ಸಂಘಟನಾ ಶಕ್ತಿ ಸೃಷ್ಟಿಗೆ ರಾಜ್ಯೋತ್ಸವ ಕಾರಣ

KannadaprabhaNewsNetwork |  
Published : Nov 19, 2025, 01:00 AM IST
18ಡಿಡಬ್ಲೂಡಿ6ಗುರುಕೃಪ ನಾಗರಿಕರ ಅಭಿವೃದ್ಧಿ ಸಂಘವು ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಉದ್ಘಾಟನೆ.  | Kannada Prabha

ಸಾರಾಂಶ

ಸಾರ್ವಜನಿಕ ಸಂಘಟನಾ ಶಕ್ತಿಯು ಸುತ್ತಲಿನ ಪ್ರದೇಶ, ರಾಜ್ಯ ಹಾಗೂ ದೇಶದ ಸದೃಢತೆಗೆ ಪ್ರಗತಿಗೆ ಸಹಕಾರಿಯಾಗಿದೆ. ಸಂಘಟನೆಯಲ್ಲಿ ರಚನಾತ್ಮಕವಾಗಿ ಭಾಗವಹಿಸಿ ನಿರಂತರ ಶಿಸ್ತು ರೂಪಿಸಿಕೊಂಡು ಬಂದಲ್ಲಿ ವ್ಯಕ್ತಿತ್ವ ಬದಲಾವಣೆಯೊಂದಿಗೆ ದೇಶದ ಅಭಿವೃದ್ಧಿಗೆ ಪೂರಕವಾಗಿ ಸಹಾಯ ಮಾಡಲಿದೆ.

ಧಾರವಾಡ:

ಕನ್ನಡ ರಾಜ್ಯೋತ್ಸವ ಆಚರಣೆ ನಾಡು-ನುಡಿಗೆ ನಮನ ಸಲ್ಲಿಸುವುದಲ್ಲದೆ ಸಂಘಟನಾತ್ಮಕ ಶಕ್ತಿ ಸೃಷ್ಟಿಗೆ ಕಾರಣವಾಗಿದೆ ಎಂದು ಟಾಟಾ ಹಿಟಾಚಿ ಕನ್ಸ್ಟ್ರಕ್ಷನ್ ಉಪಾಧ್ಯಕ್ಷ ಗೋವಿಂದರಾಜ್ ಕುಲಕರ್ಣಿ ಹೇಳಿದರು.

ಇಲ್ಲಿಯ ಗುರುಕೃಪ ನಾಗರಿಕರ ಅಭಿವೃದ್ಧಿ ಸಂಘವು ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಮಾತನಾಡಿದ ಅವರು, ಸಾರ್ವಜನಿಕ ಸಂಘಟನಾ ಶಕ್ತಿಯು ಸುತ್ತಲಿನ ಪ್ರದೇಶ, ರಾಜ್ಯ ಹಾಗೂ ದೇಶದ ಸದೃಢತೆಗೆ ಪ್ರಗತಿಗೆ ಸಹಕಾರಿಯಾಗಿದೆ. ಸಂಘಟನೆಯಲ್ಲಿ ರಚನಾತ್ಮಕವಾಗಿ ಭಾಗವಹಿಸಿ ನಿರಂತರ ಶಿಸ್ತು ರೂಪಿಸಿಕೊಂಡು ಬಂದಲ್ಲಿ ವ್ಯಕ್ತಿತ್ವ ಬದಲಾವಣೆಯೊಂದಿಗೆ ದೇಶದ ಅಭಿವೃದ್ಧಿಗೆ ಪೂರಕವಾಗಿ ಸಹಾಯ ಮಾಡಲಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಎಂ.ಎಂ. ಹಿರೇಮಠ ಮಾತನಾಡಿದರು. ಉದ್ಘಾಟಕರಾಗಿ ಪ್ರವೀಣ ಗುರಿಕಾರ, ಅತಿಥಿಗಳಾಗಿ ನಟಿ ಚಿರಸುಮಾ ಎಂ.ಡಿ, ಪತ್ರಕರ್ತ ನಿಖೀಲ ಬಿರಾದಾರ ಮತ್ತು ಕವಿವಿ ಸಂಗೀತ ಉಪನ್ಯಾಸಕ ಡಾ. ಪರಶುರಾಮ ಕಟ್ಟಿಸಂಗಾವಿ ಭಾಗವಹಿಸಿದ್ದರು. ವಿವಿಧ ಕಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು. ಸಂಜಯ ಖಥಗಲ್ಲಿ, ಶಶಿಕಾಂತ್ ಹೊಂಬಾಳ, ವಿನೋದ ಜಾಂಬೋಟಕ, ಅರುಣ ಸಿದ್ದಣ್ಣವರ, ಮಹೇಶ ಹಿರೇಮಠ, ಪ್ರವೀಣ ಪಾಟೀಲ, ಅಬ್ದುಲಸಾಬ್ ಭಾಗವಾನ, ಮೈತ್ರಾದೇವಿ ವಸ್ತ್ರದ, ಕರುಣಾ ಜಾಂಬೋಟಕ, ಗುರುಪ್ರಸಾದ ದೇಸಾಯಿ, ಮಲ್ಲಿಕಾರ್ಜುನ ಹುಕ್ಕೇರಿ, ಸೋಮಲಿಂಗ ಹಲಗತ್ತಿ, ಸುರೇಶ ಚಿಂಚಲಿ, ಮಂಜುಳಾ ಸೂಸಿಮಠ, ಶಿವಕುಮಾರ ದೊಡಮನಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರತಿಯೊಬ್ಬರೂ ಗ್ರಾಹಕರ ಹಕ್ಕುಗಳ ಮಹತ್ವ ತಿಳಿದುಕೊಳ್ಳಲಿ: ಅಪರ ಜಿಲ್ಲಾಧಿಕಾರಿ
ಸ್ಮಶಾನದ ಅಭಿವೃದ್ಧಿ ಕಾಮಗಾರಿ ತ್ವರಿತಗೊಳಿಸಲು ಆಗ್ರಹ