವಿವಿಧ ಶುಲ್ಕಗಳಿಂದ 982 ಕೋಟಿ ಆದಾಯ
ಆಡಳಿತ- ಪಾರದರ್ಶಕ ಆಡಳಿತಕ್ಕಾಗಿ ಬಿಇಸಿಸಿ ಸಾರ್ವಜನಿಕ ಡ್ಯಾಶ್ಬೋರ್ಡ್ ರಚನೆ. ವಾರ್ಡ್ ಮಟ್ಟದ ಯೋಜನೆ ಮಾಹಿತಿ ನಾಗರಿಕರಿಗೆ ಲಭ್ಯ.- ಪಾಲಿಕೆಯ ಸ್ವಂತ ಕಟ್ಟಡ ನಿರ್ಮಾಣಕ್ಕಾಗಿ ಪ್ರಥಮ ಹಂತದಲ್ಲಿ 25 ಕೋಟಿ ರು.
- ಆಡಳಿತ ಚುರುಕುಗೊಳಿಸುವ ತಂತ್ರಾಂಶ ಖರೀದಿಗೆ 6 ಕೋಟಿ, ಕಾನೂನು ವ್ಯವಹಾರಗಳ ನಿರ್ವಹಣೆಗೆ ₹4.50 ಕೋಟಿ ಮೀಸಲು.ಬೃಹತ್ ನೀರುಗಾಲುವೆ (ರಾಜಕಾಲುವೆ) ಅಭಿವೃದ್ಧಿ- ಮಹದೇವಪುರ ವಲಯದ 150 ಕಿ.ಮೀ ಕಾಲುವೆಗಳ ಪೈಕಿ 72 ಕಿ.ಮೀ ಮತ್ತು ಕೆ.ಆರ್.ಪುರ ವಲಯದ 75 ಕಿ.ಮೀ ಪೈಕಿ 52 ಕಿ.ಮೀ ಉದ್ದದ ಕಾಂಕ್ರೀಟ್ ತಡೆಗೋಡೆ ನಿರ್ಮಾಣ ಪೂರ್ಣ.- ಒಟ್ಟು 58 ಪ್ರವಾಹ ಪೀಡಿತ ಪ್ರದೇಶಗಳ ಪೈಕಿ 38 ಪ್ರದೇಶಗಳಲ್ಲಿ ಸಮಸ್ಯೆ ಪರಿಹಾರ. ಉಳಿದ 20 ಪ್ರದೇಶಗಳನ್ನು ಶೀಘ್ರದಲ್ಲೇ ಪ್ರವಾಹ ಮುಕ್ತಗೊಳಿಸುವ ಗುರಿ.- ಪಣತ್ತೂರು ರಾಜಕಾಲುವೆ ನಿರ್ಮಿಸುವ ಮೂಲಕ ಪ್ರವಾಹ ಸಮಸ್ಯೆ ಪರಿಹಾರ. ಗೆದ್ದಲಹಳ್ಳಿ ರೈಲ್ವೆ ವೆಂಟ್ ಕಾಮಗಾರಿಯನ್ನು ಶೀಘ್ರವಾಗಿ ಮುಕ್ತಾಯ.
ತೋಟಗಾರಿಕೆ ಮತ್ತು ಹಸಿರು ಬೆಂಗಳೂರು- ಉದ್ಯಾನವನ ಕಿರುಚಿತ್ರ, ಧಾರಾವಾಹಿ, ಸಿನಿಮಾ ಚಿತ್ರೀಕರಣಕ್ಕೆ ಬಾಡಿಗೆ ಮೂಲಕ ಬರುವ ಆದಾಯ ಅವುಗಳ ಅಭಿವೃದ್ಧಿಗೆ ಬಳಕೆ
- ಮಹದೇವಪುರ ಮತ್ತು ಕೆ.ಆರ್.ಪುರ ವಲಯದ 54 ಉದ್ಯಾನವನ ನಿರ್ವಹಣೆಗೆ 10 ಕೋಟಿ, ಅಭಿವೃದ್ಧಿಗೆ 17.50 ಕೋಟಿ ಅನುದಾನ.ಸಾರ್ವಜನಿಕ ಆರೋಗ್ಯ ಮತ್ತು ನೈರ್ಮಲ್ಯ- ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆಯಡಿ 15 ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು 10 ನಮ್ಮ ಕ್ಲಿನಿಕ್ ಸ್ಥಾಪನೆಗೆ 35 ಕೋಟಿ ಮೀಸಲು.- ಇಂದಿರಾ ಕ್ಯಾಂಟೀನ್ಗಳ ವಾರ್ಷಿಕ ನಿರ್ವಹಣೆಗೆ 5 ಕೋಟಿ ರು.
ಪಶುಪಾಲನೆ ಮತ್ತು ಪ್ರಾಣಿ ಕಲ್ಯಾಣ- ಬೀದಿನಾಯಿಗಳ ಆಶ್ರಯ ಕೇಂದ್ರ, ಆಹಾರ ಮತ್ತು ನಿರ್ವಹಣೆಗೆ 12 ಕೋಟಿ ರು.,ಸಂತಾನಹರಣ ಚಿಕಿತ್ಸೆಗಾಗಿ 6 ಕೋಟಿ ಮೀಸಲು.- ಪ್ರಾಣಿಗಳ ಚಿಕಿತ್ಸೆಗಾಗಿ 2 ಕೋಟಿ ವೆಚ್ಚದಲ್ಲಿ 2 ಪಶು ಆಸ್ಪತ್ರೆ, 50 ಲಕ್ಷ ರು. ವೆಚ್ಚದಲ್ಲಿ ಒಂದು ಸಂಚಾರಿ ಪಶುಚಿಕಿತ್ಸಾ ವಾಹನ ಆರಂಭ.