ರೈಲ್ವೆ ಆರ್‌ಪಿಎಫ್ ಕಾರ್ಯಾಚರಣೆ: 33 ಮಕ್ಕಳು ರಕ್ಷಣೆ

KannadaprabhaNewsNetwork |  
Published : Sep 10, 2026, 01:45 AM IST
ಆಪರೇಷನ್ ನಾರ್ಕೊದಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸಿದವರನ್ನು ಬಂಧಿಸಿರುವುದು. | Kannada Prabha

ಸಾರಾಂಶ

ನೈಋತ್ಯ ರೈಲ್ವೆ ವ್ಯಾಪ್ತಿಯಲ್ಲಿ ಪ್ರಯಾಣಿಕರ ಸುರಕ್ಷತೆ ಹಾಗೂ ಅಕ್ರಮ ಚಟುವಟಿಕೆಗಳ ನಿಯಂತ್ರಣಕ್ಕೆ ಆರ್‌ಪಿಎಫ್ ಕೈಗೊಂಡ ವಿವಿಧ ಕಾರ್ಯಾಚರಣೆಗಳು ಫಲ ನೀಡಿದೆ. ಆಗಸ್ಟ್‌ನಲ್ಲಿ "ನನ್ಹೆ ಫರಿಸ್ತೇ " ಕಾರ್ಯಾಚರಣೆಯಡಿ 27 ಬಾಲಕರು ಹಾಗೂ 6 ಬಾಲಕಿಯರು ಸೇರಿದಂತೆ 33 ಮಕ್ಕಳನ್ನು ರಕ್ಷಿಸಲಾಗಿದೆ.

ಹುಬ್ಬಳ್ಳಿ:

ನೈಋತ್ಯ ರೈಲ್ವೆ ವ್ಯಾಪ್ತಿಯಲ್ಲಿ ಪ್ರಯಾಣಿಕರ ಸುರಕ್ಷತೆ ಹಾಗೂ ಅಕ್ರಮ ಚಟುವಟಿಕೆಗಳ ನಿಯಂತ್ರಣಕ್ಕೆ ಆರ್‌ಪಿಎಫ್ ಕೈಗೊಂಡ ವಿವಿಧ ಕಾರ್ಯಾಚರಣೆಗಳು ಫಲ ನೀಡಿದೆ. ಆಗಸ್ಟ್‌ನಲ್ಲಿ "ನನ್ಹೆ ಫರಿಸ್ತೇ " ಕಾರ್ಯಾಚರಣೆಯಡಿ 27 ಬಾಲಕರು ಹಾಗೂ 6 ಬಾಲಕಿಯರು ಸೇರಿದಂತೆ 33 ಮಕ್ಕಳನ್ನು ರಕ್ಷಿಸಲಾಗಿದೆ.

ಈ ಕುರಿತು ಪ್ರಕಟಣೆ ನೀಡಿರುವ ಇಲಾಖೆಯು, ಕುಟುಂಬದಿಂದ ಬೇರ್ಪಟ್ಟಿದ್ದ ಮಕ್ಕಳನ್ನು ರಕ್ಷಿಸಿ, ಎನ್‌ಜಿಒ ಹಾಗೂ ಪೊಲೀಸರಿಗೆ ಹಸ್ತಾಂತರಿಸುವ ಮೂಲಕ ಅವರ ಕುಟುಂಬಗಳೊಂದಿಗೆ ಮರು ಸೇರ್ಪಡೆಗೆ ಆರ್‌ಪಿಎಫ್ ಸಿಬ್ಬಂದಿ ನೆರವಾಗಿದ್ದಾರೆ. "ಆಪರೇಷನ್ ಡಿಗ್ನಿಟಿ " ಅಡಿ ಇಬ್ಬರು ವೃದ್ಧರನ್ನು ರಕ್ಷಿಸಿ ಕುಟುಂಬ ಅಥವಾ ಎನ್‌ಜಿಒಗಳಿಗೆ ಒಪ್ಪಿಸಲಾಗಿದೆ.

ಮಹಿಳಾ ಪ್ರಯಾಣಿಕರ ಸುರಕ್ಷತೆಗಾಗಿ "ಮೇರಿ ಸಹೇಲಿ " ಉಪಕ್ರಮದಡಿ ಒಂಟಿಯಾಗಿ ಪ್ರಯಾಣಿಸುವ ಮಹಿಳೆಯರ ಆಸನ ಹಾಗೂ ಜನನ ವಿವರಗಳನ್ನು ಸಂಬಂಧಿತ ನಿಲ್ದಾಣಗಳ ಆರ್‌ಪಿಎಫ್ ತಂಡಗಳಿಗೆ ಹಂಚಿಕೊಂಡು ನಿರಂತರ ಮೇಲ್ವಿಚಾರಣೆ ನಡೆಸಲಾಗುತ್ತಿದೆ. ಪ್ರಸ್ತುತ 32 ರೈಲುಗಳು ಇದರ ವ್ಯಾಪ್ತಿಯಲ್ಲಿವೆ.

