ಪುತ್ತೂರು: ಪುತ್ತೂರು ಕೋ-ಆಪರೇಟಿವ್ ಟೌನ್ ಬ್ಯಾಂಕ್ನಲ್ಲಿ ೭೪,೮೬,೭೦,೬೬೫ ಕೋಟಿ ರು. ಸದಸ್ಯರ ಪಾಲು ಬಂಡವಾಳವಿದ್ದು, ವರ್ಷಾಂತ್ಯದಲ್ಲಿ ೮೮,೩೦,೬೯,೭೩೫ ಕೋಟಿ ರು. ಠೇವಣಿ ಇದೆ.
ಮೊಳಹಳ್ಳಿ ಶಿವರಾಯರು ಸ್ಥಾಪಿಸಿದ ಶತಮಾನ ಕಂಡ ‘ದಿ ಪುತ್ತೂರು ಕೋ-ಆಪರೇಟಿವ್ ಟೌನ್ ಬ್ಯಾಂಕ್ ಲಿಮಿಟೆಡ್’ನ ೨೦೨೫-೨೬ನೇ ಸಾಲಿನ ೧೧೭ನೇ ವರ್ಷದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಬಾರಿಯೂ ೧೫೦ ಕೋಟಿ ರು. ವಾರ್ಷಿಕ ವ್ಯವಹಾರ ಮತ್ತು ೧,೩೨,೩೩,೬೩೬.೪೦ ಕೋಟಿ ರು. ಲಾಭ ಗಳಿಸುವ ಮೂಲಕ ದಾಖಲೆಯ ಲಾಭ ಗಳಿಸಿದೆ. ವರದಿ ವರ್ಷದ ಅಂತ್ಯಕ್ಕೆ ವಾಯಿದೆ ದಾಟಿದ ಸಾಲಗಳು ೫೫,೨೧,೩೦೧ ರು. ಆಗಿದ್ದು, ಸಾಲ ಬಾಕಿ ಮಾಡಿಕೊಂಡಿರುವ ಸದಸ್ಯರು ಕೂಡಲೇ ಸಾಲವನ್ನು ಮರುಪಾವತಿಸುವಂತೆ ವಿನಂತಿಸಿದರು. ಸದಸ್ಯರಿಗೆ ಈ ಬಾರಿ ಶೇ.೧೨ ಡಿವಿಡೆಂಡ್ ಘೋಷಿಸಿದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ. ಶೇಖರ್ ಶೆಟ್ಟಿ ೨೦೨೫-೨೬ನೇ ಸಾಲಿನ ವರದಿ, ಅಂಕಿ ಅಂಶಗಳನ್ನು ಮಂಡಿಸಿದರು.ಹಿರಿಯ ಸದಸ್ಯರಿಗೆ ಸನ್ಮಾನ: ಬ್ಯಾಂಕ್ನ ಹಿರಿಯ ಸದಸ್ಯರಾದ ಪಡೀಲ್ ನಿವಾಸಿ ರಿಕ್ಷಾ ಚಾಲಕ ವಾಲ್ಟರ್ ಡಿಸೋಜ, ಜೋನ್ ಪಾಯಿಸ್, ಬೆಳ್ಳಾರೆ ನಿವಾಸಿ ನಿವೃತ್ತ ಚಾಲಕ ಕಮಲಾಕ್ಷ ಬಲ್ಯಾಯ, ಜಗದೀಶ್ ಶೆಣೈ ಎಂ., ಬೊಳುವಾರು ನಿವಾಸಿ ಗಣಪತಿ ಪ್ರಭು, ಹಿರಿಯ ನ್ಯಾಯವಾದಿ ಗೋಪಾಲಕೃಷ್ಣ ಎಂ, ಉದ್ಯಮಿ ಅಬೂಬಕ್ಕರ್ ಪಿ., ಕುರಿಯ ಅಮ್ಮುಂಜೆ ಸಂಜೀವ ಪೂಜಾರಿ, ವೀರಕಂಬ ನಿವಾಸಿ ಸುರೇಶ್ ಎಂ. ಅವರನ್ನು ಬ್ಯಾಂಕ್ ನ ಮಹಾಸಭೆಯಲ್ಲಿ ಸನ್ಮಾನಿಸಲಾಯಿತು. ಟೌನ್ಬ್ಯಾಂಕ್ ಸಂಸ್ಥಾಪಕ ಮೊಳಹಳ್ಳಿ ಶಿವರಾಯರ ನೆನಪಿಗಾಗಿ ಬ್ಯಾಂಕ್ ವತಿಯಿಂದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.