ಗಜೇಂದ್ರಗಡ: ವಿದ್ಯಾರ್ಥಿಗಳು ಪಠ್ಯಜ್ಞಾನದ ಜತೆಗೆ ಇತರೆ ಸಾಮಾನ್ಯ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗುವುದರಿಂದ ಆರೋಗ್ಯ ಸದೃಢವಾಗುತ್ತದೆ. ಇದರಿಂದ ವ್ಯಕ್ತಿತ್ವ ವಿಕಸನ ಹೊಂದಲು ಸಹಕಾರಿಯಾಗುತ್ತದೆ ಎಂದು ಮುಖಂಡ ಅಶೋಕ ವನ್ನಾಲ ತಿಳಿಸಿದರು.
ಸ್ಪರ್ಧೆಯಲ್ಲಿ ಸೋಲು ಗೆಲುವು- ಸಾಮಾನ್ಯ. ಅವುಗಳನ್ನು ಸ್ಪರ್ಧಾತ್ಮಕವಾಗಿ ತೆಗೆದುಕೊಂಡಾಗ ಇನ್ನಷ್ಟು ಜಾಣರಾಗುತ್ತೀರಿ ಎಂದರು.ಜಿಲ್ಲೆಯ ಬೇರೆ ಬೇರೆ ಶಾಲೆಯಿಂದ ೩೩ ತಂಡಗಳು ಭಾಗವಹಿಸಿದ್ದವು. ಪ್ರಥಮ ಬಹುಮಾನ ಗಜೇಂದ್ರಗಡ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ವೈಷ್ಣವಿ ಕುಲಕರ್ಣಿ, ಪದ್ಮಾವತಿ ಶಾಬಾದಿ, ದ್ವಿತೀಯ ಇಟಗಿಯ ಸರ್ಕಾರಿ ಆದರ್ಶ ಶಾಲೆಯ ವೀರೇಶ ಜೂಚನಿ, ರೋಹಾನ್ ಮುಜಾವರ್, ತೃತೀಯ ಗಜೇಂದ್ರಗಡದ ವಿ.ಟಿ. ರಾಯಬಾಗಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಸೌಮ್ಯ ಸಾರಂಗಮಠ, ಸ್ಫೂರ್ತಿ ಇಂಜನಿ ನಗದು ಬಹುಮಾನ ಪಡೆದರು.
ಈ ವೇಳೆ ಲಕ್ಷ್ಮಣ ಗಡಗಿ, ಶ್ರೀಕಂಠ ಕವಡಿಮಟ್ಟಿ, ಪ್ರಶಾಂತ ನೆಲ್ಲೂರ, ಕಾಲೇಶ ವನ್ನಾಲ, ಗೀತಾ ಬನಿಕಲ್, ಮೋಹನ ತಟ್ಟಿ, ಮಾರುತಿ ಬುಟ್ಟಾ, ಗಿರೀಶ ಮಾದಗುಂಡಿ, ಶಿವಾನಂದ ಕವಡಿಮಟ್ಟಿ, ಈರಣ್ಣ ಮಾಳಗಿ, ಬಸವರಾಜ ಅಣ್ಣಿಗೇರಿ, ಬಸವರಾಜ ಕೆಂಬಾವಿ, ಅರವಿಂದ ಕವಡಿಮಟ್ಟಿ, ದೇವಣ್ಣ ಬನಿಕಲ್, ಮುದಕಪ್ಪ ಬುಟ್ಟಾ, ಚಂದಾಲಿಂಗಪ್ಪ ಬೀಳಗಿ, ಬಸವರಾಜ ಮಾಳಗಿ, ಮಂಜುನಾಥ ಸಂಕನೂರ, ವಿರೂಪಾಕ್ಷ ಅಳವಂಡಿ, ಕಳಕೇಶ ಕುದರಿ ಇತರರು ಇದ್ದರು.