ಟಿಕೆಟ್‌ಗಳ ಕಾಳಸಂತೆ ತಡೆಯಲು "ಉಪಲಬ್ಧ್ " ಕಾರ್ಯಾಚರಣೆ ನಡೆಸಿ, ರೈಲ್ವೆ ಕಾಯ್ದೆಯ ಸೆಕ್ಷನ್ 143ರಡಿ 12 ಟಿಕೆಟ್ ದಲ್ಲಾಳಿಗಳನ್ನು ಬಂಧಿಸಲಾಗಿದೆ. ₹53,001 ಮೌಲ್ಯದ 18 ಬಳಕೆಯಾಗದ ಹಾಗೂ ₹2.32 ಲಕ್ಷ ಮೌಲ್ಯದ 56 ಬಳಸಿದ ಟಿಕೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

"ಆಪರೇಷನ್ ಸತರ್ಕ್ " ಅಡಿ 8 ಮದ್ಯ ಪ್ರಕರಣಗಳಲ್ಲಿ 89 ಲೀಟರ್ ಮದ್ಯ ಹಾಗೂ ₹55,162 ಮೌಲ್ಯದ 154 ಬಾಟಲಿಗಳನ್ನು ವಶಪಡಿಸಿಕೊಳ್ಳಲಾಗಿದೆ. "ಆಪರೇಷನ್ ನಾರ್ಕೊ "ದಲ್ಲಿ 8 ಪ್ರಕರಣ ಪತ್ತೆ ಹಚ್ಚಿ 127.5 ಕೆಜಿ ಗಾಂಜಾ ಸೇರಿದಂತೆ ₹12.5 ಕೋಟಿ ಮೌಲ್ಯದ ಮಾದಕ ವಸ್ತು ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣಗಳಲ್ಲಿ 6 ಆರೋಪಿಗಳನ್ನು ಬಂಧಿಸಲಾಗಿದೆ.

ಇನ್ನು 67 ಪ್ರಕರಣಗಳಲ್ಲಿ ಪ್ರಯಾಣಿಕರು ಕಳೆದುಕೊಂಡ ಲ್ಯಾಪ್‌ಟಾಪ್, ಮೊಬೈಲ್, ಆಭರಣ ಸೇರಿದಂತೆ ₹66.41 ಲಕ್ಷ ಮೌಲ್ಯದ ವಸ್ತುಗಳನ್ನು ಪತ್ತೆಹಚ್ಚಿ ವಾರಸುದಾರರಿಗೆ ಹಿಂತಿರುಗಿಸಲಾಗಿದೆ. ರೈಲ್ವೆ ಆಸ್ತಿ ಕಳವು ಸಂಬಂಧ 14 ಪ್ರಕರಣ ದಾಖಲಿಸಿ 24 ಮಂದಿಯನ್ನು ಬಂಧಿಸಲಾಗಿದ್ದು, ₹2.28 ಲಕ್ಷ ಮೌಲ್ಯದ ರೈಲ್ವೆ ಆಸ್ತಿಯನ್ನು ವಶಪಡಿಸಿಕೊಳ್ಳಲಾಗಿದೆ.

ನೈಋತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಪಿ. ಅನಂತ್ ಅವರು ಆರ್‌ಪಿಎಫ್ ಸಿಬ್ಬಂದಿಯ ಸೇವೆಯನ್ನು ಶ್ಲಾಘಿಸಿ, ಪ್ರಯಾಣಿಕರ ಸುರಕ್ಷತೆ ಹಾಗೂ ಯೋಗಕ್ಷೇಮ ಕಾಪಾಡುವುದು ರೈಲ್ವೆಯ ಪ್ರಮುಖ ಜವಾಬ್ದಾರಿ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅನುಮತಿ ಇಲ್ಲದೆ ನಡೆಸಿದ್ದ ಜಾನಪದ ವಿವಿ 8 ಪಿಜಿ ಕೋರ್ಸ್ ರದ್ದು!
ಕಬ್ಬಿಗೆ ಲಾಭದಾಯಕ ದರ ನಿಗದಿಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ: ರುದ್ರಪ್ಪ ಲಮಾಣಿ