ಚಳ್ಳಕೆರೆ: ದೇಶದ ಪ್ರಧಾನಮಂತ್ರಿಯಾಗಿ ಆಡಳಿತ ನಡೆಸುವ ಸಂದರ್ಭದಲ್ಲಿ ತಮಿಳುನಾಡಿನ ಪೆರಂಬೂರಿನಲ್ಲಿ ಮಾನವಬಾಂಬ್ ಸಿಡಿತಕ್ಕೆ ಬಲಿಯಾದ ಮಾಜಿ ಪ್ರಧಾನಮಂತ್ರಿ ರಾಜೀವ್ಗಾಂಧಿಯವರ ಆದರ್ಶಗಳು ನಮ್ಮೆಲ್ಲರಿಗೂ ಶ್ರೀರಕ್ಷೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಟಿ.ಪ್ರಭುದೇವ್ ಹೇಳಿದರು.
ಮಾಜಿ ಪ್ರಧಾನಮಂತ್ರಿ ರಾಜೀವಗಾಂಧಿ ತನ್ನ ತಾಯಿ ದಿ.ಇಂದಿರಾಗಾಂಧಿಯವರಂತೆ ದೇಶದ ಹಿತಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗಮಾಡಿದ್ದಾರೆ. ಅವರ ತ್ಯಾಗದ ಪ್ರತಿಫಲವಾಗಿ ಇಂದು ಲಕ್ಷಾಂತರ ಕಾರ್ಯಕರ್ತರು ಅವರ ಜನ್ಮದಿನೋತ್ಸವ ಕಾರ್ಯಕ್ರಮವನ್ನು ಆಚರಿಸುತ್ತಿದ್ದಾರೆ ಎಂದರು.
ರಾಜ್ಯದ ಹಿಂದುಳಿದ ವರ್ಗದ ಜನರಿಗೆ ಕಾಯಕಲ್ಪ ನೀಡಿದ ಕೀರ್ತಿ ದಿ.ಡಿ.ದೇವರಾಜ ಅರಸು ಅರವರದ್ದು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ಎಚ್.ಎಸ್.ಸೈಯದ್, ನಗರಸಭೆ ಅಧ್ಯಕ್ಷೆ ಶಿಲ್ಪಮುರುಳಿ, ಉಪಾಧ್ಯಕ್ಷೆ ಕವಿತಾಬೋರಯ್ಯ, ಎಂ.ಜೆ.ರಾಘವೇಂದ್ರ, ನಾಮಿನಿ ಸದಸ್ಯರಾದ ನೇತಾಜಿಪ್ರಸನ್ನ, ವೀರಭದ್ರಪ್ಪ, ಅನ್ವರ್ಮಾಸ್ಟರ್, ಪರಶುರಾಮಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಟಿ.ಶಶಿಧರ, ಸೇವಾದಳ ಅಧ್ಯಕ್ಷ ತಿಪ್ಪೇಸ್ವಾಮಿ, ಸೈಪುಲ್ಲಾ, ಮೂಡಲಗಿರಿಯಪ್ಪ, ಮಂಜುನಾಥ, ಬಷೀರ್, ಬೋರಯ್ಯ, ಗಿರಿಯಪ್ಪ, ಶ್ರೀನಿವಾಸ್ಮೂರ್ತಿ, ಪುರುಷೋತ್ತಮನಾಯ್ಕ ಮತ್ತಿತರರಿದ್ದರು.