ಕನ್ನಡಪ್ರಭ ವಾರ್ತೆ ಬೇಲೂರು
ನೂತನ ಅಧ್ಯಕ್ಷ ಪಿ ಸಿ ರಾಜು ಮಾತನಾಡಿ, ನನ್ನನ್ನು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಿದ ಎಲ್ಲಾ ನಿರ್ದೇಶಕರು ಹಾಗೂ ಗ್ರಾಮಸ್ಥರಿಗೆ ಗ್ರಾಮ ಪಂಚಾಯತಿ ಸದಸ್ಯರಿಗೆ ಅಭಿನಂದನೆ ತಿಳಿಸುತ್ತೇನೆ. ನಮ್ಮ ಊರಿನ ಹಾಲಿನ ಡೈರಿ ಉತ್ತಮ ರೀತಿಯಲ್ಲಿ ನಡೆದುಕೊಂಡು ಹೋಗುತ್ತಿದೆ. ಮುಂದಿನ ದಿನಗಳಲ್ಲಿ ನಿರ್ದೇಶಕರು ಹಾಗೂ ಗ್ರಾಮಸ್ಥರ ಸಲಹೆ ಸಹಕಾರವನ್ನು ತೆಗೆದುಕೊಂಡು ನೂತನ ಹಾಲಿನ ಡೇರಿಯ ಉಳಿದ ಕಟ್ಟಡದ ಕಾಮಗಾರಿ ಪೂರ್ಣಗೊಳಿಸುವುದರ ಬಗ್ಗೆ ಹಾಲಿನ ಡೇರಿಯನ್ನು ಉತ್ತಮವಾಗಿ ನಡೆಸಿಕೊಂಡು ಹೋಗುತ್ತೇವೆ ಎಂದು ತಿಳಿಸಿದರು.
ನಿರ್ದೇಶಕರಾದ ಚಂದ್ರೇಗೌಡ, ಮಹೇಶ್,ನಾಗೇಶ್, ಹಾಲಪ್ಪಯ್ಯ,ಶಾಂತಣ್ಣ, ಯತೀಶ್,ರುದ್ರೇಶ್, ದೊರೆಸ್ವಾಮಿ, ತೀರ್ಥ ಬೋಜೇಶ್ ಯಶೋಧ, ಹಾಲಿನ ಡೇರಿಯ ಕಾರ್ಯದರ್ಶಿ ದಿಲೀಪ್, ಗ್ರಾ.ಪಂ. ಸದಸ್ಯ ಉದಯ್ ಕುಮಾರ್, ಮಾಜಿ ಸದಸ್ಯ ಹರೀಶ್ ಮಾಜಿ ನಿರ್ದೇಶಕರಾದ ರಾಜೇಗೌಡ, ನಿಂಗರಾಜು ಹಾಗೂ ಗ್ರಾಮಸ್ಥರು ಹಾಜರಿದ್ದರು.